Advertisement

Tag: ಕೆ ವಿ ತಿರುಮಲೇಶ್

ಸಾಹಿತ್ಯದ ನಿಷಿದ್ಧ ವಲಯ: ಕೆ.ವಿ. ತಿರುಮಲೇಶ್ ಲೇಖನ

“ನಾನು ಆಗಾಗ ರೋಮನ್ ಇತಿಹಾಸ ಓದುತ್ತಿದ್ದೆ. ಸಿಕ್ಕಿದ ಮಾಹಿತಿಗಳನ್ನೇ ಬಳಸಿಕೊಂಡು ಮೊದಲು “ಟೈಬೀರಿಯಸ್”, ನಂತರ “ಕಲಿಗುಲ” ಬರೆದೆ. ಇವುಗಳ ಬಗ್ಗೆ ಜನ ಏನೆನ್ನುತ್ತಾರೋ ಎನ್ನುವ ಕುತೂಲ ಇತ್ತು. ಎರಡೂ ಪೂರ್ಣಪ್ರಮಾಣದ ನಾಟಕಗಳು. ನನ್ನ ಜೀವನ ಸಂಧ್ಯೆಯಲ್ಲಿ ಮಾಡಿದ ಕೆಲಸಗಳು. ಇನ್ನೂ ಬರೆಯಬೇಕೆಂದಿದ್ದೆ. ನನ್ನ ಭಾಷಾ ಬಾಂಧವರಿಂದ ಒಂದು ಒಳ್ಳೆಯ ಮಾತು ಬರುತ್ತಿದ್ದರೆ ಬಹುಶಃ ಹಾಗೆ ಮಾಡುತ್ತಿದ್ದೆನೋ ಏನೋ.”

Read More

ಕವಿತೆಯ ಕುರಿತು: ಕೆ. ವಿ. ತಿರುಮಲೇಶ್ ಬರೆದ ಲೇಖನ

“ಕವಿ ರಾಘವಾಂಕನು ಜನ್ನನ ನಿಕಟೋತ್ತರದಲ್ಲಿ ಬಂದವನು – ಹಳೆಗನ್ನಡದಿಂದ ನಡುಗನ್ನಡಕ್ಕೆ ಯುಗ ಬದಲಾದ ಕಾಲ ಅದು, ಅಂತೆಯೇ ಚಂಪೂವಿನಿಂದ ಷಟ್ಪದಿಗೆ. ನಡುಗನ್ನಡದಲ್ಲಿ ಷಟ್ಪದಿಯಲ್ಲಿ ಬರೆದ ಮೊದಲಿಗರಲ್ಲಿ ರಾಘವಾಂಕ ಪ್ರಮುಖನು. ಅವನು ಮೂರು ನಾಲ್ಕು ಕಾವ್ಯಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಜನಪ್ರಿಯವಾದ್ದು ವಾರ್ಧಕ ಷಟ್ಪದಿಯಲ್ಲಿ…”

Read More

ತರ ತರದ ತರಕಾರಿ: ಕೆ.ವಿ. ತಿರುಮಲೇಶ್ ಲೇಖನ

“ತರಕಾರಿಗಳಲ್ಲಿ ಕುಂಬಳದ ಕುರಿತು ನನಗೆ ಹೆಚ್ಚು ಮಮತೆ ಇದೆ. ಆದರೆ ಇದನ್ನು ಯಾಕೆ ದೇವರ ಪೂಜೆಯಿಂದ ನಿಷಿದ್ಧ ಮಾಡಿದ್ದಾರೋ ತಿಳಿಯದು. ಅಪರ ಕ್ರಿಯೆಗಳಿಗೆ, ಮಾಟಮಂತ್ರಗಳಿಗೆ ಮಾತ್ರ ಇದು ಸಲ್ಲುವಂಥದು. ಅಲ್ಲದೆ ಹೊಸ ಮನೆಗಳನ್ನು ಕಟ್ಟಿಸುವಾಗ ಎಲ್ಲರಿಗೂ ಕಾಣುವ ಹಾಗೆ ಎದುರಿಗೇ ಇದನ್ನು ತೂಗಿ ಹಾಕುವುದಿದೆ, ಜನರ ಕೆಟ್ಟ ದೃಷ್ಟಿ ತಾಕದಿರಲಿ ಎಂದು…”

Read More

ಶಿಶುನಾಳ ಶರೀಫರ ಕಾವ್ಯ: ಕೆ. ವಿ. ತಿರುಮಲೇಶ್ ಲೇಖನ

“ಶರೀಫರ ಅನುಭಾವಲೋಕ ಆಧ್ಯಾತ್ಮಿಕವಾದರೂ ಅನುಭವಲೋಕ ಪ್ರಾಪಂಚಿಕವೇ. ಅದು ಕೇವಲ ಮಾನವ ಜೀವಿಗಳಿಂದ ಮಾತ್ರವೇ ತುಂಬಿರುವುದಲ್ಲ. ಸಕಲ ಪಶುಪಕ್ಷಿ ಕ್ರಿಮಿಕೀಟಗಳಿಗೂ ಜಲ ಜಲಧಾರೆಗಳಿಗೂ ವೃಕ್ಷಗಳಿಗೂ ಅಲ್ಲಿ ನೆಲೆಯಿದೆ. ಅವರ ಕಾವ್ಯದಲ್ಲಿ ಕೋಳಿಗಳ ಪ್ರಸ್ತಾಪ ಬರುವಷ್ಟು ಇನ್ನು ಯಾರ ಕಾವ್ಯದಲ್ಲೂ ಬರುವುದಿಲ್ಲ. ಜನ್ನನ ಯಶೋಧರ ಚರಿತೆಯಲ್ಲಿ…”

Read More

ಸಾಹಿತಿ ಮಾಹಿತಿ ಕೋಶ ಎಂಬ ಮುಗಿಯದ ರೊಮ್ಯಾನ್ಸ್: ಕೆ.ವಿ. ತಿರುಮಲೇಶ್ ಲೇಖನ

“ಹಾಥಾರ್ನ್ ನ ವಿವರಗಳನ್ನು ಓದಿದ ನಂತರ ನಾನು ಕಣ್ಣೋಡಿಸಿದ ನಮೂದು ಸರ್ ವಾಲ್ಟರ್ ಸ್ಕಾಟ್ ಗೆ ಸಂಬಂಧಿಸಿದ್ದು. ಈ ಸುಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರನ “ಐವಾನ್ ಹೊ” ಎಂ.ಎ. ಯ ಓದಿನ ಪಟ್ಟಿಯಲ್ಲಿ ಇದ್ದರೂ ನಾನದನ್ನು ಓದಿರಲಿಲ್ಲ. ನಾವು ವಿದ್ಯಾರ್ಥಿಗಳು ಪಾಠಪಟ್ಟಿಯಲ್ಲಿ ಇದ್ದುದೆಲ್ಲವನ್ನೂ ಓದುತ್ತಿರಲಿಲ್ಲ, ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆಗೆ ಅವಕಾಶವಿದ್ದುದರಿಂದ ನಾವು ಈ ರಿಸ್ಕನ್ನು ತೆಗೆದುಕೊಳ್ಳುತ್ತಿದ್ದೆವು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ