Advertisement
ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

ಸಿಕ್ಕಾಗ
ಸಿಕ್ಕಿಕೊಂಡಾಗ
ಮಾತು ಅವಮಾನ ಬೆಳಕಿನ ಅಡಕತ್ತರಿಗಳಲ್ಲಿ
ಸಿಕ್ಕು ಸಿಕ್ಕು ಸಿಕ್ಕಾದಾಗ
ಅವನು
ತಡಕಾಡುತ್ತಾನೆ ಪದಗಳಿಗಾಗಿ
ಕುಣಿಯುತ್ತಾನೆ ಶಬ್ದಗಳಿಗಾಗಿ
ತಡವರಿಸುತ್ತಾನೆ ಭಾಷೆಯಿಲ್ಲದೆ
ಜಾರಿಕೊಳ್ಳುತ್ತಾನೆ ಸೋತರೆ ಕೊನೆಗೆ
ಮೌನದ ಚಿಪ್ಪಿನೊಳಕ್ಕೆ
ಚಿಪ್ಪಿನಂತೆ ಕಾಣುವುದು
ಬಾವಿಯ ಆಳಕ್ಕೆ ಜಾರುತ್ತದೆ
ಆಳದ ಒಡಲಲ್ಲಿ ಕತ್ತಲು
ಕತ್ತಲ ಸುಳಿಯಲ್ಲಿ
ಕಳೆದೇ ಹೋಗಿಬಿಡುವ ಕಪ್ಪುರಂಧ್ರ
ಕಳೆದು ಹೋಗುವುದೇನು?
ಬೇಜವಾಬುದಾರಿಯೊ?
ಮರೆವೋ?
ಸಂಘರ್ಷಗಳ ತುಣುಕೊ?
ಅಹಂಕಾರದ ಪರ್ವತವೋ?
ಕಡೆಗೆ ಅವನೋ?
ಅವನ ಆತ್ಮದ ಚೂರೋ?
ಏನದೇನದೇನು?
ಯಾಕೆ ಹೀಗೆ ಸುತ್ತಣ ನಿಧಿಯ ವಿಧಿ
ಅವನೊಂದಿಗೆ ಆಟವಾಡುತ್ತದೆ
ಹುಡುಕ ಹಚ್ಚುತ್ತದೆ
ವಾಕ್ಯಗಳ ಪದಗಳನ್ನು
ಪದಗಳ ಅಕ್ಷರಗಳನ್ನು
ಅಕ್ಷರಗಳ ಅಕ್ಕರೆಯನ್ನು
ಅಕ್ಕರೆಯೊಳಗಿನ ಬದುಕನ್ನು
ಬಂಗಾರ ಹುಡುಕಿದ ಹಾಗೆ!!
ಅದರ ಸೊಲ್ಲಿನ ಪಿಸುಮಾತಿಗೆ!!!
ಏನೇ ಅನ್ನಿ
ಬಹಳ ದುರಾಸೆ ಅವನಿಗೆ!!!

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ