Advertisement
ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

ಕಾಡು ಹಡೆಯಬಹುದಿತ್ತು!

ಮಣ್ಣ ಸೊಗಡು ಹೀರುತ್ತ
ಮಳೆ ಕವಿತೆ ಬರೆವ
ಕವಿಗಳು ಅಥವಾ
ಮಳೆ ನೋಡಿ ಕವಿಯಾದವರೆಲ್ಲ
ಸೇರಿ
ಒಂದೊಂದು ಬೀಜ ಬಿತ್ತಿ
ಕಾವಲು ಕಾದು
ಕಾಡು ಹಡೆಯಬಹುದಿತ್ತು

ಗೂಬೆ ಮಂಗಟ್ಟೆ ಮಣಿಸೋರೆ
ನತ್ತಿಂಗ ಕುಟುರು ಹಕ್ಕಿಗಳು
ಹುಲಿ ನರಿ ಹಂದಿ ಜಿಂಕೆಗಳು
ಹಾವು ಹರಣೆ ಚೇಳುಗಳು
ಉಸಿರಾಡಿ ತಿಂದುಂಡು
ನೆಲವ ಪೊರೆಯುತ್ತಿದ್ದವು

ಸ್ವಸ್ಥ ಜಗವೊಂದು
ಪೊರೆ ಕಳಚುತ್ತಿತ್ತು
ಚಳಿ ಮಳೆ ಬೇಸಗೆಗಳು
ಮರ ಮರಳಿ ಬಂದು
ಹೂವಾಗಿ ಹಣ್ಣಾಗಿ
ಎದೆ ತೊಯ್ಯಿಸುತ್ತಿದ್ದವು

ನಿರಾಳ ನಿಶ್ಶಬ್ದ ನಿಗೂಢ
ಕತ್ತಲು
ಕತ್ತಲೊಳಗಿನ ಸದ್ದಲ್ಲದ
ಸದ್ದುಗಳು
ಜೀವಜಂತುಗಳ ಸಲಹಿ
ಜೋಗುಳ ಸಂತೈಸುತ್ತಿತ್ತು…..
….
ಕವಿತೆಗಳು
ಕವಿಗಳನ್ನು
ಕೊಂಡಾಡುತ್ತಿದ್ದವು!

About The Author

ವಿಜಯಶ್ರೀ ಹಾಲಾಡಿ

ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ