Advertisement

Tag: ಗುರುಪ್ರಸಾದ್ ಕಂಟಲಗೆರೆ

ಜಂತೆಯಲ್ಲಿದ್ದ ಕೈಚೀಲದಲ್ಲಿ ಪೋಲಿ ಪುಸ್ತಕಗಳು

ಪಿಯುಸಿ ಓದಲು ತುಮಕೂರಿಗೆ ಹೊರಟಾಗ ಹಲವು ಬದಲಾವಣೆಗಳಾದವು.  ಹೈಸ್ಕೂಲ್ ಹಾಸ್ಟೆಲ್‌ವರೆಗೆ ಕಡ್ಡಾಯವಾಗಿದ್ದ ‘ಟ್ರಂಕು ತಟ್ಟೆ’ ಜಾಗದಲ್ಲಿ ಈಗ ಸೂಟ್‌ಕೇಸ್ ಬಂತು. ಆ ವರ್ಷದ ಮಾವಿನ ಮರದ ಫಸಲಿನಲ್ಲಿ ಅಪ್ಪ ಮೊದಲ ಬಾರಿಗೆ ಕಾಲೇಜಿಗೆ ಹೋಗುವ ಮಗ ಎಂದು ಎರಡು ಜೊತೆ ಹೊಸ ಬಟ್ಟೆ ಕೊಡಿಸಿತು. ಕಾಲೇಜು ಪ್ರವೇಶ ಮಾಡಿದ್ದಕ್ಕೆ ಪ್ರಮೋಷನ್ ಎಂಬಂತೆ ಮೊದಲ ಬಾರಿಗೆ ಚಿ.ನಾ.ಹಳ್ಳಿಯ ಗೋಪಾಲ ಶೆಟ್ಟಿ ಅಂಗಡಿಗೆ ಕರೆದೊಯ್ದು ಎರಡೆರಡು ಡ್ರಾಯರ್, ಬನಿಯನ್ ಕೊಡಿಸಿತು. ಅವೆಲ್ಲವನ್ನು ಹೊಸ ಸೂಟ್ ಕೇಸ್‌ಗೆ ತುಂಬಿ ಜೋಪಾನ ಎಂದು ಹೇಳಿ ಅಪ್ಪ ಅಮ್ಮ ನನ್ನನ್ನ ಬೀಳ್ಕೊಟ್ಟರು. 
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹದಿಮೂರನೆಯ ಕಂತು.

Read More

ಎದೆಯಲ್ಲಿ ಅವಲಕ್ಕಿ ಕುಟ್ಟಿದ ಎಸ್‌ಎಸ್‌ಎಲ್‌ಸಿ ಫಲಿತಾಂಶ…

ವಾರವೆಲ್ಲ ಕೆಲಸವಿಲ್ಲದೆ ಬಿಟ್ಟಿ ಊಟ ತಿಂದುಕೊಂಡು ವಾಹನ ದಟ್ಟಣೆಯ ತುಮಕೂರಿನಲ್ಲಿ ಓಡಾಡಿದ್ದು ಮನಸ್ಸಿಗೆ ಹಿಡಿಸದಾಗಿ ಮಂಕು ಕವಿಯತೊಡಗಿತು. ಆ ಮಂಕಿನೊಳಗೆ ಊರಿನ ನೆನಪುಗಳು ಬಾದಿಸತೊಡಗಿದವು. ಪರಿಣಾಮವಾಗಿ ದುಡಿಯದಿದ್ದರೂ ಸರಿಯೆ ಊರು ಹೋಗೆನ್ನುವಂತೆಯೂ ಕಾಡು ಬಾ ಎನ್ನುವಂತೆಯೂ ಕರೆದಂತಾಯಿತು. ಇದಕ್ಕೆ ಒತ್ತುಕೊಡುವಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶದ…

Read More

ಮಕ್ಕಳನ್ನು ಓದಿಸಿದ ಮಾವಿನಮರಗಳು

ಅಡ್ವಾನ್ಸ್ ಕೊಟ್ಟೋದ ಸಾಬರು ಕೆಲವೊಮ್ಮೆ ರೇಟ್ ಬಿದ್ದೋಗಿದೆ ಎಂದು ಮರದಿಂದ ಹಣ್ಣು ಉದುರಿ ಹೋಗುತ್ತಿದ್ದರೂ ಬರುತ್ತಿರಲಿಲ್ಲ. ಅಪ್ಪ ಇನ್ನೂರೊ ಮುನ್ನೂರೊ ಅಡ್ವಾನ್ಸ್‌ಗೆ ಕಟಿಬಿದ್ದು ಉದುರುವ ಹಣ್ಣುಗಳನ್ನು ನೋಡಿಕೊಂಡು ಇನ್ನೊಬ್ಬರಿಗೂ ಕೊಡದೆ ಲಾಸ್ ಮಾಡಿಕೊಂಡದ್ದೂ ಇದೆ. ಸಾಬರು ಮರಗಳಿಗೆ ಕೊಟ್ಟೋದ ಅಡ್ವಾನ್ಸ್‌ ಹಣದಲ್ಲಿ ಅಪ್ಪ ಪ್ರತಿ ವರ್ಷ ನಮಗೆ ಬರೆಯುವ ನೋಟ್ ಬುಕ್ಕು ಕೊಡಿಸುತ್ತಿತ್ತು, ಪೂರ್ತಿ ಹಣ ಕೊಟ್ಟ ಮೇಲೆ ಅಕ್ಕಂದಿರಿಗೆ ಮತ್ತು ನಮಗೆ ಯೂನಿಫಾರ್ಮ್‌ ಕೊಡಿಸುತ್ತಿತ್ತು.

Read More

ನಿಮ್ಮಪ್ಪ ನಿಂಗೆ ಬೇರೆ ಪ್ಯಾಂಟ್‌ ಕೊಡ್ಸಿಲ್ವಾ?

ಹಾಸ್ಟೆಲ್‌ನಲ್ಲಿ ನಮಗೆ ಪ್ರತಿ ತಿಂಗಳು ಸ್ನಾನಕ್ಕೆ ಮೈಸೋಪು, ತಲೆಗೆ ಎಣ್ಣೆ, ಬಟ್ಟೆ ತೊಳೆಯಲು ಹರಸನ್ ಸೋಪು ಕೊಡುತ್ತಿದ್ದರು. ವಾರ್ಡನ್ ನಿರಂಜನಾಚಾರಿ ಕೆಲವೊಮ್ಮೆ ತಿಂಗಳ ಪ್ರಾರಂಭದಲ್ಲೆ ಎಲ್ಲ ಸಾಮಗ್ರಿಗಳನ್ನ ತಂದು ಗೋಡೊನ್ ತುಂಬಿಸಿರುತ್ತಿದ್ದರು. ಆದರೆ ಎರಡು ಮೂರು ತಿಂಗಳಾದರೂ ಅವು ನಮ್ಮ ಕೈಸೇರುತ್ತಿರಲಿಲ್ಲ. ಕೊಂಡು ತರಲು ಹಾಸ್ಟೆಲ್ನ ಯಾವ ಹುಡುಗರ ಹತ್ತಿರವೂ ಬಿಡಿಗಾಸೂ ಇರುತ್ತಿರಲಿಲ್ಲ. ಬಟ್ಟೆಗಳಂತೂ ಮಾಸಿ ಚುಮ್ಮಟವಾಗಿರುತ್ತಿದ್ದವು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹತ್ತನೆಯ ಕಂತು.

Read More

ತಿಪಟೂರು ಕೆಡಿಸಿ ಬಂದವರು…!

ಚಿಕ್ಕನಾಯಕನಹಳ್ಳಿಯ ಸಾರ್ವಜನಿಕ ಹಾಸ್ಟೆಲ್ ವಿಚಿತ್ರ ಅನುಭವ ಕೊಡತೊಡಗಿತು. ಇಲ್ಲಿ ಬೆಳಗ್ಗೆ ಆರಕ್ಕೆ ಕಡ್ಡಾಯವಾಗಿ ಏಳಬೇಕಿತ್ತು. ಎದ್ದು ಓದಿಕೊಳ್ಳುವುದು ಒತ್ತಟ್ಟಿಗಿರಲಿ ಪ್ರತಿಯೊಬ್ಬರೂ ಭಟ್ಟರು ನೇಮಿಸಿದ ಕೆಲಸಗಳನ್ನ ಮಾಡಬೇಕಿತ್ತು. ಕುಳ್ಳಗೆ ದಪ್ಪಗೆ ಮೀಸೆಬಿಟ್ಟಿದ್ದ ಹನುಮಂತನೆಂಬ ಭಟ್ಟನಿದ್ದ. ಹೇಳಿದ ಕೆಲಸ ಮಾಡದವರನ್ನ ಆತ ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದ. ಬೆಳಗಿನ ಊಟಕ್ಕೆ ಮುಂಚೆ ಯಾರ್ಯಾರು ಏನೇನು ತಪ್ಪು ಮಾಡಿದರೆಂದು ವಿಚಾರಣೆ ನಡೆಸಿ, ಮೂಲೆಯಲ್ಲಿ ಸದಾ ನಿಂತಿರುತ್ತಿದ್ದ ಉದ್ದನೆಯ ಸಿದ್ದರಾಮಣ್ಣನನ್ನು(ಕೋಲನ್ನ) ತೆಗೆದುಕೊಂಡು ದನಕ್ಕೆ ಬಡಿಯುವಂತೆ ಬಡಿಯುತ್ತಿದ್ದ.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಒಂಭತ್ತನೆಯ ಕಂತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ