Advertisement
ಎ. ಎನ್. ಮುಕುಂದ ತೆಗೆದ ಕೀರ್ತಿನಾಥ ಕುರ್ತಕೋಟಿ ಅವರ ಚಿತ್ರ

ಎ. ಎನ್. ಮುಕುಂದ ತೆಗೆದ ಕೀರ್ತಿನಾಥ ಕುರ್ತಕೋಟಿ ಅವರ ಚಿತ್ರ

 

(ಎ.ಎನ್. ಮುಕುಂದ)

ಅಂದು ನಾನು ಕನ್ನಡದ ಕೀರ್ತಿ ಎಂದೇ ಹೆಸರಾದ ಕೀರ್ತಿನಾಥ ಕುರ್ತಕೋಟಿಯವರ ಮನೆಗೆ ಹೋದಾಗ ಡಿ ಆರ್ ನಾಗರಾಜ್ ಕೀರ್ತಿಯವರ ಬಗ್ಗೆ ಹೇಳಿದ ಮಾತೊಂದು ಪದೇ ಪದೇ ನೆನಪಾಗುತ್ತಿತ್ತು: ಹಸ್ತ ಸಾಮುದ್ರಿಕನ ಮುಂದೆ ಜ್ಯೋತಿಷ್ಯಕ್ಕಾಗಿ ಕೈಗಳು ಚಾಚಿ ನಿಂತಂತೆ ಅಲ್ಲಿ ಕವಿ ಸಮೂಹ ಕಾದು ನಿಂತಿದೆ… ಕುರ್ತಕೋಟಿಯವರು ಬೆಂಗಳೂರಿನ ಅವರ ಬಂಧುಗಳ ಮನೆಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ತುಂಬಾ ಉತ್ಸಾಹದಿಂದ ನನ್ನನ್ನು ಎದುರು ನೋಡುತ್ತಿದ್ದರು. ಭೇಟಿಯಾದೊಡನೆ ನನ್ನ ಪ್ರವರ ಬಿಚ್ಚಿಡುವ ಬದಲು ನಾನು ಸ್ವಲ್ಪ ದಿನದ ಹಿಂದೆ ತೆಗೆದಿದ್ದ ಗಿರೀಶ ಕಾರ್ನಾಡರ ಫೋಟೊ ತೋರಿಸಿದೆ.         ನೋಡಿದ ಕೂಡಲೆ ಕೀರ್ತಿಯವರು ನಗುನಗುತ್ತಾ ಖರೇ ಅಂದ್ರು ಗಿರೀಶನಿಗಿಂತ ನಾನ ಹೆಚ್ಚು ಛಂದ ಎಂದರು. ನಾನೊಮ್ಮೆ ಅವರ ಮುಖವನ್ನು ದಿಟ್ಟಿಸಿ ನೋಡಿದೆ. ಮುಖಕ್ಷೌರವೂ ಮಾಡಿಕೊಂಡಿರದ, ಬಾಯಿಂದ ಕವಳದ ರಸ ಒಸರಿಸುತ್ತಿರುವ ಕೀರ್ತಿಯವರಿಂದ ತಮ್ಮ ರೂಪದ ಬಗ್ಗೆ ಬಂದ ಆತ್ಮವಿಶ್ವಾಸದ ಮಾತು ಇದಾಗಿತ್ತು. ನಾನು ಫ಼ೋಟೋ ತೆಗೆಯುವಾಗ ಲೇಖಕರನ್ನು ಮಾತನಾಡಿಸಲು ಸಾಮಾನ್ಯವಾಗಿ ನನ್ನ ಜೊತೆಯಲ್ಲಿರುತ್ತಿದ್ದ ಉಮಾ ಅಂದು ಬಂದಿರಲಿಲ್ಲ. ಹಾಗಾಗಿ ನಾನು ಕೊಂಚ ಆತಂಕದಲ್ಲಿದ್ದೆ. ಆದರೆ ಕೀರ್ತಿಯವರು ಕವಳ ಜಗಿಯುತ್ತ ತಮ್ಮ ಎಂದಿನ ಸಹಜ ಲವಲವಿಕೆಯಲ್ಲಿ ಯಾವ ಅಳುಕಿಲ್ಲದೆ ಕ್ಯಾಮೆರಾ ಎದುರಿಸಿದರು.

(ಎ.ಎನ್. ಮುಕುಂದ ಅವರ ‘ಮುಖಮುದ್ರೆ’ ಪುಸ್ತಕದಿಂದ.ಈ ಪುಸ್ತಕವನ್ನು ನವ ಕರ್ನಾಟಕ ಪುಸ್ತಕದಂಗಡಿಯ ಮಳಿಗೆಗಳಿಂದ ಕೊಳ್ಳಬಹುದು. ಅಥವಾ MUP@MANIPAL.EDU ಈ ಮೇಲ್ ವಿಳಾಸಕ್ಕೆ ಬರೆದು ತರಿಸಿಕೊಳ್ಳಬಹುದು)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಗುರುಪ್ರಸಾದ ಕುರ್ತಕೋಟಿ

    ತುಂಬಾ ಮುದ್ದಾದ ಚಿತ್ರ! ಅವರದು ಖರೇನ ಚಂದದ ವ್ಯಕ್ತಿತ್ವ. ಅವರ ಜೊತೆಗೆ ತುಂಬಾ ಅಮೂಲ್ಯವಾದ ಕ್ಷಣಗಳನ್ನು ಕಳೆದ ನಾನು ಅದೃಷ್ಟಶಾಲಿ!

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ