[widget id=”annual_archive_widget-2″]
[widget id=”polls-widget-2″]
ವೈಶಿಷ್ಟ್ಯದ ಲೇಖನಗಳು
ಹೆಣ್ಣಿನ ನೋವಿಗೂ ಬಣ್ಣವೇ ಮುಲಾಮು: ಜುಲೇಖಾ ಬೇಗಂ ಜೀವನ ವೃತ್ತಾಂತ
ಬಟ್ಟೆ ಜಾರಿತೋ ಅಥವಾ ನಾನೇ ಕದಲಿಸಿದೆನೋ ಮಾಂಸವೆಲ್ಲ ತುಂಡುತುಂಡಾಗಿ ಹರಿದುಬಂತು. ಗರ್ಭದಲ್ಲಿ ಭ್ರೂಣದ ಮಾಂಸ ಉಳಿದಿತ್ತೋ ಏನೊ, ‘ನನ್ನನ್ನು ಬೇಡವೆನ್ನುವ ಮೊದಲು ನನ್ನ ಹೇಳಿ-ಕೇಳಿ ಮಾಡಿದ್ದೀಯಾ? ಇಲ್ಲ ತಾನೆ, ಮತ್ತೆ ನಾನೇಕೆ ನಿನ್ನ ಒಪ್ಪಿಗೆ ಕೇಳಲಿ?’ ಎಂಬಂತಿತ್ತು ಆ ಸನ್ನಿವೇಶ. ಹಾರಿದ ಜಾಗದ ಸುತ್ತಲೂ ಮಾಂಸ ಚೂರಾಗಿ ಚೆಲ್ಲಿಬಿದ್ದಿತ್ತು. ಏನೂ ಮಾಡಲಾರದೆ, ತೊಟ್ಟ ಬಟ್ಟೆಯನ್ನೆಲ್ಲ ಹರಡಿ ಅಲ್ಲಿಯೇ ಸುಮ್ಮನೆ ಕುಳಿತೆ. ನೇಪಥ್ಯದಲ್ಲಿ ಪರದೆ ಎಳೆಯುವವರಿಗೂ ಏನಾಗುತ್ತಿದೆ ಎಂದು ಗೊತ್ತಾಗಿತ್ತು. ಬೆಳಕನ್ನು ಆರಿಸಿ, ಪರದೆಯನ್ನು ಎಳೆದೇಬಿಟ್ಟರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೈದನೆಯ ಕಂತು
ಹಾಸ್ಯೋತ್ಸವದ ಚಾಲನೆ…: ಎಚ್. ಗೋಪಾಲಕೃಷ್ಣ ಸರಣಿ
ಮಿಡಲ್ ಬರಹಗಾರರ ಗುಂಪು ಒಂದು ಶುರು ಮಾಡುವ ಐಡಿಯಾ ನಮ್ಮಲ್ಲಿ ಬಿತ್ತಿದರು. ಇದು ನಂತರ ಮಿಡಲ್ ಬದಲಿಗೆ ಹಾಸ್ಯಬರಹಗಾರರ ಸಂಘಟನೆ ಆಗಲಿ ಅಂತ ನಿರ್ಧಾರ ಆಯಿತು. ಹಿಂದೆ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಆರಂಭಿಸಿದಾಗ ಶ್ರೀ ಆನಂದರಾಮ ಶಾಸ್ತ್ರಿ ಅವರು ನೀತಿ ನಿಯಮ ರೂಪಿಸಿದ್ದರು ಅಂತ ಹೇಳಿದ್ದೆ. ಇದಕ್ಕೂ ಅವರೇ ಆರಂಭಿಕ ಪತ್ರಗಳು ಸಿದ್ಧ ಮಾಡಿದರು. ಇದಕ್ಕೆ ಬೇಕಾದ ನಮ್ಮ ಮೀಟಿಂಗ್ಗಳು ಬೆಂಗಳೂರಿನ ಸಂಗಮ್ ಟಾಕೀಸ್ ಮುಂದೆ ಸೇರಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೫ನೇ ಬರಹ ನಿಮ್ಮ ಓದಿಗೆ
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಪೆಜತ್ತಾಯರ ಆತ್ಮಕತೆಯ ಪುಟ
ಅವರು ತೋಟಗಳಲ್ಲಿ ಕೆಲಸ ಮಾಡಿದ ದಿನಗಳ ಕಥೆಗಳನ್ನು ನನಗೆ ಹೇಳುತ್ತಿದ್ದರು. ಆ ದಿನಗಳ ಹುಲಿ ಶಿಖಾರಿಯ ಕಥೆಗಳನ್ನು ನನಗೆ ವರ್ಣಿಸಿ ಹೇಳುವರು. ಅವರು ಘಟ್ಟದ ಜ್ವರ ಎಂಬ `ಮಲೇರಿಯಾ’ ಜ್ವರದಿಂದ ಪಟ್ಟ ಪಾಡು ವಿವರಿಸಿ ಹೇಳುತ್ತಿದ್ದರು. ಸದಾ ಮಳೆ, ಮಂಜು ಮತ್ತು ಮೋಡಗಳಿಂದ ಆವೃತ್ತವಾದ ಕಾಡುಗಳ ಮಧ್ಯೆ ಸಾಗಿದ ಅವರ ಜೀವನದ ಬಗ್ಗೆಯೇ ಅವರ ಮಾತುಗಳು ಸಾಗುತ್ತಿದ್ದುವು. ಅವರು ತಮ್ಮ ಜೀವನದಲ್ಲಿ ನೆಟ್ಟು ಆರೈಕೆ ಮಾಡಿದ ಆ ಲಕ್ಷಾಂತರ ಕಾಫಿ ಗಿಡಗಳ ಕಥೆ ಮತ್ತು ಅವರು ತಮ್ಮ ಕೆಲಸದಲ್ಲಿ ಕಂಡ `ಜೀವನದ ಸಾರ್ಥಕ್ಯ’ ಇವುಗಳ ಬಗೆಗಿನ ವಿವರಣೆಗಳಲ್ಲೇ ನಮ್ಮ ಹೆಚ್ಚಿನ ಭಾನುವಾರಗಳ ಮುಂಜಾನೆಗಳು ಕಳೆಯುತ್ತಿದ್ದುವು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಎಸ್.ಎಂ. ಪೆಜತ್ತಾಯರ ಬರಹ ನಿಮ್ಮ ಓದಿಗೆ
ಬದುಕು ಈಗ ತುಂಬ ಸುಲಭ…: ವಿನಾಯಕ ಅರಳಸುರಳಿ ಅಂಕಣ
ಕಾಲ ಬದಲಾಯಿತು. ಆಧುನಿಕತೆ ಎದ್ದು ನಿಂತಿತು. ಕಟ್ಟಿಗೆ ಕಡಿಯುವುದು ಕಷ್ಟ ಎಂದು ಗೀಝರ್ ಬಂತು. ಮತ್ತಿ ಸೊಪ್ಪು ಸಿಗುತ್ತಿಲ್ಲ ಎಂದು ಶ್ಯಾಂಪೂ ಬಂತು. ಅಮ್ಮ ಊರಲ್ಲಿದ್ದಾಳೆ ಎಂದಾಗ ಜೊಮ್ಯಾಟೋ ಬಂತು. ಕಾಲಿಗೆ ಬದಲಾಗಿ ಕಾರು ಬಂತು. ಸಾಕ್ಷಾತ್ ದ್ವಾಪರ ಯುಗದ ಕಾಳಿಂಗವೇ ಮೆಟ್ರೋದ ರೂಪ ತಾಳಿ ಹರಿದು ಬಂತು. ಎಲ್ಲವೂ ಸುಲಭವಾಯಿತು. ಸುಲಲಿತವಾಯಿತು. ಇಡೀ ಪ್ರಪಂಚವೇ ಬೆರಳ ತುದಿಯಲ್ಲಿ ಸಿಕ್ಕಿಕೊಂಡಿತು. ಮನುಷ್ಯ ಲೋಕದ ಬಾವುಟವೊಂದು ಚಂದ್ರನ ಅಂಗಳದಲ್ಲಿ ಪಟಪಟಿಸಿತು. “ವಿ ಆರ್ ಅಡ್ವಾನ್ಸ್ಡ್.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

ಇತ್ತೀಚಿನ ಲೇಖನ
[pt_view id=”1078996jn2″]
Twitter Feeds
[fts_twitter twitter_name=@CodeWebber tweets_count=3 twitter_height=300px cover_photo=no stats_bar=no show_retweets=no show_replies=no]
Facebook Feeds
[fts_facebook type=page id=codewebber posts=3 height=300px posts_displayed=page_only]



