ಲಕ್ಕುಂಡಿಯ ಬ್ರಹ್ಮಜಿನಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಕನ್ನಡ ನಾಡಿನ ಜೈನವಾಸ್ತುಶಿಲ್ಪದ ಉತ್ತಮ ಮಾದರಿಗಳಲ್ಲೊಂದೆಂದು ಪರಿಗಣಿತವಾಗಿರುವ ಲಕ್ಕುಂಡಿಯ ಬ್ರಹ್ಮಜಿನಾಲಯ ದೊಡ್ಡಆವರಣ, ವಿಶಾಲವಾದ ನಿರ್ಮಿತಿಗಳಿಂದ ಗಮನಸೆಳೆಯುತ್ತದೆ. ಅತ್ತಿಮಬ್ಬೆ ಕಟ್ಟಿಸಿದ ಗುಡಿಯ ಪೂಜಾನಿರ್ವಹಣೆಗೆ ಅನೇಕ ಭಕ್ತರು ದಾನದತ್ತಿಗಳನ್ನು ನೀಡಿದ ಶಾಸನಗಳು ಲಭ್ಯವಿವೆ. ಮುಖಮಂಟಪ, ಮಹಾಮಂಟಪ, ಅಂತರಾಳ, ಗರ್ಭಗುಡಿಗಳೆಲ್ಲವನ್ನೂ ಒಳಗೊಂಡಿರುವ ಈ ಆಲಯದ ಶಿಖರಭಾಗದಲ್ಲೂ ಶುಕನಾಸಿಗೆ… “
ಕುಬಟೂರಿನ ಕೈಟಭೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಪುರಾಣಕ್ಕಿಂತ ಐತಿಹಾಸಿಕವಾಗಿ ಹೆಚ್ಚಿನ ಮಹತ್ವ ಪಡೆದ ಈ ಕುಬಟೂರು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯ ಸಮೀಪವಿದೆ. ಕೈಟಭೇಶ್ವರ ದೇವಾಲಯವಿರುವ ಕುಬಟೂರಿಗೆ ಕುಪ್ಪತ್ತೂರು, ಕೋಟಿಪುರ ಮೊದಲಾದ ಹೆಸರುಗಳೂ ಇವೆ. ಕ್ರಿ.ಶ. ಮೂರನೆಯ ಶತಮಾನದ ಬನವಾಸಿಯ ಕದಂಬರಿಂದ ಮೊದಲುಗೊಂಡು ಬಾದಾಮಿಯ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಹಾಗೂ ಕೆಳದಿಯ ನಾಯಕರವರೆಗೆ…”
ಭುವನಗಿರಿಯ ಭುವನೇಶ್ವರಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಪ್ರಕೃತಿ-ಪುರುಷರ ಪ್ರತೀಕವಾದ ಶಕ್ತಿ-ಶಿವರೂಪಿ ದೇವತೆಗಳನ್ನು ಪ್ರಾಚೀನ ಕಾಲದಿಂದಲೂ ಶಿಲಾರೂಪದಲ್ಲಿ ಗುರುತಿಸಿಕೊಂಡು ಆ ದೇವದೇವಿಯರ ಆರಾಧನೆಯನ್ನು ರೂಢಿಯಲ್ಲಿ ಆಚರಿಸುತ್ತ ಬರಲಾಗಿದೆ. ಶಿವನು ಆಲಯಗಳಲ್ಲಿ ಲಿಂಗರೂಪಿಯಾಗಿಯೇ ಗೋಚರಿಸಿದರೆ, ದೇವಿಯ ಶಿಲಾರೂಪವನ್ನು ಲೋಹಮುಖ, ಪುಷ್ಪಾದಿ ಅಲಂಕಾರಗಳಿಂದ ಸಿಂಗರಿಸಲಾಗಿರುತ್ತದೆ. ಭುವನಗಿರಿಯಲ್ಲೂ ಭುವನೇಶ್ವರಿಯರೂಪವು ವ್ಯಕ್ತವಾಗಿರುವುದು ಹೀಗೆಯೇ.”
ಐಹೊಳೆಯ ದುರ್ಗದ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಐಹೊಳೆಯಲ್ಲಿರುವ ಅಪಾರಸಂಖ್ಯೆಯ ಗುಡಿಗಳಿಗೆ ಯಾವುದಾದರೊಂದು ಹೆಸರಿಡುವ ಸಮಸ್ಯೆ ಬ್ರಿಟಿಷರ ಆಳ್ವಿಕೆಯ ಕಾಲಕ್ಕೆ ಎದುರಾಯಿತು. ಬಹುತೇಕ ಗುಡಿಗಳಲ್ಲಿ ದೇವತಾಮೂರ್ತಿಗಳಿರಲಿಲ್ಲ. ಹಳ್ಳಿಯ ಜನರು ತಮತಮಗೆ ಸಿಕ್ಕ ಗುಡಿಯಂಗಳಗಳನ್ನು ಆಕ್ರಮಿಸಿಕೊಂಡು ವಾಸಸ್ಥಳವಾಗಿ ಮಾರ್ಪಡಿಸಿಕೊಂಡಿದ್ದರು. ಆಯಾ ಗುಡಿಯಲ್ಲಿ ವಾಸವಿದ್ದ ಜನರ ಹೆಸರೇ ಗುಡಿಗೂ ಅಂಕಿತನಾಮವಾಯಿತು.”
ರಾಮನಾಥಪುರದ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ರಾಮನಾಥಪುರದ ದೇಗುಲಗಳನ್ನು ಕಾಲಕಾಲಕ್ಕೆ ಜೀರ್ಣೋದ್ಧಾರಮಾಡಿ ನವೀಕರಿಸಿರುವುದರಿಂದ ಈ ನಿರ್ಮಿತಿಗಳು ಯಾವ ಯಾವ ಕಾಲದ್ದೆಂದು ನಿರ್ಣಯಿಸುವುದು ಕಷ್ಟ. ರಾಮೇಶ್ವರ ದೇವಾಲಯವೊಂದು ಹೊಯ್ಸಳಕಾಲದ್ದಾಗಿದ್ದು ಇದನ್ನೂ ಉಳಿದ ದೇಗುಲಗಳನ್ನೂ ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಎಲ್ಲ ದೇಗುಲಗಳಿಗೂ ಪೌರಾಣಿಕ ಹಿನ್ನೆಲೆ ತಳುಕುಹಾಕಿಕೊಂಡಿದೆ.”
ಮೂಗೂರಿನ ದೇಶೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ತ್ರಿಭಂಗಿಯಲ್ಲಿ ನಿಂತ ಭೈರವನ ಕೊರಳಿಗೆ ಸರ್ಪದ ಆಭರಣ. ಸುತ್ತಲಿನ ಪ್ರಭಾವಳಿಯಲ್ಲಿ ಮಕರಗಳೂ ಗಣದೇವತೆಗಳೂ ಕಂಡುಬರುತ್ತವೆ. ಸಪ್ತಮಾತೃಕೆಯರನ್ನು ಅವರವರ ವಾಹನಗಳೊಡನೆ ಚಿತ್ರಿಸಿರುವುದು ಗಮನಾರ್ಹ. ದ್ವಿಭುಜಗಳಿಂದ ಕೂಡಿದ ಸೂರ್ಯನ ವಿಗ್ರಹವು ಚಿಕ್ಕದಾಗಿದ್ದರೂ ಗಮನಸೆಳೆಯುತ್ತದೆ. ಎರಡೂ ಕೈಗಳಲ್ಲಿ ಕಮಲವನ್ನು ಧರಿಸಿದ ಸೂರ್ಯನ ಕಿರೀಟವು ಕೊಳಗದ ಆಕಾರದಲ್ಲಿದೆ.”
ಸುಗತ ಸಂಶಿರೋ ಚಿತ್ರೀಕರಣ: ಕುರಸೋವಾನ ಆತ್ಮಕತೆಯ ಮತ್ತೊಂದು ಪುಟ
“ಆಂತರಿಕ ಸಚಿವಾಲಯವು ಸಿನಿಮಾದ ಕುರಿತು ಏನು ಹೇಳಿದರು ಅನ್ನುವುದನ್ನು ಹೇಳುತ್ತೇನೆ. ಅದು ನೆನಪಾದರೇನೆ ಸಿಟ್ಟು ಉಕ್ಕುತ್ತದೆ. ಸಿಟ್ಟು ಮಾಡಿಕೊಳ್ಳುವುದು ನನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ ಆದರೂ ಅದನ್ನು ಹೇಳುತ್ತೇನೆ. ಆ ಸಮಯದಲ್ಲಿ ಸಚಿವಾಲಯವು ನಿರ್ದೇಶಕನ ಮೊದಲ ಚಿತ್ರವನ್ನು ಅವನ ನಿರ್ದೇಶನ ಪರೀಕ್ಷೆಯಂತೆ ಪರಿಗಣಿಸುತ್ತಿದ್ದರು. ಸುಗತ ಸಂಶಿರೊ ಮುಗಿಯುತ್ತಿದ್ದಂತೆ…”
ಮಹಾಕೂಟದ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಹಾಕೂಟೇಶ್ವರ ದೇವಾಲಯವು ಕಾಶಿತೀರ್ಥ ಹಾಗೂ ಶಿವಪುಷ್ಕರಣಿಗಳೆಂಬ ಕೊಳಗಳ ಬದಿಯಲ್ಲಿದೆ. ಇಲ್ಲಿನ ಪುಷ್ಕರಣಿಯ ಮಂಟಪದಲ್ಲಿ ಪಂಚಮುಖ ಶಿವಲಿಂಗವಿರುವುದೊಂದು ವಿಶೇಷ. ಮಹಾಕೂಟೇಶ್ವರ ದೇವಾಲಯವು ದ್ರಾವಿಡಶೈಲಿಯ ಶಿಖರವನ್ನು ಹೊಂದಿರುವ ದೇವಾಲಯಗಳ ಪೈಕಿ ಕರ್ನಾಟಕದಲ್ಲೇ ಮೊದಲಿನದೆಂಬ ಕೀರ್ತಿಗೆ ಪಾತ್ರವಾಗಿದೆ. ಗರ್ಭಗೃಹ, ಪ್ರದಕ್ಷಿಣಾಪಥ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿರುವ ದೇಗುಲದ ಮುಂಭಾಗದಲ್ಲಿ ನಂದಿಯ ಮಂಟಪವೂ ಇದೆ.”
ಮೂಡಬಿದರೆಯ ಸಾವಿರಕಂಬದ ಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮುಂದೆ ಕಾಣುವ ಬಸದಿಯ ಕಟ್ಟಡವು ಕಗ್ಗಲ್ಲಿನ ನಿರ್ಮಿತಿ. ಕಟ್ಟಡದ ಮೇಲುಭಾಗ ಮರದಿಂದ ಮಾಡಲ್ಪಟ್ಟಿದ್ದು ಹೆಂಚು ಹೊದಿಸಿದೆ. ಕರಾವಳಿಪ್ರದೇಶದ ಬಿಸಿಲು, ಗಾಳಿ, ಮಳೆಗಳನ್ನು ತಡೆಯಲು ಸಮರ್ಥವಾಗುವಂತಹ ವಾಸ್ತುಶೈಲಿಯುಳ್ಳ ನಿರ್ಮಾಣ. ಹಲವು ಮಂಟಪಗಳನ್ನುಳ್ಳ ಬಸದಿಯ ಕಟ್ಟಡದತ್ತ ಸೋಪಾನವೇರಿ ಹೋದರೆ ಮೊದಲಿಗೆ ನಕ್ಷತ್ರಾಕಾರದ ಮಂಟಪವನ್ನು ಕಾಣುವಿರಿ…”









