Advertisement
ಶ್ರೀ ತಲಗೇರಿ ಬರೆದ ಎರಡು ಹೊಸ ಕವಿತೆಗಳು

ಶ್ರೀ ತಲಗೇರಿ ಬರೆದ ಎರಡು ಹೊಸ ಕವಿತೆಗಳು

ಗೆರೆ..

ಈ ತೂತಲ್ಲಿ
ಅದೆಷ್ಟು ಆಕಾಶ..
ಅಲ್ಲೇ ಉಳಿದ
ಅರ್ಧ ರೊಟ್ಟಿ
ಈ ರಾತ್ರಿಯಾದರೂ
ಕೊಡು,
ಗೊಣಗುವಳು ಪುಟ್ಟಿ..

ಕಿಸೆಯ ತೂತಿಂದ
ಮಲ್ಲಿಗೆಯ ಪರಿಮಳ
ಸೋರುತಿದೆ..
ಆರಾಧಿಸಬಹುದೇ
ಭಕ್ತಿಯಿಂದ
ಈ ರಾತ್ರಿಯಾದರೂ
ಕುತ್ತಿಗೆಯ ಮೇಲೆ
ಯಾವ ಗೀರಿಲ್ಲದೇ..
ಅಳುಕುವಳು ಅಮ್ಮ..

ಗುಡಿಸಲಿನ ಇತಿಹಾಸದಲಿ
ರೇಖೆ ದಾಟಿದರೆ ಸೀತೆಗೆ
ಅಪಹರಣದ ಭೀತಿ..

ರಾವಣ ಮಾರುವೇಷದಲ್ಲಿದ್ದಾನೆ..

ಮುಕ್ತಿ…

ಕೊನೆಗೌಡ ಬಂದಿಲ್ಲ‌
ಪುಟ್ಟಿ
ಗೆ
ನಕ್ಷತ್ರಗಳ‌ ಗೊಂಚಲು
ಬೇಕಂತೆ
ಏಣಿ ತರುವವರು
ಯಾರು?
ನಾನು..
ಆಸೆಗಳ ಹತ್ತಿ
ಬಂದವನಷ್ಟೇ…

ಸಗಣಿ ನೀರು ಒಣಗಿದ
ನೆಲ
ದ ಮೇಲೆ ಮಲಗಿ
ಆಕಾಶದ ಮೈ
ಅಗಲದಷ್ಟು ಚಿತ್ರ
ಬರೆಯುತ್ತಾಳೆ ಹುಡುಗಿ..
ಬೊಗಸೆ ಚೆಲ್ಲುವಾಗ
ಪಿಳಿ ಪಿಳಿ ನೋಡುತ್ತಾಳೆ
ಕನಸುಗಳ ಹೆಕ್ಕಿ..

ಈ ರಾತ್ರಿ
ಕಳೆದರೆ
ಅಹಲ್ಯೆ ಮಾತಾಗುತ್ತಾಳೆ

ಶ್ರೀ ತಲಗೇರಿ ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಎನ್ನುವ ಪುಟ್ಟ ಹಳ್ಳಿಯವರು.
ಸದ್ಯಕ್ಕೆ ಬೆಂಗಳೂರಿನ ನಿವಾಸಿ
ಸಾಫ್ಟ್‌ವೇರ್‌ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ