Advertisement

Tag: ಕಥೆ

ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ

ತಲೆಗೆ ಮಂಕು ಬಡಿದಂತಾಯಿತು, ಆದರೂ ಚೇತರಿಸಿಕೊಂಡು ಮನೆ ತಲುಪಿದೆ. ಶಶಿ, ಮಕ್ಳು ಕಾಯ್ತಾ ಇದಾರೆ, ಆಗ್ಲೇ ತುಂಬಾ ಹೊತ್ತಾಯ್ತು, ಟೈಮ್ ನೋಡಿ ೧೦:೩೦, ನಂಗು ಜೋರಾಗಿ ನಿದ್ದೆ ಬರ್ತಾ ಇದೆ. ಬೇಗ ಬನ್ನಿ ಊಟ ಮಾಡೋಣವೆಂದಳು ನಿಶಾ. ನಾನು ಏನು ಮಾತಾಡದೆ ಕೈಯಲ್ಲಿದ್ದ ಪೇಪರ್ ಬ್ಯಾಗ್ ಅನ್ನು ಅವಳ ಕೈಗೆ ನೀಡಿದೆ. ಬಿರಿಯಾನಿ ತಿನ್ನಲು ಶುರು ಮಾಡಿದೆವು. ಯಾಕೆ ಶಶಿ ಏನು ಮಾತಾಡುತ್ತಿಲ್ಲ?
ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ “ಕಬಾಬ್ ಮೆ ಹಡ್ಡಿ”

Read More

ಚೈತ್ರ ಬರೆದ ಈ ಭಾನುವಾರದ ಕಥೆ

ಸಮುದ್ರ ತೀರದಲ್ಲಿ ಗಾಳಿ. ಜನರೆಲ್ಲ ವಾಕಿಂಗ್‌ ಮಾಡಲು ಬಂದಿದ್ದಾರೆ. ಕರ್ಚೀಫುಗಳನ್ನು ಬೀಸುತ್ತಿದ್ದಾರೆ. ನಾಚಿಕೆಯಿಲ್ಲದ ಜನ. ಅವರನ್ನು ನೋಡುವುದು ನನ್ನ ಕೆಲಸ. ನಾಯಿಗಳೂ ಓಡಾಡುತ್ತಿವೆ. ಶಂಖಗಳನ್ನು ಮೂಸುತ್ತಿವೆ. ಸಮುದ್ರದ ಗಾಳಿ ಮೂಗನ್ನು ಹೊಗುತ್ತಿತ್ತು. ಸಮುದ್ರ ಕಳೆ ನೀರಿನಲ್ಲಿ ತೇಲಾಡುತ್ತಿತ್ತು. ತಿಮಿಂಗಲವೊಂದು ಮೇಲೆ ಬಂಬಂದು ತಿರುಗಿ ಮರಳಿ ಹೋಗುತ್ತಿತ್ತು. ಪಕ್ಕದ ಗುಡ್ಡದ ಮೇಲೆ ಗಾಳಿಗೆ ಮರಗಳು ಓಲಾಡುತ್ತಿದ್ದವು. ಸೂರ್ಯ ಮುಳಗುತ್ತಿದ್ದ. ಬೇಡ ಎಂದರೆ ಜನ ಮನೆಯಲ್ಲಿ ಕೂತಾರೆಯೆ? ಯಾರೋ ಬಲೂನು ಮಾರುತ್ತಿದ್ದಾರೆ.
ಚೈತ್ರ ಬರೆದ ಕತೆ “ಭಾಗ್ಯ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಹಮೀರ್‌ ಮುಗಿಲು ಕೆ.ಎಲ್. ಬರೆದ ಈ ಭಾನುವಾರದ ಕಥೆ

ಹೊರಗಾಳಿಯ ತಾಜಾತನವನ್ನು, ಮಧ್ಯಾಹ್ನ ಮೂರುಗಂಟೆಯ ಬಿಸಿಲನ್ನು ಸೇವಿಸಿದೆ. ರೋಡು ದೊಡ್ಡ ಮಾಡಿದಾಗ ಕಡಿದ, ಈಗ ರೊಡಿನ ಸೈಡಲ್ಲಿ ಮಹಾ ಬಂಡೆಗಳ ತರ ಅಥವಾ ರಾಮಲಕ್ಷ್ಮಣರೋ, ಪಾಂಡವರೊ ಸಾಯಿಸಿ ಕೊಚ್ಚಿಹಾಕಿದ ಉಗ್ರ ರಾಕ್ಷಸ ಜನಾಂಗದ ಹೆಣಗಳ ಹಾಗೆ ಬಿದ್ದಿರೊ ಮೂರ್ನಾಲ್ಕು ಶತಮಾನಗಳಷ್ಟು ಪುರಾತನವಾಗಿರಬಹುದಾದ ಮರಗಳ ಬುಡಗಳು ಕಣ್ಣಿಗೆ ಬಿದ್ದವು. ಆ ತಾಜಾತನದ ಸಹಾಯದಿಂದಲೋ ಏನೋ ಇಲ್ಲಿಯತನಕ ಸಿಗದ ಪರಿಹಾರವು ಸಿಕ್ಕಿತು, ಅಥವಾ ಉತ್ಪತ್ತಿಯಾಯಿತು, ಆಥವಾ ನನ್ನ ಸುಪ್ತಪ್ರಜ್ಞಾ ಮನಸ್ಸು ಸಂಶ್ಲೇ಼ಷಣೆ ಮಾಡಿತು.
ಹಮೀರ್‌ ಮುಗಿಲು ಕೆ.ಎಲ್. ಬರೆದ ಈ ಭಾನುವಾರದ ಕಥೆ “ಹಿಂದಿನದು” ನಿಮ್ಮ ಓದಿಗೆ

Read More

ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕಥೆ

ಕಾಣೆಯಾಗಿದ್ದ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆಗಳು ಇದೇ ಬಿಡಾರದ ಬಾಗಿಲು ತಟ್ಟಿ ಆಹಾರ ಕೋರಿದ್ದರು. ಕುಡಿದು ಬಿದ್ದಿದ್ದ ಈ ಆಸಾಮಿ ಕಣ್ಣೇ ಬಿಟ್ಟಿರಲಿಲ್ಲ. ಆತ ಕಣ್ಣು ಬಿಟ್ಟಾಗ ಆತನ ಮಡದಿ ಅದಾಗಲೇ ಲಾಮಾ ಮಕ್ಕಳ ಬಟ್ಟೆ ಬದಲಾಯಿಸಿ, ಬಿಸಿ ನೀರಲ್ಲಿ ಸ್ನಾನ ಮಾಡಿಸಿ, ಹೊಟ್ಟೆಗೆ ತಿನ್ನಲು ಕೊಟ್ಟು, ಅವರ ಕಾಷಾಯ ವಸ್ತ್ರಗಳನ್ನು ಒಗೆದು ಬಿಸಿಲಿಗೆ ಒಣಗಲು ಹಾಕಿ, ಅವರಿಗೆ ಕಂಬಳಿ ಹೊದೆಸಿ ಬೆಚ್ಚಗೆ ಮಲಗಿಸಿ ಅವರನ್ನು ಕಾದು ಕುಳಿತಿದ್ದಳು.
ಅಬ್ದುಲ್‌ ರಶೀದ್‌ ಬರೆದ ಕಥೆ “ಅಂತಾರಾಷ್ಟ್ರೀಯ ಕುಂಬಳಕಾಯಿ”

Read More

ಶರಣಗೌಡ ಬಿ ಪಾಟೀಲ ಬರೆದ ಈ ಭಾನುವಾರದ ಕಥೆ

ನಿಮ್ಮಪ್ಪ ಹ್ಯಾಂಗೇ ಇರಲಿ ಅವನು ನಮ್ಮ ಕಣ್ಮುಂದೆ ಇರಬೇಕು. ಅಂವ ನನ್ನ ಪಾಲಿನ ದೇವರು. ನನ್ನ ಹಣೆಬರಹದಾಗ ಏನಿದೆಯೋ ಅದು ಆಗಿ ಹೋಗಿದೆ. ಹಿರಿಯರ ಮಾತಿಗೆ ಬೆಲೆ ಕೊಟ್ಟು ಆತನ ಜೊತೆ ಮದುವೆಯಾದೆ. ಅಂತಹ ಗಂಡನ ಜೊತೆ ಹ್ಯಾಂಗ ಸಂಸಾರ ಮಾಡ್ತಿಯೋ ಏನೋ ಅಂತ ಆಡಿಕೊಳ್ಳತಿದ್ದರು. ಅವರ ಮಾತಿಗೆ ನಾನೆಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಿದ್ದರೂ ಆತ ಹೇಳದೇ ಕೇಳದೇ ಹೋಗಿದ್ದಾನೆ.
ಶರಣಗೌಡ ಬಿ ಪಾಟೀಲ, ತಿಳಗೂಳ ಬರೆದ ಸಣ್ಣ ಕತೆ “ಎಲ್ಲರಂತವನಲ್ಲ!” ನಿಮ್ಮ ಈ ಭಾನುವಾರದ ಓದಿಗೆ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು…

Read More

ಬರಹ ಭಂಡಾರ