Advertisement

Tag: ಗುರುಪ್ರಸಾದ ಕುರ್ತಕೋಟಿ

ಹೌಡಿ ನೇಬರ್ಸ್‌!: ಗುರುಪ್ರಸಾದ ಕುರ್ತಕೋಟಿ ಸರಣಿ

“ನೀವು ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದೀರಿ. ಇಷ್ಟು ರಾತ್ರಿಯಾಗಿದೆ. ನಿಮ್ಮ ಗಲಾಟೆಯಿಂದ ನನಗೆ ನಿದ್ದೆ ಕೂಡ ಬರುತ್ತಿಲ್ಲ. ನಿಮಗೆ ಅಷ್ಟು ಗೊತ್ತಾಗೋದಿಲ್ಲವೇ..” ಎಂಬ ಅರ್ಥದಲ್ಲಿ ಬೈದ. ನಮಗೆಲ್ಲ ಹಾಗೆ ಮಾಡಿದೆವಲ್ಲ ಎಂಬ ಪಾಪ ಪ್ರಜ್ಞೆ ಬಂತು. ಕ್ಷಮಿಸಿ ಅಂತ ಕೇಳಿದೆವು. ಆದರೆ ಅಲ್ಲಿಯ ನಾಗರಿಕನಾಗಿದ್ದ ಚಂದ್ರುಗೆ ತುಂಬಾ ಮರ್ಯಾದೆ ಹೋಗಿಬಿಟ್ಟಿತು. ಅವನಿಗೆ sorry ಹೇಳುತ್ತಾ, ಇಷ್ಟೆಲ್ಲಾ ಗದ್ದಲ ಹಾಕಬಾರದಿತ್ತು ನೀವು ಎಂಬಂತೆ ನಮ್ಮ ಕಡೆ ನೋಡಿದ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತನೆಯ ಬರಹ

Read More

ನಾವು… ನಮ್ಮದು..: ಗುರುಪ್ರಸಾದ ಕುರ್ತಕೋಟಿ ಸರಣಿ

ಸ್ವಚ್ಚತೆ, ಇಂಡಿಪೆಂಡೆನ್ಸ್, ತಮಗನಿಸಿದ್ದನ್ನು ನಿರ್ಭಿಡೆಯಿಂದ ಹೇಳುವ ಅವರ ಶೈಲಿ ಇನ್ನೂ ಎಷ್ಟೋ ಒಳ್ಳೆಯ ಗುಣಗಳನ್ನು ಖಂಡಿತ ಅಮೆರಿಕನ್ನರಿಂದ ಕಲಿಯಬಹುದು. ಆದರೆ ಇನ್ನೂ ಎಷ್ಟೋ ವಿಷಯಗಳಲ್ಲಿ ಅವರು ಮಾಡೋದು ಅತಿ ಅನಿಸುತ್ತದೆ. ಅದೇ ರೀತಿ ನಾವೂ ಕೂಡ ಕೆಲವು ವಿಷಯಗಳಲ್ಲಿ ಅತಿ ಮಾಡುತ್ತೇವೆ. ಹೀಗಾಗಿ ಅವರ ಕೆಲವು ವಿಷಯಗಳನ್ನು ಸ್ವೀಕರಿಸಿ ನಮ್ಮತನವನ್ನೂ ಉಳಿಸಿಕೊಂಡ ಒಂದು ಮಧ್ಯದ ಶೈಲಿ ಅಳವಡಿಸಿಕೊಂಡರೆ ಎಷ್ಟು ಚೆನ್ನ ಅನಿಸುತ್ತದೆ. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಅಮೆರಿಕದ ಥೇಟರಿನಲ್ಲಿ ಬ್ಯಾಟರಿ ಬಿಟ್ಟ ಕತೆ!: ಗುರುಪ್ರಸಾದ ಕುರ್ತಕೋಟಿ ಸರಣಿ

ಒಂದು ಎಡವಟ್ಟಾಗಿತ್ತು! ನಾನು ಹಳೆಯ, ಕಮಲ್ ಹಾಸನ್ ನಟಿಸಿದ್ದ ಪುಷ್ಪಕ ವಿಮಾನದಂತೆಯೇ ಇದು ಕೂಡ ತಮಾಷೆಯಾಗಿಯೇ ಇರಬಹುದು ಅಂದುಕೊಂಡಿದ್ದೆ. ಆದರೆ ಇದು ಅಪ್ಪ ಮಗಳ ನಡುವೆ ಪ್ರೀತಿ ವಾತ್ಸಲ್ಯದ ಬಗ್ಗೆ ಕೇಂದ್ರಿತವಾಗಿದ್ದು, ಕತೆಯಲ್ಲಿ ಬಹಳಷ್ಟು ಭಾವನಾತ್ಮಕ ಘಟನೆಗಳು ಇದ್ದವು. ಸ್ವಲ್ಪ ಸಮಯದಲ್ಲೇ ಅತ್ತಿತ್ತ ಗಮನಿಸಲು ಶುರು ಮಾಡಿದರೆ ಎಷ್ಟೋ ಹೆಣ್ಣು ಮಕ್ಕಳು ಕಣ್ಣೀರು ಹಾಕಲು ಶುರು ಮಾಡಿದ್ದರು. ಇತ್ತೀಚೆಗಷ್ಟೇ ಅಪ್ಪನನ್ನು ಕಳೆದುಕೊಂಡಿದ್ದ ನನ್ನ ಹೆಂಡತಿ ಕೂಡ ಗೊಳೋ ಅಂತ ಅಳಲು ಶುರು ಮಾಡಿದ್ದಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಎವರೆಸ್ಟ್‌ನಲ್ಲಿ ಹೃದಯ ಬಡಿತ ನಿಂತಾಗ!: ಗುರುಪ್ರಸಾದ ಕುರ್ತಕೋಟಿ ಸರಣಿ

ಎರಡು ನಿಮಿಷ ಕಳೆಯಿತು. ನಮ್ಮ ಗಾಡಿ ಚಲಿಸುವ ಲಕ್ಷಣ ಕಾಣಲಿಲ್ಲ. ಎಲ್ಲರೂ ಒಬ್ಬರ ಮುಖ ಒಬ್ಬರು ನೋಡತೊಡಗಿದೆವು. ಏನೋ ತಾಂತ್ರಿಕ ಸಮಸ್ಯೆ ಆಗಿದೆ ಅಂತ ಗೊತ್ತಾಯ್ತು. ಆದರೂ ಇಳಿದು ಹೋಗಲೂ ಆಗಲ್ಲವಲ್ಲ. ನಾವು ಕೂತಾಗಲೇ ಹಿಂದಿನಿಂದ ಇನ್ನೊಂದು ಟ್ರೈನ್ ಬಂದು ಡಿಕ್ಕಿ ಹೊಡೆದುಬಿಟ್ಟರೆ ಏನು ಗತಿ ಎಂಬ ಯೋಚನೆ ಬಂದು ಬೆವರು ಹರಿಯಲು ಶುರು ಆಗಿತ್ತು! ನನ್ನ ಪಕ್ಕದಲ್ಲಿ ಕೂತಿದ್ದ ಒಂದು ಸಣ್ಣ ಹುಡುಗಿ ಆಗಲೇ ಅಳಲು ಶುರು ಮಾಡಿದಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಎಲ್ಲರಂಥವನಲ್ಲ ನನ್ನಪ್ಪ..: ಗುರುಪ್ರಸಾದ ಕುರ್ತಕೋಟಿ ಸರಣಿ

ಅಂತೂ ಇಂತೂ ಟಿಕೆಟ್‌ಗಳು ಆಗಿ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ ಭಾರವಾದ ಮನಸ್ಸಿನಿಂದ ಭಾರತಕ್ಕೆ ಪಯಣ ಬೆಳೆಸಿದೆವು. ದೇವರು ನೀಡುವ ಈ ಅನಿರೀಕ್ಷಿತ ತಿರುವುಗಳಿಗೆ ಯಾರೂ ಏನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದಾಗಿತ್ತು. ಬೆಂಗಳೂರಿಗೆ ನಾವೆಲ್ಲ ಬಂದು ಇಳಿದಾಗ, ನನ್ನ ಮಾವ ತೀರಿಕೊಂಡು ನಾಲ್ಕು ದಿನಗಳು ಆಗಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾರನೆಯ ಬರಹ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು…

Read More

ಬರಹ ಭಂಡಾರ