Advertisement

ಸಾಹಿತ್ಯ

ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ವಾರದ ಕಥೆ: ಹೊರೆ

ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ವಾರದ ಕಥೆ: ಹೊರೆ

“ತಾನು ಕುಳಿತ ಬೆಂಚಿನ ಹಿಂದಿನಿಂದ ಸರಕ್ಕನೆ ಗಾಳಿ ಬೀಸಿದಂತಾಗಿ ಶಬ್ದವೂ ಆಯಿತು. ನೋಡಿದರೆ ನಾಯಿಯೊಂದು ಏನನ್ನೊ ಅಟ್ಟಿಸಿ ಹೋದಂತಾಯಿತು. ತನ್ನ ಪಾಲಿನ ಆಹಾರವನ್ನು ಇನ್ಯಾವುದೋ ನಾಯಿ ತಿನ್ನುತ್ತಿರುವುದನ್ನು ಕಂಡು ಕೆರಳಿದಂತಿತ್ತು. ಅದರ ನೆಗೆತದ ಓಟ ಹಾಗೂ ಗುರ್‍ಗುಟ್ಟುವ ಆಕ್ರಮಣಕಾರಿ ಶಬ್ದ ವಿರೋಧಿ ಬಣದ ನಾಯಿ ಕೇಳಿಸಿಕೊಂಡಿತು. ಪ್ಲಾಟ್ ಫಾರಂ ನಂಬರ್ ನಾಲ್ಕರಲ್ಲಿ ಮಲಗಿದ…”

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ಪಿ ಪೂಜಾರಿ ತಾಕೊಡೆ ಬರೆದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ಪಿ ಪೂಜಾರಿ ತಾಕೊಡೆ ಬರೆದ ಕಥೆ

“ಕಾವ್ಯಳಿಗೆ ಅಪ್ಪನ ನೆನಪುಗಳು ಅತಿಯಾಗಿ ಕಾಡಿ ನೋಡಬೇಕೆಂದೆನಿಸಿದಾಗಲೆಲ್ಲಾ ಅವಳಾಸೆಯನ್ನು ಪೂರೈಸಲು ಸಹಕರಿಸುವುದು ಸೀತಾಫಲದ ಮರವೇ… ಇಂದವಳಿಗೆ ಅಪ್ಪ ಹೇಗೆ ಕೆಲಸ ಮಾಡುತ್ತಿದ್ದಾರೆಂದು ನೋಡುವ ಆಸೆಯಿತ್ತು. ಮರವನ್ನೇರಿದ ಐದು ನಿಮಿಷದಲ್ಲಿಯೇ ಕಾವ್ಯ ಅಪ್ಪ ಕೆಲಸ ಮಾಡುವ ‘ವುಡ್‌ಲ್ಯಾಂಡ್ಸ್’ ಹೊಟೇಲ್ ಎದುರುಗಡೆ ನಿಂತಿದ್ದಳು. ಅಪ್ಪ ಮಾತ್ರ ಕಾವ್ಯಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.”

read more
ಸುವರ್ಣ ಚೆಳ್ಳೂರು ಬರೆದ ಈ ಭಾನುವಾರದ ಕಥೆ ʼಗುರುತುʼ

ಸುವರ್ಣ ಚೆಳ್ಳೂರು ಬರೆದ ಈ ಭಾನುವಾರದ ಕಥೆ ʼಗುರುತುʼ

“ಬಣವಿ ಹಾಕಿ ಕೈ ಸೋತಂಗಾದವು, ಬಿಸಲು ನೆತ್ತಿಗೆ ಬಂದು ನೆರಳೆಲ್ಲ ನೆಟ್ಟಗಾಗಿದ್ವು. ಹೊಲದ ಬದಿಗಿದ್ದ ಒಂದೆರಡು ಸೂರೆಪಾನ ಹೂವ್ವುಗಳಿಗೆ ದಿಕ್ಕು ತಪ್ಪಿದಂಗಾಗಿ ಮ್ಯಾಗ ಮೊಕ ಮಾಡಿಕ್ಯಂದು ನಿಂತಿದ್ವು. ಹುಲ್ಲು ಬಣವಿ ಹಾಕಿ ಸುರುಳಿ ಸುತ್ತಿ ಅವುಗಳ ನಡುವಿಗೆ ಉರಿಕೆನ್ನಿ ಬಿಗುತ್ತನಂಗ ಬಿಗುದು, ಒಂದರ ಮ್ಯಾಗೊಂದು ಹುಲ್ಲಿನ ದಂಡು ಸೇರಿಸಿ ದೊಡ್ಡ ಬಣವಿಗೆ ಕಮಾನಿನ ಆಕಾರ ಕೊಟ್ಟು, ನೆತ್ತಿ ಮ್ಯಾಗಳ ಬೆವರನ್ನ ಬೆರಳಿಂದ ಸವರಿ ಒರೆಸಿಗ್ಯಂದು…”

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆನಂದ ಋಗ್ವೇದಿ ಬರೆದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆನಂದ ಋಗ್ವೇದಿ ಬರೆದ ಕಥೆ

“ಅದೆಷ್ಟು ಕಣ್ಣೀರು ಹೀಗೇ ಇಂಗಿಹೋಗಿವೆ, ಕಣ್ಣಾಲಿಯ ಒಳಗೇ ಒಣಗಿಹೋಗಿವೆ? ದೇವಸಾಗರದ ಜನ ಕರೆಯುವಂತೆ ಗೋಪಜ್ಜ ಆಗ ಗೋಪಜ್ಜನಾಗಿರಲಿಲ್ಲ. ದೇವರಕೆರೆಯ ಬಿಷ್ಟಪ್ಪನ ಮಗ ಗೋಪಾಲ ಆಗ ಹದಿಹರೆಯದ ಹುಡುಗ. ದೇವರಕೆರೆಯ ತೋಡಿನಿಂದ ಹರಿದ ನೀರನ್ನ ಕಟ್ಟಿಹಾಕಿ, ಒಂದೇ ರಾತ್ರಿಯಲ್ಲಿ ಹೊಲದ ಬದುವಿಗುಂಟ ಹರಿಸಿ, ಇಡೀ ಹೊಲ ನಳನಳಿಸುವಂತೆ ಮಾಡುವ ಕಸುವಿನವ!”

read more
ಜಯಂತ ಕಾಯ್ಕಿಣಿ ಹೊಸ ಪುಸ್ತಕದಿಂದ ಒಂದು ಕತೆ

ಜಯಂತ ಕಾಯ್ಕಿಣಿ ಹೊಸ ಪುಸ್ತಕದಿಂದ ಒಂದು ಕತೆ

“ಅವ್ವನ ಸಿಡಿಮಿಡಿ, ಪ್ರತಿರೋಧ, ಆಘಾತ ಇವ್ಯಾವುದೂ ಕಾಣಿಸುವ ಸ್ಥಿತಿಯಲ್ಲೇ ಚಿತ್ತಿ ಇರಲಿಲ್ಲ. ಆಕಾಶದಿಂದಲೇ ತೂಗುಬಿದ್ದಿದ್ದ ಜೋಕಾಲಿಯೊಂದರ ಮೇಲೆ ಅವಳಾಗಲೇ ಕೂತುಬಿಟ್ಟಿದ್ದಳು. ಅದು ದಾಂಡೇಲಿಯಿಂದ ಬೆಳಗಾಂವ ತನಕ ಜೀಕುತ್ತಿತ್ತು. ನಡುವೆ, ಧಾರವಾಡದ ಕಿಲ್ಲೆಯ ನೆತ್ತಿಯನ್ನು ಚೂರು ಸವರಿ ಹೋಗುತ್ತಿತ್ತು.”
ಇತ್ತೀಚೆಗಷ್ಟೇ ಬಿಡುಗಡೆಯಾದ…

read more
ಪೂರ್ಣಿಮಾ ಮಾಳಗಿಮನಿ ಕಾದಂಬರಿಗೆ ಕೇಶವ ಮಳಗಿ ಬರೆದ ಮುನ್ನುಡಿ

ಪೂರ್ಣಿಮಾ ಮಾಳಗಿಮನಿ ಕಾದಂಬರಿಗೆ ಕೇಶವ ಮಳಗಿ ಬರೆದ ಮುನ್ನುಡಿ

“ಬಾಲ್ಯದಲಿ ಕಂಡ ಹೊಂಗನಸು, ಕಿವಿ ತುಂಬಿದ ಶುದ್ಧಗಾಳಿ, ಷೋಷಕರ ನಿಸ್ವಾರ್ಥ ಪ್ರೀತಿ, ತಾನು ಏನೆಲ್ಲ ಆಗಿ ಬದುಕಬೇಕೆಂಬ ಅವಳ ಒಳಗಣ್ಣಿನ ಆಶೋತ್ತರಗಳು ಆಕೆಯ ಮನಸೋ-ಎದೆಯೋ ಎಂಥದ್ದೋ ಒಂದರಲಿ ಸಿಲುಕಿ ಉಸಿರುಗಟ್ಟಿದಂತೆ ಬದುಕುತ್ತಿರುವವಳು. ಒಂದು ಮುಕ್ತ, ನಿರಪೇಕ್ಷಿತ ನಿರ್ವಾಜ್ಯ ಪ್ರೇಮ ಬಯಸಿದವಳಿಗೆ ದೊರಕುತ್ತಿರುವುದು ಕಣ್ಗಾವಲಿನ, ನಿರೀಕ್ಷೆಗಳಿಂದ ತುಂಬಿದ ಪ್ರೀತಿ.”

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆನಂದ ಈ. ಕುಂಚನೂರ ಬರೆದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆನಂದ ಈ. ಕುಂಚನೂರ ಬರೆದ ಕಥೆ

“ನನಗೆ ಯಾಕೋ ಅತೃಪ್ತಿ. ಅಗಸಿ ಬಾಗ್ಲನ್ನು ನೆನಸಿಕೊಂಡಂತೆಲ್ಲಾ ನನ್ನ ಎದೆ ಇನ್ನೂ ಹಿಗ್ಗಿ ನನ್ನ ಕಲ್ಪನೆಗಳು ತಮ್ಮ ಬೇಲಿ ದಾಟಿದಂತೆನಿಸಿ ಪುಟಿದೇಳುತ್ತಿದ್ದೆ. ಮೊದಲ ಬಾರಿ ಕಡಲನ್ನು ಕಂಡಾಗ, ಕುತೂಹಲದಿಂದ ಬಾನಗಲನ್ನು ವೀಕ್ಷಿಸಿದಾಗ ಉಂಟಾಗಿದ್ದ ಅನುಭವ ಇಲ್ಲೂ ಒಡಮೂಡಿತು. ನಮ್ಮೂರು ಪಟ್ಟಣವಾದರೂ ಆಸಂಗಿ ಎಂಬ ಹಳ್ಳಿ ಅದಕ್ಕೆ ಅಂಟಿಕೊಂಡೇ ಇದೆ.”

read more
ಸುಬ್ರಾಯ ಚೊಕ್ಕಾಡಿಯವರ ಆತ್ಮಕಥನದ ಆಯ್ದ ಭಾಗ

ಸುಬ್ರಾಯ ಚೊಕ್ಕಾಡಿಯವರ ಆತ್ಮಕಥನದ ಆಯ್ದ ಭಾಗ

“ಆಗ ಪ್ರಗತಿಪರರು ಎನ್ನಿಸಿಕೊಂಡಿದ್ದ ಲೇಖಕರೊಬ್ಬರು ನಮ್ಮ ಹೆಸರುಗಳನ್ನೆಲ್ಲ ಸರಕಾರಕ್ಕೆ ಕೊಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಕಾರಣ ನಮಗೇನೂ ತೊಂದರೆಯಾಗಲಿಲ್ಲ. ನಮ್ಮ ಗುಂಪಿನ ಉಳಿದವರೆಲ್ಲ ಸ್ವತಂತ್ರವಾಗಿ ಇದ್ದವರು. ನಾನು ಮಾತ್ರ ಸರಕಾರಿ ಕೆಲಸದಲ್ಲಿದ್ದ ಕಾರಣ ನಾನು ನನ್ನನ್ನು ರಕ್ಷಿಸಿಕೊಳ್ಳುವ ಅಗತ್ಯವಿತ್ತು. ಮನೆಯ ಪರಿಸ್ಥಿತಿಯೂ…”

read more
ಮೊಗಳ್ಳಿ ಗಣೇಶ್ ಬರೆದ ಈ ಭಾನುವಾರದ ಕಥೆ

ಮೊಗಳ್ಳಿ ಗಣೇಶ್ ಬರೆದ ಈ ಭಾನುವಾರದ ಕಥೆ

“ಹೌದಲ್ಲವೇ; ಇಷ್ಟೆಲ್ಲ ಆಯುಧಗಳಿಂದ ದಂಡಿಸುತ್ತಿರುವ ನಾವು ಅಪರಾಧಿ ಎಂದೆನಿಸಿದವರ ತಪ್ಪೇನು ಎಂದು ಅರಿಯದೇ ಇಷ್ಟು ಕಾಲ ದಂಡಿಸುತ್ತಲೇ ಬಂದಿದ್ದೇವಲ್ಲಾ… ತಿಳಿಯದೆ ಮಾಡಿದ ಹಿಂಸೆಯೂ ಹಿಂಸೆಯೇ ಅಲ್ಲವೇ… ಎಷ್ಟೊಂದು ತಲೆ ಕಡಿದೆವು… ಅರೆ ಜೀವ ಮಾಡಿ ಜೀವಂತ ಶವ ಮಾಡಿದೆವು… ಈಗಲೂ ಬಲಿಗಂಬದಲ್ಲಿ ಬಲಿಹಾಕುವ ನಮ್ಮ..”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ