Advertisement

Tag: ಶೇಷಾದ್ರಿ ಗಂಜೂರು

ಜಗತ್ತಿನ ಅತ್ಯಂತ ಸುಂದರ ಫೋಟೋ(2):ಶೇಷಾದ್ರಿ ಗಂಜೂರು ಸರಣಿ

ಈ ಆಲೋಚನೆ ಹೊಳೆದ ರಾತ್ರಿ ಅವನಿಗೆ ನಿದ್ದೆಯೇ ಬರಲಿಲ್ಲ. ಕಾಲೇಜಿನ ಇನ್ನೊಬ್ಬ ಪ್ರೊಫೆಸರ್ ಕೊಟ್ಟಿದ್ದ ಹೋಂ ವರ್ಕ್ ಮಾಡಲೂ ಸಹ ಮನಸು ಬರಲಿಲ್ಲ. ಬದಲಿಗೆ, ಹಾಸಿಗೆಯಿಂದೆದ್ದು, ಇಲ್ಲಿಯವರೆಗೆ ಕಲೆ ಹಾಕಿದ್ದ ಅಂಕಿ-ಸಂಖ್ಯೆಗಳು-ಮಾಹಿತಿಗಳನ್ನೆಲ್ಲಾ ಮತ್ತೆ-ಮತ್ತೆ ನೋಡಿ, ಸಣ್ಣ ಕಾಗದದ ಮೇಲೊಂದು ದಾರದಂತೆ ಗೆರೆಯೊಂದನ್ನು ಎಳೆದು ಅದರ ಮೇಲೆ, ತನ್ನ ಲೆಕ್ಕಾಚಾರ ಬಳಸಿ ಬಿಳಿಗಣ್ಣು, ಹಳದಿ ಬಣ್ಣ, ಕಿರು ರೆಕ್ಕೆ, ಹಾರೆಗಣ್ಣು ಇತ್ಯಾದಿ ಜೀನುಗಳನ್ನು ಮಾರ್ಕ್ ಮಾಡಿದ. ವಂಶವಾಹಿ ಗುಣಗಳು ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಹೇಗೆ ಸಂವಹಿಸುತ್ತದೆ ಎಂದು ತೋರುವ “ಜೀನ್ ಮ್ಯಾಪ್” ಒಂದು ಹೀಗೆ ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಸಿದ್ಧವಾಯಿತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”

Read More

ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು” ಇಂದಿನಿಂದ

ಮನುಷ್ಯನಿಗೆ ಮನುಷ್ಯನೇ ಹುಟ್ಟುವ ತದ್ರೂಪಿತನ ಪುರಾತನ ಕಾಲದಿಂದಲೂ ಕುತೂಹಲ ಮೂಡಿಸಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಗ್ರೀಕ್ ಗಣಿತಜ್ಞ-ತತ್ವಶಾಸ್ತ್ರಿ ಪೈಥಾಗೊರಸ್ ಅನುವಂಶೀಯತೆಯ ಸೂತ್ರ ವೀರ್ಯದಲ್ಲಿದೆ ಎನ್ನುತ್ತಾನೆ. ಅವನ ಪ್ರಕಾರ, ವೀರ್ಯ ಪುರುಷನಿಂದ ಹೊರಬರುವ ಮುನ್ನ ದೇಹದ ಎಲ್ಲಾ ಭಾಗಗಳಲ್ಲಿ ಹರಿದು ಆ ಭಾಗಗಳೆಲ್ಲದುರ ಮಾಹಿತಿಯನ್ನೂ ಕಲೆಹಾಕಿ ತದ್ರೂಪಿ ಇರುವ ಬೀಜವಾಗುತ್ತದೆ. ಈ ಬೀಜ ಗರ್ಭವನ್ನು ಸೇರಿದಾಗ, ಆ ತದ್ರೂಪಿಗೆ ಬೇಕಿರುವ ಪೋಷಕಾಂಶ ನೀಡಿ ಅದನ್ನು ದೊಡ್ಡದು ಮಾಡುವುದಷ್ಟೇ ಹೆಣ್ಣಿನ ಕೆಲಸ.
ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”

Read More

ಒಲಿವಿಯಾ ನ್ಯೂಟನ್ ಜಾನ್ ಮತ್ತು ಬೆಂಗಳೂರು ಒಳ ಚರಂಡಿ ಆಫೀಸು

ಮ್ಯಾಕ್ಸ್ ಬೋರ್ನ್ ಬೆಂಗಳೂರಿನಲ್ಲಿದ್ದ ಕೆಲವೇ ತಿಂಗಳುಗಳಲ್ಲಿ, ರಾಮನ್‌ರ ಮೂಲಕ ಅವರಿಗೆ ಮೈಸೂರು ಸಂಸ್ಥಾನದ ಅಂದಿನ ಹಲವಾರು ಗಣ್ಯರ ಪರಿಚಯವಾಯಿತು. ಹೀಗೆ ಪರಿಚಯವಾದವರಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಸಾಹೇಬರೂ ಒಬ್ಬರು. ಆ ಕಾಲದಲ್ಲಿ, ಇಸ್ಮಾಯಿಲ್ ಸಾಹೇಬರು ಬೆಂಗಳೂರಿನಲ್ಲಿ ಹಲವಾರು ಸಾರ್ವಜನಿಕ ಮೂಲ ಸೌಕರ್ಯ ಮತ್ತು ಕಟ್ಟಡಗಳನ್ನು ನಿರ್ಮಿಸುವ ಆಲೋಚನೆಯಲ್ಲಿದ್ದರು. ಈ ಕಟ್ಟಡಗಳನ್ನು ವಿನ್ಯಾಸ ಮಾಡಲು ಅವರು ಒಬ್ಬ ನುರಿತ ಆರ್ಕಿಟೆಕ್ಟ್‌ಗಾಗಿ ಹುಡುಕಾಟದಲ್ಲಿದ್ದರು.
ಶೇಷಾದ್ರಿ ಗಂಜೂರು ಬರಹ

Read More

ಬಹುಮಾನವಾಗಿ ಸಿಕ್ಕ ಆನೆಮರಿಯೊಂದರ ಜೀವನಗಾಥೆ

ಕೊರೆಯುವ ನೆಲದ ಮೇಲೆ ಕಾಲಿಡುತ್ತಿದ್ದ ಆನಾಬೆಲ್‌ಳ ಪಾದಗಳಲ್ಲಿ ಗಾಯವಾಗತೊಡಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆನೆಗಳಲ್ಲಿ, ಪಾದಗಳೂ ನಮ್ಮ ಕಿವಿಯೊಳಗಿನ ಇಯರ್-ಡ್ರಂಗಳಂತೆ ಕೆಲಸಮಾಡುತ್ತವೆ. ವಿಜ್ಞಾನಿಗಳು ಹೇಳುವಂತೆ, ಆನೆಯ ಗುಂಪೊಂದು ನಡೆಯುತ್ತಿದ್ದರೆ, ಆ ಗುಂಪಿನಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಆನೆಯೊಂದು, ಆ ಆನೆಗಳ ನಡೆತದಿಂದಾಗುವ ಕಂಪನಗಳನ್ನು ತನ್ನ ಪಾದದ ಮೂಲಕವೇ ಗುರುತಿಸಬಲ್ಲದಂತೆ.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಆನೆಮರಿಯ ಬದುಕಿನ ಕತೆಯೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ

Read More

ಇನ್ಸುಲಿನ್ ಎಂಬ ‘ಜೀವಕಾರಕ’ದ ವಿಕಾಸ

ಎರಡು ವರ್ಷ ಮೆಡಿಕಲ್ ಓದಿದ. ಆ ಶಿಕ್ಷಣ ಮುಗಿಸುವ ಮುನ್ನವೇ ಮಿಲಿಟರಿ ಸೇರಲು ಅರ್ಜಿ ಹಾಕಿದ. ಅವರು ಸೇರಿಸಿಕೊಳ್ಳಲಿಲ್ಲ. ಕೆಲವು ತಿಂಗಳು ಬಿಟ್ಟು ಮತ್ತೆ ಪ್ರಯತ್ನಿಸಿದ. ಮತ್ತೆ ನಕಾರ. ಒಂದು ವರ್ಷದ ನಂತರ ಮಗದೊಮ್ಮೆ ಪ್ರಯತ್ನಿಸಿದ. ಅಷ್ಟರಲ್ಲಾಗಲೇ, ಮೊದಲ ಮಹಾಯುದ್ಧ ಪೂರ್ಣ ಭರಾಟೆಯಲ್ಲಿ ಸಾಗಿತ್ತು. “ಸೇನೆಗೆ ಸೇರ್ತೀನಿ” ಅನ್ನುವವರನ್ನು “ಬೇಡ” ಅನ್ನುವ ಪರಿಸ್ಥಿತಿಯಲ್ಲಿ ಅಂತೂ ಕೆನಡಾ ಇರಲಿಲ್ಲ. ಅದರಲ್ಲೂ, ರಣರಂಗದಲ್ಲಿ ವೈದ್ಯರ ಕೊರತೆ ಕಾಡುತ್ತಿತ್ತು. ಈ ಬಾರಿ ಅವನ ಅರ್ಜಿ ಫಲಿಸಿತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ