Advertisement
ಕಮಲಾ ದಾಸ್ ಕವಿತೆ: ಅಶೋಕ್ ಕುಮಾರ್ ಅನುವಾದ

ಕಮಲಾ ದಾಸ್ ಕವಿತೆ: ಅಶೋಕ್ ಕುಮಾರ್ ಅನುವಾದ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಡಾ.ಅಶೋಕ್ ಕುಮಾರ್ ಅನುವಾದಿಸಿದ ಕಮಲಾ ದಾಸ್ ಬರೆದ ಕವಿತೆ.

 

ಬೆಳವಣಿಗೆ

ಕಾಲಹೆಬ್ಬೆರಳ ತುದಿಯಲ್ಲಿ ನಿಂತು
ಕೈಗಳನು ನಾ ಮೇಲಕ್ಕೆತ್ತಿದರೆ
ಆಗಸದ ಮೋಡಗಳ ತುಣುಕುಗಳು
ನನ್ನ ಕೈಬೆರಳುಗಳನು ಮರಗಟ್ಟಿಸುತ್ತವೆ

ನಿಂತಲ್ಲೆ ನಾನಿಂತು ರಿಂಗಣ ಸುತ್ತುವಾಗ
ಮರದಕೊಂಬೆಗಳು ತಾಗಿ ನನ್ನ
ಕೈಗಳು ಘಾಸಿಗೊಳ್ಳುತ್ತವೆ

ಸ್ಪರ್ಶವನು ವೇದನೆಯಾಗಿ ಮಾರ್ಪಡಿಸುವ
ಸೆರೆಮನೆಯಲ್ಲಿರುವೆ ನಾನು
ಸೊರಗುತ್ತ ಬರುತಿರುವ
ಬ್ರಹ್ಮಾಂಡ ವೀಥಿಗಳಲ್ಲಿ
ಭ್ರಮಣ ನಡೆಸಿ ದಣಿದಂಥ,
ಹಳಿತಪ್ಪಲು ಹಂಬಲಿಸುವ
ರೈಲುಗಾಡಿಯಂತೆ
ಅಲ್ಪ ಸ್ವಾತಂತ್ರ್ಯಕ್ಕಾಗಿ ಹಾತೊರೆಯುವಂಥ,
ಒಂದು ಕಡು ನೀಲಿ ಗ್ರಹ ನಾನು

ನನಗಿನ್ನು ಬೆಳೆಯಲು ಜಾಗವಿಲ್ಲ
ಉಸಿರಾಡಲು ವಾಯುವಿಲ್ಲ
ಈ ಹಳೆಯ ಲೋಕದಲಿ
ಐದೂವರೆ ಅಡಿಯುದ್ದದ ಒಂದು ಶವಪೆಟ್ಟಿಗೆಗಷ್ಟೇ
ಇನ್ನು ನನ್ನನು ಮಣಿಸುವುದು ಸಾಧ್ಯ.

About The Author

ಡಾ. ಅಶೋಕ್ ಕುಮಾರ್

ಶಸ್ತ್ರಚಿಕಿತ್ಸಾ ವೈದ್ಯರಾಗಿರುವ ಡಾ.ಅಶೋಕ್ ಕುಮಾರ್ ಅನುವಾದಸಾಹಿತ್ಯದಲ್ಲಿ ಆಸಕ್ತಿ ಉಳ್ಳವರು. ಮಲಯಾಳಂ ಮತ್ತು ತಮಿಳು ಭಾಷೆಗಳಿಂದ ಹಲವು ಅನುವಾದಗಳನ್ನು ಮಾಡಿದ್ದಾರೆ.ತಮ್ಮ ಅನುವಾದಕ್ಕಾಗಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರು ವಾಸಿ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ