Advertisement
ಆರಿಫ್ ರಾಜಾ ಬರೆದ ಈ ದಿನದ ಕವಿತೆ

ಆರಿಫ್ ರಾಜಾ ಬರೆದ ಈ ದಿನದ ಕವಿತೆ

…ಇದೀಗ ಎರಡು ನಿಮಿಷವಾಯಿತು !

ಅವಳು ನನ್ನ ಬಿಟ್ಟುಹೋಗಿ
ಇದೀಗ ಎರಡು ನಿಮಿಷವಾಯಿತು*

ಅವಳದೊಂದು ಕೂದಲೆಳೆಯಿದೆ
ನೀಳ ಕಪ್ಪು ಗುಂಗುರು ನನ್ನಬಳಿ

ಹೆರಳರಾಶಿಯಲಾಡಿರಬಹುದಾದ
ಬೆರಳ ಗುರುತು ಇಲ್ಲ ಅಲ್ಲುಳಿದಿಲ್ಲ
ಮುಡಿಯುತ್ತಿದ್ದ ಕೇದಗೆಯ ಕಂಪೂ

ಅವಳು ನನ್ನ ಬಿಟ್ಟುಹೋಗಿ
ಇದೀಗ ಎರಡು ನಿಮಿಷವಾಯಿತು

ನಾನೇ ಮರಳಿಸಬಹುದಾದರೆ
ಅಂಚೆಯ ಮೂಲಕ ಅವಳ ವಿಳಾಸಕೆ
ಆ ಅದೃಷ್ಟ ರೇಖೆಯನು….

ಈಗ ಏನೂ ಮಾಡಲಾಗದು
ಒಂದು ಅಸಂಗತ ಅನುಭವ
ನರೆತ ಕೂದಲಿಗೆ ಹೊಂದಿಕೆಯಾಗದು

ಗಾಲಿಬನ ಗಝಲುಗಳ ನಡುವೆ
ಬಚ್ಚಿಟ್ಟಿರಬಹುದಾದ ಆ ಕೇಶ
ನನಗೆ ನವಿಲು ಗರಿಯಂತೆ

ನಾನೇನಾದರೂ ಬರೆಯಲು ಅಥವಾ
ಓದಲು ಹೋದಾಗ ಅಥವಾ
ಯಾವಾಗಲಾದರೊಮ್ಮೆ
ಗರಿಗೆದರಿ ಹೆರುತ್ತದೆ ನನಗೋಸ್ಕರ
ಒಂದು ದಿವ್ಯ ಏಕಾಂತವನು

ಬೆರಳಿಟ್ಟರೆ ಬಸಿರಾಗುವ
ಆ ನೀಳ ಕಪ್ಪು ಗುಂಗುರು ಗುಂಗುರು
ಮುಂಗುರುಳು

ಅವಳು ನನ್ನ ಬಿಟ್ಟುಹೋಗಿ
ಎರಡು ನಿಮಿಷವಾಯಿತು
ಅಥವಾ ಎರಡು ಯುಗ..?

ಗೊತ್ತಿಲ್ಲ

ಜ್ಯೋತಿರ್ವರ್ಷಗಳಾಚೆ
ಕತ್ತಲ ಮೂಲೆಯಲ್ಲೆಲ್ಲೋ
ತೊಳಲಾಡುತ್ತಿರುವ
ಗ್ರಹ ತಾರೆ ನಿಹಾರಿಕೆಗಳ
ಬಣ್ಣ ಬೆಳಕು ಹೃದಯ ಬಡಿತ

ಕ್ಷಣಮಾತ್ರದಲಿ ಅಳೆದು ಬಿಸಾಡುವ
ಈ ಬುದ್ಧಿವಂತ
ತನ್ನ ಪ್ರೀತಿಯ ಮುಂಗುರುಳಿನ
ಅಂತರವ ಅಳೆಯಲಾರ!

*ಕವಿತೆಯ ಮೊದಲೆರೆಡು ಸಾಲುಗಳು ಶ್ರೀಲಂಕಾದ ತಮಿಳು ಕವಿತೆಯ ಸಾಲುಗಳು

 

ಆರಿಫ್ ರಾಜಾ ಹೊಸ ತಲೆಮಾರಿನ ಪ್ರಮುಖ ಕವಿ.
‘ಜಂಗಮ ಫಕೀರನ ಜೋಳಿಗೆ’ ಇವರ ಪ್ರಸಿದ್ಧ ಕವನ ಸಂಕಲನ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಇವರ ಊರು.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. ನಾಗರಾಜ್ ಹರಪನಹಳ್ಳಿ

    ಬ್ಯುಟಿಫುಲ್

    Reply
  2. ನಾಗರಾಜ್ ಹರಪನಹಳ್ಳಿ

    ಕವಿತೆಯ ಚಿತ್ರ …ಅತ್ಯುತ್ತಮ ರೂಪಕ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ