Advertisement
ಎಚ್.ಆರ್.ರಮೇಶ್ ಬರೆದ ಈ ದಿನದ ಕವಿತೆ

ಎಚ್.ಆರ್.ರಮೇಶ್ ಬರೆದ ಈ ದಿನದ ಕವಿತೆ

ಒಂದೂ ಅಲ್ಲ ಎರಡೂ ಅಲ್ಲ

ಎಲ್ಲೋ ಹರಿಯುತ್ತಿದ್ದ ನೋಟ
ತಿರುಗಿ ಸ್ಥಾಪಿತಗೊಂಡಿತು
ಹೆಣ್ಣಲ್ಲ ಗಂಡಲ್ಲ
ಏನಿದು
ಹೆಣ್ಣೆಂದು ಅಪ್ಪಿದರೆ ಗಂಡು
ಗಂಡೆಂದು ಸ್ಪರ್ಷಿಸಿದರೆ ಹೂಮೈಯಿ
ಕಾಣುವುದರಲ್ಲಿ ಕಾಣುತ್ತಿರುವುದೇ ಇಲ್ಲ
ಕಾಣುತ್ತಿರುವುದು ಕಾಣಬೇಕೆಂದಿರಲಿಲ್ಲ
ಎರಡು ಜೀವ ಒಂದು
ಒಂದು ಎನ್ನುವುದರಲ್ಲಿ ಒಂದೂ ಇಲ್ಲ
ಮಿಳಿತದಲಿ
ಲೋಕಕ್ಕೆ ಗಂಡೆಂಬ ಭೇದ
ಹೆಣ್ಣೆಂಬ ಭೇದ
ನೋಟವ ಸೆಳೆದದ್ದು ಅದೂ ಅಲ್ಲ ಇದೂ ಅಲ್ಲ
ಕಂಡು, ಕರಗಿದೆ ನೋಟ
ಕರಗಿರುವಲ್ಲಿ ರೂಪವಿಲ್ಲ ರೂಹಿಲ್ಲ
ಬೇರೆಯೇ ಇದೆ ನೋಟದಲ್ಲಿ
ಲೋಕ ಕಂಡದ್ದಕ್ಕಿಂತಲೂ
ಗಂಡು ಹುಡುಕಿದಲ್ಲಿ ಹೆಣ್ಣು
ಹೆಣ್ಣ ಹಂಬಲಿಸಿದಾಗ ಗಂಡು
ಒಂದೂ ಅಲ್ಲ ಎರಡೂ ಅಲ್ಲ.

About The Author

ಎಚ್ ಆರ್ ರಮೇಶ್

ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ