ಅಣ್ಣಿಗೇರಿಯ ಅಮೃತೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಉತ್ತರ ಕರ್ನಾಟಕದ ಅನೇಕ ದೇವಾಲಯಗಳ ಮುಖ್ಯ ಆಕರ್ಷಣೆ ಅವುಗಳ ಬಾಗಿಲವಾಡದ ಸೂಕ್ಷ್ಮಕೆತ್ತನೆಯೇ ಎಂದರೆ ಅತಿಶಯೋಕ್ತಿಯಲ್ಲ. ಅಣ್ಣಿಗೇರಿ ದೇವಾಲಯವೂ ಅದಕ್ಕೆ ಹೊರತಲ್ಲ. ಒಂಬತ್ತು ಪಟ್ಟಿಕೆಗಳಿರುವ ದ್ವಾರಪಟ್ಟಕದ ಸೊಬಗನ್ನು ಎಷ್ಟು ವರ್ಣಿಸಿದರೂ ಸಾಲದು. ಒಂದೊಂದು ಸಾಲಿನಲ್ಲಿ ಅನುಕ್ರಮವಾಗಿ ಸಿಂಹಮುಖಗಳು…”
ಪಂಕಜನಹಳ್ಳಿಯ ಮಲ್ಲಿಕಾರ್ಜುನ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮುಂಭಾಗದ ಕಂಬದ ಒಳಬದಿಗೆ ಕುಂಭಗಳಿಂದ ಹೊರಟ ಶಿಲಾಲತೆಗಳೂ, ಬಾಗಿಲ ಎದುರಾಗಿ ಶೈವ ದ್ವಾರಪಾಲಕರ ದೊಡ್ಡಶಿಲ್ಪಗಳೂ ಕಂಡುಬರುತ್ತವೆ. ಮಂಟಪದ ಒಳಗಿನ ಕಂಬಗಳ ಮೇಲಿನ ಉಬ್ಬುಶಿಲ್ಪಗಳಲ್ಲಿ ಗಣಪತಿ, ಮಹಿಷಮರ್ದಿನಿ, ಕೈಮುಗಿದು ನಿಂತ ನಂದೀಶ್ವರ ಹಾಗೂ ಭೈರವರ ಶಿಲ್ಪಗಳು ಆಕರ್ಷಕವಾಗಿವೆ. ಯಕ್ಷನು ಹೊತ್ತಂತೆ ವಿನ್ಯಾಸಗೊಂಡಿರುವ ಕಂಬವೊಂದರ ಮೇಲೆ..”
ಬಳ್ಳಿಗಾವೆಯ ತ್ರಿಪುರಾಂತಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಒಳಗುಡಿಯ ಮಂಟಪದಲ್ಲಿ ಗರ್ಭಗುಡಿಯ ಶಿವಲಿಂಗದತ್ತ ಮುಖಮಾಡಿ ಕುಳಿತ ನಂದಿ ಆಕರ್ಷಕ. ಬಾಲ, ಗೊರಸು, ಗಂಗೆದೊಗಲು ಮೊದಲಾಗಿ ಸುಸ್ಥಿತಿಯಲ್ಲಿರುವ ಈ ನಂದಿಯ ಶಿಲ್ಪ ನಮ್ಮ ನಾಡಿನಲ್ಲಿರುವ ಈ ಮಾದರಿಯ ಅತ್ಯಾಕರ್ಷಕ ವಿಗ್ರಹಗಳಲ್ಲೊಂದೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ನಡುಮಂಟಪದ ಕಂಬಗಳ ಬುಡದ ಚೌಕದಲ್ಲಿ ಕೀರ್ತಿಮುಖಗಳೊಳಗೆ ದೇವತೆಯರ…”
ಮುತುಕೂರಿನ ಕೇಶವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ವಿಜಯನಗರದ ಕಾಲದಲ್ಲೇ ನಿರ್ಮಾಣವಾದುದೆಂದಿಟ್ಟುಕೊಂಡರೂ ಐದುನೂರು ವರುಷಗಳಿಗೂ ಹಳೆಯದು. ತಿರುಪತಿಯ ವೆಂಕಟೇಶನಂತೆ ಕೊಳಗದ ಕಿರೀಟ ಧರಿಸಿದ ಕೇಶವ ಬಲಗೈಯಲ್ಲಿ ಪದ್ಮ, ಬಲಮೇಲುಗೈಯಲ್ಲಿ ಶಂಖ, ಎಡಮೇಲುಗೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಗದೆಗಳನ್ನು ಧರಿಸಿದ್ದಾನೆ. ಬಲಗೈಯಲ್ಲಿ ಪದ್ಮದ ದೇಟನ್ನು ಹಿಡಿದಿರುವಂತೆಯೇ ವರದಹಸ್ತನೂ ಆಗಿರುವ ಕೇಶವನ ಶಿಲ್ಪವು ವಸ್ತ್ರದ ನಿರಿಗೆಗಳಿಂದ ಮೊದಲುಗೊಂಡು ಕೈಯ ಉಗುರುಗಳವರೆಗೆ ಎಲ್ಲ ಸೂಕ್ಷ್ಮಾಂಶಗಳನ್ನೂ ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಸೊಂಟಕ್ಕೆ ಕಟ್ಟಿದ ಪಟ್ಟಿಯ ನಡುವೆ… “
ಉಮ್ಮತ್ತೂರಿನ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಉಮ್ಮತ್ತೂರಿನಲ್ಲಿರುವ ದೇವಾಲಯಗಳ ಸಂಖ್ಯೆಯಿಂದಲೇ ಸ್ಥಳೀಯ ಐತಿಹಾಸಿಕ ಮಹತ್ವವನ್ನು ಅಂದಾಜು ಮಾಡಬಹುದು. ರಂಗನಾಥ, ಭುಜಂಗೇಶ್ವರ, ಆಂಜನೇಯ, ಸಪ್ತಮಾತೃಕಾ, ವೀರಭದ್ರ ಗುಡಿಗಳಲ್ಲದೆ ಹದಿಮೂರನೆ ಶತಮಾನಕ್ಕೆ ಸೇರಿದ ವರ್ಧಮಾನ ಬಸದಿಯೂ ಇಲ್ಲಿ ಕಂಡುಬರುತ್ತವೆ. ಇಪ್ಪತ್ನಾಲ್ಕನೆ ತೀರ್ಥಂಕರನಾದ ವರ್ಧಮಾನ…”
ಕೋಲಾರದ ಸೋಮೇಶ್ವರ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ದೇಗುಲವನ್ನು ಪ್ರವೇಶಿಸುವುದಕ್ಕೆ ಮುನ್ನವೇ ಮನಸೆಳೆಯುವ ಅಪೂರ್ವನಿರ್ಮಿತಿಯಿದು. ದೇವಾಲಯದ ಸಮೀಪಕ್ಕೆ ಬರುತ್ತಿರುವಂತೆಯೇ ಬೃಹತ್ತಾದ ರಾಜಗೋಪುರ, ಅದಕ್ಕೆ ತಕ್ಕ ಎತ್ತರವಾದ ಪ್ರವೇಶದ್ವಾರಗಳು ನಿಮ್ಮನ್ನು ಸ್ವಾಗತಿಸುತ್ತವೆ. ದ್ವಾರದ ಅಕ್ಕಪಕ್ಕದ ಗೋಡೆಗಳ ಮೇಲಿನ ನಾಟ್ಯಶಿವ, ಭೈರವನ ಮೂರ್ತಿಗಳು ಹಾಗೂ ಗಣಪತಿಯೇ ಮೊದಲಾದ ಶಿವನ ಪರಿವಾರದವರ ಶಿಲ್ಪಗಳ ಕೆತ್ತನೆ ಅತ್ಯಾಕರ್ಷಕವಾಗಿದೆ..”
ಬಿನ್ನಮಂಗಲದ ಮುಕ್ತೇಶ್ವರ ದೇಗುಲ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ರಾಮಾನುಜಾಚಾರ್ಯರ ವಿರುದ್ಧ ದ್ವೇಷ ಸಾಧಿಸಿ, ವೈಷ್ಣವ ವಿರೋಧಿಗಳೆಂಬ ಅಪಖ್ಯಾತಿಗೆ ಗುರಿಯಾದ ಚೋಳರು ಈ ಅಪವಾದದಿಂದ ಪಾರಾಗುವ ಸಲುವಾಗಿ ತಮ್ಮ ಕಾಲದ ಹಲವು ದೇಗುಲನಿರ್ಮಿತಿಗಳಲ್ಲಿ ವಿಷ್ಣುವಿನ ರೂಪಗಳಿಗೂ ಸ್ಥಾನ ಕಲ್ಪಿಸುವ ಉದ್ದೇಶ ಹೊಂದಿದ್ದಂತೆ ತೋರುತ್ತದೆ. ಈ ಉದ್ದೇಶಕ್ಕೆ ತಕ್ಕಂತೆಯೇ ಬಿನ್ನಮಂಗಲದ ದೇವಾಲಯ ರೂಪುಗೊಂಡಿರುವುದನ್ನು ಕಾಣಬಹುದು…”
ಕುಪ್ಪಗದ್ದೆಯ ರಾಮೇಶ್ವರ ದೇವಾಲಯ: ಟಿ.ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಈ ಗುಡಿಯ ಮುಖಮಂಟಪದ ಸೊಗಸೇ ಬೇರೆ. ಐದು ಅಂಕಣ, ಇಪ್ಪತ್ನಾಲ್ಕು ಕಂಬಗಳು. ಒಂದು ಕಂಬದ ವಿನ್ಯಾಸದಂತೆ ಮತ್ತೊಂದಿಲ್ಲ. ಮಂಟಪದ ಮೂರು ಕಡೆ ಪ್ರವೇಶದ್ವಾರಗಳು. ಪೂರ್ವದ ಬಾಗಿಲಿಂದ ಒಳಬರುತ್ತಿರುವಂತೆಯೇ ಗರ್ಭಗುಡಿಗೆ ಎದುರಾಗಿ ಕುಳಿತ ನಂದಿವಿಗ್ರಹ ಅತ್ಯಾಕರ್ಷಕ. ನಂದಿಗೆ ತೊಡಿಸಿದ ಆಭರಣಗಳಿರಲಿ, ಗಂಟೆಯ ಹಗ್ಗದ ಗಂಟೂ ತೀರಾ ನೈಜವಾಗಿ ಶೋಭಿಸುತ್ತದೆ”
ಅರಕೆರೆಯ ಕೇಶವ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಹಾಸನ ಜಿಲ್ಲೆಯ ಬಾಣಾವರದಿಂದ ಜಾವಗಲ್ಲಿಗೆ ಹೋಗುವ ದಾರಿಯಲ್ಲಿ ಅರಕೆರೆ ಗ್ರಾಮ ಸಿಗುತ್ತದೆ. ಪೂರ್ವದಲ್ಲಿ ಇದಕ್ಕೆ ಸರ್ವಜ್ಞಪುರವೆಂಬ ಹೆಸರಿದ್ದಿತು. ವಿಷ್ಣುಭಕ್ತನಾದ ದಾಮೋದರ ಸೆಟ್ಟಿಯು ಈ ಊರಿನಲ್ಲಿ ತ್ರಿಕೂಟಾಚಲ ದೇಗುಲವೊಂದನ್ನು ನಿರ್ಮಿಸಿದ. ಹೊಯ್ಸಳ ಅರಸ ಎರಡನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿ ಕೇಶವನೂ, ಉಳಿದೆರಡು ಕಡೆಗಳಲ್ಲಿ ವೇಣುಗೋಪಾಲ…”









