Advertisement
ಶಿಲ್ಪಾ ಮ್ಯಾಗೇರಿ ಬರೆದ ಎರಡು ಕವಿತೆಗಳು

ಶಿಲ್ಪಾ ಮ್ಯಾಗೇರಿ ಬರೆದ ಎರಡು ಕವಿತೆಗಳು

ನೆರಳಗುಂಟ ನಡೆವ ಉಮೇದು

ಏಳು ಸಮುದ್ರ ದೂರವೆನಿಸಲಿಲ್ಲ
ಅವನ ನೆರಳಗುಂಟ ನಡೆವ
ಉಮೇದಿನ ಮುಂದೆ

ಲೋಕದ ಸೋಜಿಗಕೆ ಅವನದೆ ಹೆಸರಿಡಬೇಕು
ಮಾತಲ್ಲಿ ಬೆಣ್ಣೆ ತೋಳಲ್ಲಿ ಮುಲಾಮು ಹೊತ್ತವನಿಗೆ

ಬಯಲಲ್ಲಿ ಸ್ಥಾವರಂತೆ
ಮನಸಿಗೆ ತೋಚಿದ್ದು ಗೀಚುತ್ತಾನೆ
ಎದೆಯ ತುಂಬ ಅವನದೇ
ಗೋಚರ ಅಗೋಚರ ರೇಖೆಗಳೆ

ಮೌನಗೌರಿಯ ಮಾತ ಮಳೆಗರೆಸುವುದು
ಇಳಿಸಂಜೆ ಬಾನಿಗೆ ರಂಗು ಬಳಿಯುವುದು
ಕತ್ತಲ ದಾರಿಗೆ ಕಣ್ಣದೀಪ ಕಾವಲಿರಿಸಿ
ಒಲವ ಹಾಸಿನಲ್ಲಿ
ಬದುಕಿನ ಮೈಲುಗಲ್ಲು ದಾಟಿಸುತ್ತಾನೆ
ಎದೆಗೆದೆಯ ಮುದ್ರೆಯೊತ್ತಿ
ಏನೊಂದು ನುಡಿಯೊಡೆಯದೆ ಆತ್ಮದ ಆಣೆಯಿಟ್ಟು.

*****

ನಿವೇದನೆ

ಮತ್ತೆ ಮತ್ತೆ ಕರಗಿ ಹೋಗುತ್ತೇನೆ
ಮಾತಿಗಲ್ಲ
ಪ್ರೀತಿಗೂ ಅಲ್ಲ
ತುಟಿವರೆಗೂ ಬಂದ ಉಸಿರು ನುಂಗಲು ಅವ ಪಡುವ ಕಷ್ಟಕ್ಕೆ

ಇಷ್ಟಿಷ್ಟೇ ಕನಲಿಬಿಡುತ್ತೇನೆ
ಮುತ್ತಿಗಲ್ಲ
ಗತ್ತಿಗೂ ಅಲ್ಲ
ಕಣ್ಣು ತುಂಬಿಕೊಂಡ ತವಕ ತಡೆಯಲು
ಅವ
ಶತಾಯ ಗತಾಯ ಹರಸಾಹಸ ಪಡುವಾಗ

ಸೋತು ನಿಲ್ಲುತ್ತೇನೆ
ಬ್ರಹ್ಮಾಂಡದಂತೆ ಮುತ್ತಿರುವ
ಬಯಕೆಗಳು
ತೂಗಿ ತೊನೆವ ಅವ
ಬೊಗಸೆ ಪ್ರೀತಿ ಬಯಸಿ ಮಂಡಿಯೂರಿ
ಮತ್ತದೆ ಮೌನಕ್ಕೆ ಶರಣಾದಾಗ

ಸಾವಿರ ಸಂಜ್ಞೆ ಸೂಸುವ
ಕಂಗಳಲಿ ಎಂಥದೊ
ಅಮಾಯಕತೆ ಮನೆಮಾಡಿದಾಗ

ಶಿಲ್ಪಾ ಮ್ಯಾಗೇರಿ ಗದಗಿನ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟು ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Hanamanta v somanakatti

    ತುಂಬಾ ಚೆನ್ನಾಗಿದೆ ಮೇಡಂ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ