Advertisement
ಚಂದ್ರಮತಿ ಸೋಂದಾ  ಬರೆದ ಈ ದಿನದ ಕವಿತೆ

ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ನಿರಂತರ

ಅಂಗಳದಿ ಹೊಳೆಯುತಿಹ ಪೂರ್ಣಚಂದ್ರ
ಎಲ್ಲೆಲ್ಲೂ ಪಸರಿಸಿಹ ನಗೆಯ ಬಿಂಬ
ಕಣ್ಣ ಕೊಳದಲಿ ಚಲಿಪ ಕರಿಯ ಮುತ್ತು
ಸುತ್ತಿ ಸುಳಿದಾಡುತಿಹ ಬಿಳಿಯ ಮುತ್ತು

ಕುಣಿವ ಹೆಜ್ಜೆಯ ತುಂಬ ಗೆಜ್ಜೆನಾದ
ಉಲಿಯೊಳಗೆ ತುಂಬಿಹುದು ಮನಕೆ ಮೋದ
ಇವಳು ನಲಿದಾಡುತಿರೆ ತುಂಗಭದ್ರೆಯ ನೆನಪು ಮನೆಯೊಳಗೆ ಮನದೊಳಗೆ ದೀವಿಗೆಯ ಹೊಳಪು

ಸಂಜೆಯಲಿ ಏರುವಳು ತಂದೆ ಹೆಗಲು
ಮುಂಜಾನೆ ನಲಿಯಲು ತಾಯ ಮಡಿಲು
ರಾಕ್ಷಸನ ಆರ್ಭಟಕ್ಕೆ ಅಜ್ಜನೆಡೆ ಸರಿತ
ರಾಜಕುವರಿಯ ವ್ಯಥೆಗೆ ಕಣ್ಣೀರ ಸುರಿತ

ಹೂವ ಗಿಡದೆಡೆಯಲ್ಲಿ ಒನಪು ವಯ್ಯಾರ
ಮನೆಯ ಒಳಗೂ ಹೊರಗೂ ನಗೆಯ ಚಿತ್ತಾರ ತಂಗಾಳಿ ಬೀಸುತಿರೆ ಬಿರಿದ ಮೊಗ್ಗು
ಎದೆಯ ಗೂಡಲಿ ಹರಿವ ಹೊನಲ ಹಿಗ್ಗು

ಕಾಲಚಕ್ರದ ಉರುಳು ಬದುಕ ಹೊರಳು
ಚಂದಿರನ ಕಾಣುವ ಮಲ್ಲಿಗೆಯ ಅರಳು
ಬದಲಾದ ಋತುಚಕ್ರ ತಾಯಬಿಂಬ
ಮತ್ತದೇ ಚಂದಿರನು ಮಡಿಲ ತುಂಬ

(ಕಲಾಕೃತಿ: ವಾಲಿ ಮೋಸ್ (Wally Moes)

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ