ಸಂಬಂಧಗಳಿಗೂ ಒಂದು ಕೊನೆಯ ದಿನ ಇದ್ದರೆ….!

ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮತ್ತಷ್ಟು ಆತ್ಮೀಯ, ಅಪ್ಯಾಯ ಬಂಧವಾಗಿ ಬದುಕು ಹಿತವೆನಿಸುವ ದಿನಗಳಲ್ಲಿ ಯಾರಿಗಾದರೂ ಅಂತಹದ್ದೊಂದು ಸಂಬಂಧ ಜಡವಾಗಬಹುದೆಂಬ ಸುಳಿವು ಸಿಕ್ಕಿರುವುದಿಲ್ಲ. ಈ ದಿನ, ಈ ಕ್ಷಣ, ಈ ಕಾಲ ಸದಾ ಹೀಗೆಯೇ ಇರುವುದೆಂಬ ನಂಬಿಕೆ, ಆಶಯದ ಬುನಾದಿಯ ಮೇಲೆ ಕಟ್ಟಿದ ಕನಸಿನ ಗೋಪುರ ಕುಸಿಯತೊಡಗಿದಾಗ ಶುರು ಸತ್ವಪರೀಕ್ಷೆ. ಜೊತೆಯಾಗಿ ಎದುರಿಸಿದ ಕಷ್ಟ ಸುಖ, ಕೂಡಿಟ್ಟ ನೆನಪುಗಳು, ಜೋಳಿಗೆ ತುಂಬಿದ ಅನುಭವಗಳು ಮಸುಕಾಗುವವರೆಗೂ ಮುಗಿಯದ ಉಮ್ಮಳಿಕೆ‌. ಇದು ಬರಿಯ ಪ್ರೇಮಿಗಳಿಗೆ ಸಂಬಂಧಿಸಿದ ವಿಷಯವಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More