Advertisement
ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ

ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ

ಅಕ್ಕ

ತಾಯೆ
ಮಾತು ಕಡೆದು
ಮಾತು ಹಡೆದು
ಹುಟ್ಟಿದ ಕೂಸು
ಮಾತಿಲ್ಲದ ಲಜ್ಜೆ

ಈ ಲಜ್ಜೆ ಹೊತ್ತವರ
ಎಲ್ಲೂ ಕಾಣದೆ
ಕಾಡು ಕಣಿವೆಯ
ದಾರಿ ಹಿಡಿದು ನಡೆದ

ಅಕ್ಕ, ದಣಿವಾರಿಸಿಕೊಳ್ಳಲು
ಉಳಿದದ್ದು ಕಲ್ಯಾಣದಲ್ಲಿ
ಅಲ್ಲಿಯೂ ಮಾತಿನ ಸಡಗರ

ಮಾತಿಗೆ ಮಾತು, ಮಾತು-
ಪೂರ್ಣ ಎಂದರು, ಶೂನ್ಯ-
ಎಂದರು,
ಮಾತಿಗೆ ಬೇಸತ್ತು ಅಕ್ಕ
ಹೊರಡುವುದರಲ್ಲಿದ್ದಳು
ಆಗ ಬಂದ ಬಸವಣ್ಣ

ಮಾತಿರಲಿಲ್ಲ ಅಲ್ಲಿ, ಬೆಳಕಿತ್ತು
ಬೆಳಕಿನ ದಾರಿ ಇತ್ತು, ನಿಶ್ಶಬ್ದದ
ಲಜ್ಜೆಯಿತ್ತು ಕಣ್ಣೋಟದಲ್ಲಿ

ತಡೆತಡೆದು ‘ತಾಯೆ’ ಎಂದ
ತಾಯ್ತನ ತುಂಬಿ ಬಂತು,
ಭಕ್ತಿ ಭಾವದಲ್ಲಿ ಕೈಮುಗಿದ
ಕಂಡಿತಲ್ಲಿ ಎತ್ತರದ ಶಿಖರ

ಮುಂದೆ ಮಾತಿರಲಿಲ್ಲ
ಅಕ್ಕ ನಡೆದದ್ದು ನೇರ
ಶ್ರೀಶೈಲ ಶಿಖರದ ಕಡೆಗೆ

 

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ