Advertisement

Category: ಸಂಪಿಗೆ ಸ್ಪೆಷಲ್

ಗುನ್ನಾರ್ ಏಕಲೋ: ಸ್ವೀಡಿಷ್ ಕವಿಯ ಕುರಿತು ಆರ್. ವಿಜಯರಾಘವನ್ ಲೇಖನ

“ಏಕಲೋ ಪೌರಾತ್ಯ ಅನುಭಾವಕ್ಕೆ ತೆತ್ತುಕೊಂಡವನು. ಗ್ರೀಕ್ ಕವಿ ಕಾನ್ಸ್ಟಾಂಟಿನ್ ಕವಾಫಿಯ ಹಾಗೆಯೇ ಇವನು ತನ್ನ ಕವಿತೆಗಳನ್ನು ಎಂದೋ ಆಗಿಹೋದ ಕಾಲದಲ್ಲಿ ನಿಲ್ಲಿಸುತ್ತಾನೆ. ಆದರೆ ಏಕಲೋ ಒಬ್ಬ ಭಾವುಕ. ಗತ ಕಾಲದಲ್ಲಿಯೇ ಮಗ್ನನಾಗುವವ. ಆದರೆ ಅವನು ಭೂತವನ್ನು ಪಲಾಯನದ ಹಾದಿಯಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಅದು ಅವನಿಗೆ ಅವನ್ನು ವರ್ತಮಾನವನ್ನು ಬೆಳಗುವ, ಟೀಕೆಗೆ ಒಳಪಡಿಸುವ ಮಾರ್ಗ.”

Read More

ನಾವು ಮತ್ತು ನಮ್ಮ ಪಾತ್ರೆ ಪಗಡೆಗಳು: ಕೆ. ವಿ. ತಿರುಮಲೇಶ್ ಬರಹ

“ಹೀಗೆ ಟೊಣೆಯುವಾಗ ಒಳ್ಳೆ ಸಂಗೀತದ ಸ್ವರ ಬರಬೇಕು! ನಾನು ಕೇವಲ ‘ಸಾಕ್ಷಿ ಪ್ರಜ್ಞೆ’. ಆಮೇಲೆ ಸುರುವಾಗುವುದು ನಿಜವಾದ ಚೌಕಾಶಿ. ಅವರು ಕೊಡರು, ಇವರು ಬಿಡರು! ಆದರೆ ಮಾತ್ರ ವ್ಯಾಪಾರ ಎರಡೂ ಕಡೆಯವರಿಗೆ ಬೇಕು. ಹೊರಗಿನಿಂದ ಬರುವವರೆಲ್ಲ ನಮ್ಮನ್ನು ಸೋಲಿಸುತ್ತಾರೆ ಎನ್ನುವುದು ಅಮ್ಮನ ಭಯವಾಗಿತ್ತು. ಇದು ಬಹುಪಾಲಿಗೆ ನಿಜವಾದರೂ, ಈ ಬಡ ಕುಂಬಾರರು ಪಾಪದವರೇ ಎನ್ನುವುದು ನನ್ನ ನಂಬಿಕೆ.”

Read More

ರವೀಂದ್ರಕುಮಾರ್ ಈವರೆಗಿನ ಕಾವ್ಯದ ಕುರಿತು ವಾಸುದೇವ್ ನಾಡಿಗ್ ಬರಹ

“ಕವಿತೆಗಳ ಕುರಿತ ಚರ್ಚೆಯೇ ಹಾಗೆ. ವೃಥಾ ತಲೆಚಚ್ಚಿಕೊಳ್ಳುತ್ತೇವೆ. ಕವಿತೆಯ ಶರೀರ ಆತ್ಮ ರಸ ರೀತಿ ಶೈಲಿ ದನಿ ಔಚಿತ್ಯ ಅಂತ. ಆದರೆ ನಿಜವಾದ ಕವನ ಅಲ್ಲೆಲ್ಲೋ ಮರೆಯಲ್ಲಿ ನಿಂತು ಮುಗುಳ್ನಗುತ್ತಿರುತ್ತದೆ. ಯಾರ ಕೈಗೂ ತಾನು ಸಿಗದೇ ಕಣ್ಣು ಮಿಟುಕಿಸುವ ತುಂಟ ಶಾಮನ ಹಾಗೆ. ಕೈಗೂ ಸಿಗದೇ ಕಣ್ಣಿಗೂ ಸಿಗದೇ ನುಣುಚಿಕೊಳ್ಳುವ ಮಾಯಾಂಗನೆ ಹಾಗೆ. ಕವಿತೆಯ ಸ್ವರೂಪ ಮತ್ತು ವ್ಯಾಕಪತೆ ಕುರಿತ…”

Read More

ಕೇಶವಿನ್ಯಾಸ: ಕೆ. ವಿ. ತಿರುಮಲೇಶ್ ಬರಹ

“ಆಗ ನಮ್ಮೂರಿನಲ್ಲಿ ಕ್ಷೌರದ ಅಂಗಡಿ ಇರಲಿಲ್ಲ. ಕ್ಷೌರಿಕರಿದ್ದರು. ಕ್ಷೌರ ಮಾಡಿಸಿಕೊಳ್ಳಬೇಕಾದವರು ಒಂದೋ ಕ್ಷೌರಿಕರ ‘ಕೊಟ್ಟಿಗೆ’ಗೆ ಹೋಗಬೇಕಾಗಿತ್ತು, ಇಲ್ಲವೇ ಅವರಿಗೆ ಹೇಳಿಕಳಿಸಬೇಕಾಗಿತ್ತು. ಹಳ್ಳಿಗಳಲ್ಲಿ ಕ್ಷೌರಿಕರಿಗೆ ಪಾರಂಪರ್ಯವಾಗಿ ನಿಗದಿಯಾದ ಗಡಿಗಳಿದ್ದುವು; ಆ ಗಡಿಯೊಳಗೇ ಅವರು ತಂತಮ್ಮ ಕಾರ್ಯ ನಿರ್ವಹಿಸುತ್ತಿದ್ದುದು. ಅವರು ಕೇವಲ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದವರೂ ಅಲ್ಲ; ಅವರಿಗೆ ಅಲ್ಪ ಸ್ವಲ್ಪ ಹೊಲ ಮನೆಗಳೂ ಇದ್ದುವು. ಕ್ಷೌರಿಕರು ಹೆಚ್ಚಾಗಿ ಹಳ್ಳಿಯಲ್ಲಿ ತಮ್ಮ ಸಲಕರಣೆ ಚೀಲಗಳನ್ನು ಕಂಕುಳಲ್ಲಿರಿಸಿಕೊಂಡು ರೌಂಡ್ ಸುತ್ತುತ್ತಿದ್ದರು.”

Read More

ಶೃಂಗಾರ ಸಾರ ವರ್ಣನ-ಭಾಗ 2: ಆರ್. ದಿಲೀಪ್ ಕುಮಾರ್ ಲೇಖನ

“ಪಂಪ ಭಾರತದಲ್ಲಿನ ಒಂದು ಸಂದರ್ಭದಲ್ಲಿ ಬಂದಿರುವ ಶೃಂಗಾರ ರಸವನ್ನು ನೋಡುವುದಕ್ಕಿಂತ ಮುಂಚಿತವಾಗಿ ಆದಿಪುರಾಣದಂತಹಾ ಆಗಮಿಕ ಕಾವ್ಯದ ಪ್ರಾರಂಭದಲ್ಲಿ ತನ್ನ ಬಗೆಗೆ ಹೇಳಿಕೊಳ್ಳುವ ಎರಡು ಕಂದ ಪದ್ಯಗಳು ಬಹಳ ಮುಖ್ಯ ಅನಿಸುತ್ತದೆ. ಕವಿ ರಸಿಕನಾಗದ ಹೊರತು ಕಾವ್ಯ ರಸಾನ್ವಿತವಾಗಲಾರದೆಂಬ ಮೀಮಾಂಸಕರ ಮತದಂತೆ, ಪಂಪನು ವೈರಾಗ್ಯೋದಯವೇ ಪ್ರಮುಖವಾದ ವಸ್ತುವಾದ ಕಾವ್ಯದಲ್ಲಿ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ