Advertisement
ಎ.ಎನ್. ಮುಕುಂದ ತೆಗೆದ ಎಂ.ಕೆ. ಇಂದಿರಾ ಅವರ ಚಿತ್ರ.

ಎ.ಎನ್. ಮುಕುಂದ ತೆಗೆದ ಎಂ.ಕೆ. ಇಂದಿರಾ ಅವರ ಚಿತ್ರ.

(ಎ.ಎನ್. ಮುಕುಂದ)

ಜಯನಗರ ೩ನೇ ಬ್ಲಾಕ್‌ನಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ಎಂ ಕೆ ಇಂದಿರಾ ಇದ್ದರು. ಎಂದಿನಂತೆ ನಾನು ಹಾಗೂ ನನ್ನ ಮಡದಿ ಉಮಾ ಹೋಗಿ ಅವರನ್ನು ಮಾತಾನಾಡಿಸಿದಾಗ ಅವರು ಒಂದು ರೀತಿಯ ಒಂಟಿ ಭಾವದಲ್ಲಿ ಇರುವಂತೆ ಕಂಡರು. ಅವರ ಕಾದಂಬರಿ ಲೋಕದಿಂದ ಎದ್ದುಬಂದ ಮಲೆನಾಡಿನ ಒಂದು ಪಾತ್ರದ ಹಾಗೆ ಅವರು ಕಾಣಿಸುತ್ತಿದ್ದರು. ಅಂಗಳದಲ್ಲಿ ಚೆಂದದ ಬೆಳಕಿದ್ದುರಿಂದ ಅಲ್ಲಿಗೆ ಕರೆದು ಕೊಂಡು ಬಂದು ಹಲವು ಭಾವ ಚಿತ್ರಗಳನ್ನು ಸೆರೆಹಿಡಿದೆ. ಇಂದಿರಾ ಉಟ್ಟಿದ್ದ ಸೀರೆಯ ಬಣ್ಣ ಫೋಟೋಗೆ ಪೂರಕವಾಗಿ ಇಲ್ಲದಿದ್ದುದರಿಂದ ಅವರಿಗೆ ನಮ್ಮಲ್ಲಿದ್ದ ಶಾಲನ್ನು ಹೊದೆಯಲು ಕೊಟ್ಟೆವು. ಹೊರಡುವಾಗ ನಿಮಗೆ ಫೋಟೋಗಳನ್ನು ತಲುಪಿಸಲು ನಾಲ್ಕೈದು ದಿನದ ಬಳಿಕ ಬರುತ್ತೇನೆಂದು ಹೇಳಿದೆ. ಅದಕ್ಕೆ ಅವರು ಆಗ ನಾನು ಇಲ್ಲಿ ಇರುತ್ತೇನೋ ಇಲ್ಲವೋ ಎಂದರು.

ಕೆಲ ದಿನಗಳ ಬಳಿಕ ನಾನು ಅವರ ಮನೆಗೆ ಹೋದಾಗ ಅವರು ಅಲ್ಲಿರಲಿಲ್ಲ. ಬೇರೊಬ್ಬ ಸಂಬಂಧಿಕರ ಮನೆಗೆ ಹೋಗಿರುವುದು ತಿಳಿಯಿತು. ಫೋಟೋಗಳನ್ನು ಆ ಮನೆಯವರಿಗೆ ಕೊಟ್ಟು ಇಂದಿರಾ ಅವರಿಗೆ ತಲುಪಿಸಲು ಹೇಳಿದೆ. ಆದಾಗಿ ಸ್ವಲ್ಪ ದಿನಗಳ ನಂತರ ನನಗೊಂದು ಪೋಸ್ಟ್ ಕಾರ್ಡ್ ಬಂತು. ಅದು ಇಂದಿರಾ ಅವರ ಕೃತಜ್ಞತಾ ಪತ್ರ. ಅದು ತುಂಬ ಆತ್ಮೀಯ ಧಾಟಿಯಲ್ಲಿತ್ತು. ಹದಿನೈದೇ ದಿನಗಳಲ್ಲಿ ಇಂದಿರಾರವರು ತೀರಿಕೊಂಡ ವಾರ್ತೆ ತಲುಪಿತು.

(ಎ.ಎನ್. ಮುಕುಂದ ಅವರ ‘ಮುಖಮುದ್ರೆ’ ಪುಸ್ತಕದಿಂದ.ಈ ಪುಸ್ತಕವನ್ನು ನವ ಕರ್ನಾಟಕ ಪುಸ್ತಕದಂಗಡಿಯ ಮಳಿಗೆಗಳಿಂದ ಕೊಳ್ಳಬಹುದು. ಅಥವಾ MUP@MANIPAL.EDU ಈ ಮೇಲ್ ವಿಳಾಸಕ್ಕೆ ಬರೆದು ತರಿಸಿಕೊಳ್ಳಬಹುದು)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ