ಚಿಕ್ಕಮನೆಯಲ್ಲಿ ಚಕ್ಕೆ ತುಂಬಿದೆ!: ಎಂ ಆರ್ ಕಮಲಾ ಬರೆದ ಪ್ರಬಂಧ
“ಬಾಗಿಲಿದ್ದರು ಚಿಲಕವಿಲ್ಲದ, ಹಾಕಿಕೊಂಡರೂ ಹಾಕಿದಂತೆ ಕಾಣದ ವಿಚಿತ್ರ ಮನಸ್ಸಿನ ಕೋಣೆ. ಹೊರಳಿದರೆ ಬಿದ್ದೇ ಹೋಗುತ್ತೇವೆ ಎನ್ನುವಂಥ ಒಂದು ಕರಿಮರದ ಮಂಚ! ಪಕ್ಕದಲ್ಲಿದ್ದ ಪುಟ್ಟ ಸ್ಟೂಲ್ ಮೇಲೆ ಮನೆಯಲ್ಲಿದ್ದವರ ಹಾಸಿಗೆಗಳನ್ನು ಮಡಚಿ ಒಂದರ ಮೇಲೊಂದು ಪೇರಿಸಿಡಲಾಗಿರುತ್ತಿತ್ತು. ಕೋಣೆಯಂತೆ ಹಾಸಿಗೆ ಕೂಡ ಯಾರೊಬ್ಬರಿಗೂ ಸೇರಿರಲಿಲ್ಲ. ಆರು ಹಾಸಿಗೆಯನ್ನು ನಡುಮನೆಯಲ್ಲಿ ಹಾಸಿದರೆ ಹತ್ತು ಜನ ಮಲಗುತ್ತಿದ್ದೆವು.”
ನಿಮ್ಮೂರ ದಾರಿಯಲಿ.. ನಮ್ಮನ್ನೇ ಹುಡುಕುತ್ತಾ..: ಬಿ.ಕೆ. ಸುಮತಿ ಲೇಖನ
“ಕೆಲವು ಮತ್ತೆ ಮತ್ತೆ ಕಾಡುವ ಊರುಗಳು. ನಾವು ನೋಡದಿದ್ದರೂ ನಮ್ಮೊಳಗೆ ಬೆಳೆದಿರುವಂಥದ್ದು. ಮತ್ತೆ ಕೆಲವು ಕಲ್ಪನೆಗಳು. ಈ ಕಲ್ಪನೆಗಳು ನಮ್ಮನ್ನು ಒಂದು ವಿಚಿತ್ರ ಭಾವದಲ್ಲಿ ಸಿಲುಕಿಸುತ್ತವೆ. ರಾಮಾಚಾರಿ ಮತ್ತು ಚಿತ್ರದುರ್ಗ…. ನೋಡಿ… ಅವಿನಾಭಾವ ಸಂಬಂಧ… ಚಿತ್ರದುರ್ಗ ನೋಡದೆ ಇದ್ದರೂ.. ನಾಗರಹಾವು ಮೂಲಕ ನಾವು ಬಂಡೆ, ಬಿಸಿಲು, ನೆರಳಿನ ತಪ್ಪಲನ್ನು ತಪಿಸಿ ಅನುಭವಿಸುತ್ತೇವೆ.”
ಮಳೆಯೊಂದು ಮಧುರ ಕಾವ್ಯ : ಮುರ್ತುಜಾಬೇಗಂ ಬರಹ
“ಒಮ್ಮೆ ಚಿಂತೆಗಳ ಕಂತೆ ಗಂಟುಕಟ್ಟಿ ಕಿತ್ತೆಸೆದು ಬಿಸಾಕಿ ಬನ್ನಿ. ಒಂದ್ಸಲ, ಒಂದೇ ಒಂದ್ಸಲ ಅಂಗಳಕ್ಕೋ ಟೆರೆಸಿಗೋ ಹೋಗಿ ಸುರಿವ ಮಳೆಯಲ್ಲಿ ನಿಂತು ನೋಡಿ. ಅದೊಂದು ತಪನೆಯಂತಹ ಅನುಭಾವ. ಒಮ್ಮೊಮ್ಮೆ ಜೀವನದ ಕರಕಷ್ಟ ಕಾಲದಲ್ಲಿ ಸಮಸ್ಯೆಗಳ ಸಂತೆಯಲ್ಲಿ ದಿಕ್ಕು ತಪ್ಪಿ ನಿಂತಿರುವವನ ಹೆಗಲ ಮೇಲೆ ಬಹುಕಾಲದ ಹಳೆಯ ಗೆಳೆಯನೊಬ್ಬ ಕೈ ಇಟ್ಟಂತೆ.”
ಕವಿ ತಿರುಮಲೇಶ್ ಅನುವಾದಿಸಿದ ಅಮೇರಿಕಾದ ರಾಷ್ಟ್ರಕವಿ ಮರ್ವಿನ್ ಸಂದರ್ಶನ
“ಈ ಅನುವಾದ ಮಾಡುತ್ತ ಇರುವಾಗ, ಇದುವರೆಗೆ ಅನುವಾದದ ಕುರಿತು ನಾನು ಅರಿತುಕೊಂಡಿದ್ದೇನೆ ಎನ್ನುವುದೆಲ್ಲವೂ ಅಮಾನತಿನಲ್ಲಿರುತ್ತದೆ. ಇಂಗ್ಲಿಷ್ ನಲ್ಲಿ ಮಂತ್ರಗಳಿಲ್ಲ. ಇಂಗ್ಲಿಷ್ ಯಾವತ್ತೂ ಮಂತ್ರಿಸುವ ಭಾಷೆಯಾಗಿರಲಿಲ್ಲ, ಆದ್ದರಿಂದ ಬಳಸಬಹುದಾದ ಅಥವಾ ವಿಸ್ತರಿಸಬಹುದಾದ ಪರಂಪರೆಯಿಲ್ಲ. ನಾವು ಹಿಂದೆ ಮಾತಾಡಿದ ಮೌಖಿಕ ಪರಂಪರೆಯ ಮೇಲೆ ಕೆಲಸ ಮಾಡಬೇಕೆಂಬ ನನ್ನ ದೀರ್ಘಕಾಲಿಕ ಬಯಕೆಯಿದೆ..”
ಬಯಲು ಸೀಮೆಯ ಮಳೆ : ಕಪಿಲ ಪಿ. ಹುಮನಾಬಾದೆ ಲೇಖನ
“ಈ ಮಳೆಗಾಲದಲ್ಲಿ ಕೆಸರಿನಿಂದ ನೆಲ ಸಾರಿಸಿದ ಮನೆಗಳ, ಹಿತ್ತಲ ಗೋಡೆಯಿಂದ ಕರಿ ಇರುವೆಗಳು ಮನೆ ತುಂಬಾ ನುಗ್ಗುತ್ತವೆ, ಈ ಇರುವೆಗಳನ್ನು ಮನೆಯಿಂದ ತೆಗೆದು ಹೊರಗೆ ಹಾಕುವುದೇ ಒಂದು ಸಾಹಸ. ಇವು ಸ್ವಲ್ಪ ಕಚ್ಚಿದರೂ ಸಾಕು ಚರ್ಮ ಕಿತ್ತು ಬರುವಂತೆ ಹಿಡಿದಿರುತಿದ್ದವು. ಈ ಇರುವೆಗಳು ನಮ್ಮ ಮಳೆಗಾಲದ ಖಾಯಂ ಅಥಿತಿಗಳು. ಹಿತ್ತಲ ಗೋಡೆಯಿಂದ ನುಗ್ಗಿ ದೊಡ್ಡ ಗಡಿಗಿಗಳ ಸಾಲಿಂದ…”
ಕಥೆಯೊಂದನು ಹೇಳುವುದೆಂದರೆ:ಮಧುಸೂದನ್ ವೈ ಎನ್ ಬರಹ
“ನಾನು ಬರೆವ ಕಥೆಗಳಲ್ಲಿ ಬಿಟ್ಟು ನನಗೆ ಎಲ್ಲೂ ಉತ್ಪ್ರೇಕ್ಷೆಯ ಅಲಂಕಾರಿಕ ಮಾತುಗಳನ್ನು ಆಡಲಿಕ್ಕೆ ಬೇಕೆಂದರೂ ಬರಲ್ಲ. ತಿಣುಕುತ್ತೇನೆ. ಹಾಗಾಗಿ ಆ ಕಾದಂಬರಿ ಬಗ್ಗೆ ನಾನಿಲ್ಲಿ ಅಭಿವ್ಯಕ್ತಿಸುತ್ತಿರುವ ಭಾವನೆ ನನಗಾದ ಅನುಭವಕ್ಕಿಂತ ಅರ್ಧಕ್ಕರ್ಧ ಕಡಿಮೆ. ಓದಿದಾದನಂತರ ಮನಸ್ಸು ಒಂಥರ ಸಮೃದ್ಧವಾಗಿತ್ತು. ತುಂಬಿ ಬಂದಿತ್ತು. ಒಳ್ಳೆ ಮಳೆ ಆದಾಗ ನೆಲವೆಲ್ಲ ಹಸಿರಾಗುತ್ತಲ್ಲ ಹಾಗೆ.”
ಕಾವು ನೆರಳಿನ ಹುಡುಕಾಟದಲ್ಲಿ: ಮೇಘಾ ಯಲಿಗಾರ್ ಬರಹ
“ತಾನು ಕಂಡಿದ್ದ ಕನಸುಗಳನ್ನೇ ಬದುಕುತ್ತಿರುವುದಾದರೂ ಏನೋ ಕಳೆದುಕೊಂಡ ಭಾವ ಆಕೆಯನ್ನು ಕಾಡುತ್ತಿದೆ. ತಾನು ಕಳೆದುಕೊಂಡಿದ್ದು ಕತ್ತಲನ್ನೋ, ಕನಸುಗಳನ್ನೋ ಎಂಬ ಗೊಂದಲದಲ್ಲಿದ್ದವಳಿಗೆ ಯಾಕೋ ಗಾಢ ಬೆಳಕಿನಲ್ಲಿ ಕನಸುಗಳು ಹುಟ್ಟಲ್ಲವೇನೋ ಎಂಬ ಗುಮಾನಿ ಶುರುವಾಗಿದೆ. ಈಗ ಆಕೆ ಏಕಾಏಕಿ ಮಹಾನಗರದಲ್ಲಿ ಕನಸನ್ನು ಹುಟ್ಟಿಸುವ ಕತ್ತಲನ್ನು ಹುಡುಕಲು ಶುರು ಮಾಡಿ ಬಿಟ್ಟಿದ್ದಾಳೆ. ವೈಟ್ ಫೀಲ್ಡಿನ ಟೆಕ್ ಪಾರ್ಕುಗಳು, ರಿಂಗ್ ರೋಡಿನ ಸಾಲುದೀಪಗಳು, ಕೋರಮಂಗಲದ ಪಬ್ಬುಗಳು…”
ಮೇಘಂತೀ ಎಂಬ ಶಾಪಗ್ರಸ್ಥ ದೇವತೆ: ಡಾ. ಲಕ್ಷ್ಮಣ ವಿ. ಎ ಬರಹ
“ಆಗಾಗ ಅವಳು ಬರುತ್ತಾಳೆ ನನ್ನ ಕನಸಿನಲ್ಲಿ. ಬಂದು ಔಷಧಿ ಕೇಳುತ್ತಾಳೆ. ಹೀಗೆ ನನ್ನ ಬಳಿ ಕುಳಿತು ಲೋಕಾಭಿರಾಮವಾಗಿ ಹರಟುತ್ತ ಬೆಚ್ಚಿ ಬಿದ್ದವರಂತೆ ತಕ್ಷಣ ರಸ್ತೆಗಿಳಿದು ಓಡುತ್ತ ಅವರ ಹಿಂದೆ ಪೋಲಿಸರು, ಪುಡಿರೌಡಿಗಳು, ಈಗಷ್ಟೇ ಮೀಸೆ ಚಿಗುರಿರುವ ಪಡಪೋಶಿಗಳು, ಲಾರಿ ಡ್ರೈವರುಗಳು… ಅವಳು ಓಡುತ್ತಲೇ ಇದ್ದಾಳೆ, ಏಳುತ್ತಾ ಬೀಳುತ್ತಾ, ಅವಳ ಹಿಂದೊಂದು ಕ್ಷುದ್ರ ಲೋಕ ಬೆನ್ನಟ್ಟಿದೆ, ಅವಳನ್ನು ಹುರಿದು ತಿನ್ನಲು.”
ಕ್ಲಾಸಿಕಲ್ ಉರ್ದು ಗಜಲ್ ಮತ್ತು ಮೀರ್ ತಖಿ ಮೀರ್ ಕಾವ್ಯದ ಕುರಿತು ವಿಜಯರಾಘವನ್ ಬರಹ
“ಗಝಲ್ ಗಳನ್ನು ಸಾಮಾಜಿಕ, ಕಲಾತ್ಮಕ, ಧಾರ್ಮಿಕ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆಯಷ್ಟೇ ಅಲ್ಲ, ಅವನ್ನು ಮನೋವೈಜ್ಞಾನಿಕ ನೆಲೆಯಲ್ಲೂ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಂತಿಮವಾಗಿ ಅತ್ಯಂತ ಪ್ರಾಮಾಣಿಕ ಪ್ರೀತಿಯ ಕಾವ್ಯವನ್ನು “ನೈಜ-ಜೀವನದ” ಆದರ್ಶಪ್ರೇಮಿಗಳು ಬರೆಯಲಿಲ್ಲ. ಹೆಚ್ಚಿನ ಶಾಸ್ತ್ರೀಯ ಗಝಲ್ ಕವಿಗಳು ತಮ್ಮ ಇಡೀ ಜೀವನವನ್ನು ತೀಕ್ಷ್ಣವಾದ ಕಾಮಪ್ರಚೋದಕ-ಅತೀಂದ್ರಿಯ ನೋವಿನ ಸ್ಥಿತಿಯಲ್ಲಿ ಕಳೆಯಲಿಲ್ಲ.”









