Advertisement
ಜಹಾನ್ ಆರಾ ಬರೆದ ಈ ದಿನದ ಕವಿತೆ

ಜಹಾನ್ ಆರಾ ಬರೆದ ಈ ದಿನದ ಕವಿತೆ

ತೀರದಲ್ಲಿ ನಿಂತವಳು

ಕಡಲು ಉಕ್ಕಿ ಅಬ್ಬರಿಸಿ
ಶಾಂತವಾಯಿತು ಎಂಬುವುದೇ ಭ್ರಮೆ
ತೀರದ ಸಹಜ ಅವಳ ನೋಟ
ಆ ಮೌನ ಹಾಗಲ್ಲ
ಸಾವಿನ ಬಿಲದಲ್ಲಿರುವ
ಇಲಿಯ ಮೇಲೆ ಹದ್ದಿನ ಕಣ್ಣು
ಅದಕ್ಕೂ ಆಸೆ ಮತ್ತೇನಿಲ್ಲ

ಚಂಡಮಾರುತ ಕಡಲಿಗೋ
ಅಲೆಗಳಿಗೋ ತೀರಕೋ ಮರಳಿಗೋ
ಆ ಮನಕೊ ಬುದ್ದಿವಂತರು
ಇನ್ನೂ ನಿರ್ಧರಿಸಿಲ್ಲ

ಅವಳು ತೋಳುಗಳನ್ನು ಚಾಚಿ
ನಿಂತು ಬಿಟ್ಟಿದ್ದಾಳೆ
ಕಡಲನು ಮಡಿಚಿಟ್ಟುಬಿಡಲು
ಆದರೆ, ಸೂರ್ಯ
ಜೊತೆ ನೀಡುತ್ತಿಲ್ಲ

ಭಾವ ದಿಗಂಬರವಾಗಿ ಅಲೆಯುತ್ತಿರುವಾಗ
ಅಂಬರಕ್ಕೂ ಲಜ್ಜೆಯ
ಸೆರಗು ಸರಿಸುವ ಬಯಕೆ

ಭೂಮಿಯ ನಡುಕಕ್ಕೆ ಮಾತ್ರ
ಇಲ್ಲಿ ಅಳತೆ ಪ್ರಮಾಣ
ಮುತ್ತುಗಳ ಉತ್ಪಾದಕವೆನ್ನುವರೆ ಎಲ್ಲ
ಸ್ವಾತಿ ಮುತ್ತನ್ನು ಬಂಧಿಸಿದವ
ಎನ್ನುವವರಾರು
ಈ ಕಡಲಿಗೆ
ಅದಕ್ಕೆ ಅದರದೇ ಚೆಲ್ಲಾಟ
ಮತ್ತೇನಿಲ್ಲ

ಈಗ ಅವಳಿಗೂ ಇದೇ ಅಭ್ಯಾಸ
ಆಕಾಶ ನೋಡುವುದನ್ನು ಬಿಟ್ಟು
ಸಮುದ್ರದ ಮೇಲಷ್ಟೇ ಅವಳ ದೃಷ್ಟಿ
ಥೇಟ್ ತೀರದಲಿ ಬಾಗಿ ನಿಂತ
ತೆಂಗಿನ ಮರದಂತೆ

ಜಹಾನ್ ಆರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ
ಭಾವಜೀವ, ಹಂಗಿಲ್ಲದ ಹಾದಿ ಇವರ ಪ್ರಕಟಿತ ಕವನ ಸಂಕಲನಗಳು

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ