Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಮೌನ ಬಿತ್ತ ಬಯಲು

ಅವನೆಂದ: ನಾನು ನಿನ್ನ ಅದೆಷ್ಟು ಪ್ರೀತಿಸುತ್ತೇನೆ- ಎಂದರೆ,
ಕಡಲಷ್ಟು..ಮುಗಿಲಷ್ಟು..ಭೂಮಿಯಷ್ಟು!
ಆದರೆ, ಅವಳಿಗೆ ಗೊತ್ತು-
ತೆಕ್ಕೆಯೊಳಗೆ ಕಡಲು, ಮುಗಿಲು, ಭೂಮಿ
ಎಷ್ಟು-ದಕ್ಕಬಹುದೆಂದು.

ಅವನೆಂದ; ನಾನು ನಿನ್ನ ಅದೆಷ್ಟು ಪ್ರೀತಿಸುತ್ತೇನೆ- ಎಂದರೆ,
ನಿನ್ನಿಂದ ಅರೆಘಳಿಗೆ ಅಗಲಿರಲಾರೆ!
ಆದರೆ, ಅವಳಿಗೆ ಗೊತ್ತು-
ಪ್ರೀತಿಯ, ಅನುಭೂತಿಯ
ನೀತಿ, ನಿಯತಿ- ನಿಯತ್ತು.

ಅವನೆಂದ; ನನಗೆ ನೀನು ಅದೆಷ್ಟು ಅಗತ್ಯ- ಎಂದರೆ,
ಇತಿ-ಮಿತಿಯ ಅಗ್ನಿ, ನೀರು, ಗಾಳಿಯಂತೆ!
ಆದರೆ, ಅವಳಿಗೆ ಗೊತ್ತು-
ಭವದ- ಪರಿ-
ಭವದ ತಂಪು-ಬಿಸುಪಿನಸ್ಮಿತೆ!

ಅವನೆಂದ; ನಾನು ನಿನ್ನನ್ನು, ನೀನು ನನ್ನನ್ನು- ಅದೆಷ್ಟು
ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ!
ಆದರೆ, ಅವಳಿಗೆ ಗೊತ್ತು-
ಅವನಿಗೆ ಅವನ ಬಗೆಗೇ
ತಿಳಿದಿದ್ದಕ್ಕಿಂತ- ಹೆಚ್ಚು!

ಹಾಗೆ- ಕಡಲು, ಮುಗಿಲು, ಭೂಮಿಗಳೆಲ್ಲ
ತಮಗಿಂತ ಅರ್ಥವತ್ತಿನ
ನೆಲೆಯಲ್ಲಿ ಸಂಧಿಸಲು,
ಋತುಮಾನ- ಅಳೆಯುವ
ಸೂರ್ಯ-ಚಂದ್ರರ ಕೊಳಗಗಳೆಂಬ
ಉಸಿರು-ನಳಿಕೆಯಲ್ಲಿ ಬಂಧಿಸಲು,
ಮಾತಿನ ಬೀಜ ಬಿತ್ತ-…
ಮೌನದ ಬಯಲಾದವು..
ಗೀತಾ ಹೆಗಡೆ.

About The Author

ಗೀತಾ ಹೆಗಡೆ, ದೊಡ್ಮನೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ