Advertisement
ಅಂಜನಾ ಗಾಂವ್ಕರ್ ಬರೆದ ಈ ದಿನದ ಕವಿತೆ

ಅಂಜನಾ ಗಾಂವ್ಕರ್ ಬರೆದ ಈ ದಿನದ ಕವಿತೆ

ಒಂಟಿ ಓಲೆ
ಬೇಡಿಕೊಂಡಿತು ದೇವರಲ್ಲಿ,
ಮುಂದೆ ಬರುವುದು
ತನ್ನ ತದ್ರೂಪಿಯಾಗಲೆಂದು,
ಅತ್ತ ಕಿವಿಯು
ತುಂಡಾದ ಓಲೆಯ
ನೆನೆದು ನಕ್ಕಿತ್ತು,
ಊರ ಜಾತ್ರೆಯಲಿ ಕಂಡ
ಝುಮುಕಿ, ಲೋಲಾಕು,
ಹರಳಿನ ಕುಡುಕು,
ಬೆಳ್ಳಿಯದೋ, ಚಿನ್ನದ್ದೋ,
ಗ್ಯಾರಂಟಿದಾ ಅಥವಾ ಗಿಲಿಟ್ಟಾ,
ತೇರಿಕೋಟಾ, ಯಾವುದಿರಲಿ,
ಮೊದಲಿನಂತೆ ರಿಂಗ್
ಕಿವಿಗೆ ಫಿಕ್ಸಾಗಿರದಿರಲಿ,
ಯಾರೋ ಒಂಟಿ ಓಲೆ ಎಳೆದರು,
ಕಿವಿಯು ಹರಿಯಿತು,
ಒಂಟಿಯೋಲೆಯ ಜಂಟಿ
ಬರಲೇ ಇಲ್ಲ,
ಇತ್ತ ಕಿವಿಯು ಹರಿದು,
ಇತ್ತ ಕಿವಿಯ ಕನಸು
ನನಸಾಗದೇ ಕಮರಿತು…

About The Author

ಅಂಜನಾ ಗಾಂವ್ಕರ್

ಅಂಜನಾ ಗಾಂವ್ಕರ್ ಕುಮಟಾದಲ್ಲಿ ಶಿಕ್ಷಕ ತರಬೇತಿ ಮುಗಿಸಿ ಏಳು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಭಾಷೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಈಗ ಯಲ್ಲಾಪುರದ ದಟ್ಟ ಅರಣ್ಯದ ನಡುವೆ ಪುಟ್ಟ ಮನೆ ಮಾಡಿದ ರೈತ ಮಹಿಳೆ. ಕತೆ ಬರೆಯೋದು ಇವರ ಹವ್ಯಾಸ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ