Advertisement
ಜಯರಾಮಚಾರಿ ಬರೆದ ಈ ದಿನದ ಕವಿತೆ

ಜಯರಾಮಚಾರಿ ಬರೆದ ಈ ದಿನದ ಕವಿತೆ

ಕುಂಭದ್ರೋಣ 

ಆ ಪೋರ ಬಿಟ್ಟ ದೋಣಿ
ತೇಲಿದ್ದಕ್ಕಿಂತ
ಮುಳುಗಿದ್ದೆಚ್ಚು.
ಅದೆಂತ ಹುಚ್ಚಿನ ಮಳೆ

ನಾಯಂಡಳ್ಳಿ ಫ್ಲೈ ಓವರ್
ಕೆಳಗೆ ನಿಂತವನು ಒದ್ದೆಯಾಗಿದ್ದ ಮುದ್ದೆಯಾಗಿದ್ದ
ಮದ್ವೆ ಮುಂಚೆ ಬ್ಲಾಕ್ ಮಾಡಿ ಹೋದವಳ
ಕೆಟ್ಟ ನೆನಪು ಬೇರೆ

ಆಗಷ್ಟೇ ಹಾಕಿದ್ದ ಟಾರು
ಮಳೆಯ ರಭಸಕ್ಕೆ ಕೊಚ್ಚಿ ಈಜುತ್ತಿತ್ತು
ದಾರಿಹೋಕರು ಕಣ್ ಕಣ್ ಬಿಡುತ್ತಿದ್ದರು
ರಸ್ತೆ ಕಂಟ್ರಾಕ್ಟರು ಮಾಡೆಲ್ ಜೊತೆ
ರೆಸಾರ್ಟ್ ಸೇರಿದ್ದ

ಇಂತ ಬಿಡದ ಮಳೆಗಳಲ್ಲಿ
ಬಿಡದೇ ಕಾಡಿದವಳ ಮಿಥುನದ ಕಾವು
ಹೊಂಗೆ ಮರದ ನೆರಳಲ್ಲಿ
ಹಣ್ಣು ಮುದುಕಿ ಬಿಡುತ್ತಿದ್ದ ಬೋಂಡದ ಹಬೆ

ಮನೆಯೇ ಕೊಚ್ಚಿಹೋದ
ಮನೆಗೆ ಕೊಚ್ಚಿಹೋದ ಮಳೆಯ
ವಿಡಿಯೋಗಳು ವೈರಲ್ಲುಗಳಾದರೆ
ಕೋಲಾರದಲ್ಲೊಂದು ಐದು ದಶಕವಾದರೂ
ತುಂಬದ ಬಾವಿಯಲ್ಲಿ ಕೋಡಿ ಹರಿದಿತ್ತು

ಜಯರಾಮಚಾರಿ ಮೂಲತಃ ಮೈಸೂರಿನವರು. ಬೆಳೆದದ್ದು ಬೆಂಗಳೂರು
ಸಧ್ಯ ನಮ್ಮ ಮೆಟ್ರೊದಲ್ಲಿ ಸ್ಟೇಷನ್ ಸೂಪರಿಡೆಂಟ್ ಆಗಿದ್ದಾರೆ
“ಕರಿಮುಗಿಲ ಕಾಡಿನಲಿ: ಕಥಾ ಸಂಕಲನ ಇವರ ಪ್ರಕಟಿತ ಪುಸ್ತಕ
ಓದು ಮತ್ತು ಸಿನಿಮಾ ಇವರ ಹವ್ಯಾಸವಾಗಿದ್ದು ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ