Advertisement
ನಾಗರಾಜ್ ವೈ. ಕಾಂಬಳೆ ಬರೆದ ಗಝಲ್

ನಾಗರಾಜ್ ವೈ. ಕಾಂಬಳೆ ಬರೆದ ಗಝಲ್

ಒಂದೇ ಒಂದು ರಾತ್ರಿ ನೀನು ಬಾಗಿಲನ್ನು ತೆರೆದುಬಿಡು
ರಾತ್ರಿಗಳಿರುವುದೇತಕ್ಕೇ? ಒಂದು ಸಲ ಅರ್ಥವನ್ನು ತಿಳಿಸಿಬಿಡು

ವ್ಯರ್ಥವಾಗಿ ಹೋದ ಎಲ್ಲ ರಾತ್ರಿಗಳ ನೆನಪಿನ ಹಾವಳಿ ಎದ್ದಿದೆ
ಈ ರಾತ್ರಿ ಅದಕ್ಕೊಂದು ಸಾಂತ್ವನದ ಕತೆಯನ್ನು ಮುಟ್ಟಿಸಿಬಿಡು

ಕತ್ತಲಾಗುವುದು ತಡವಾದರೂ ಬೆಳಕನ್ನು ದೂರುತ್ತೇನೆ
ರಾತ್ರಿಯಾಗುತ್ತಿದ್ದಂತೆಯೇ ಮನ್ಮಥನನ್ನು ಆಲಂಗಿಸಿಬಿಡು

ಮೈತುಂಬ ಅಮಲಿದ್ದರೂ ದಾರಿಯನ್ನೆಂದೂ ತಪ್ಪಿಲ್ಲ
ತುಟಿಗೆತುಟಿಯೊತ್ತಿ ಅಮಲಿನ ಗುಂಗನ್ನು ಹೆಚ್ಚಿಸಿಬಿಡು

ಹಾಸಿಗೆಯ ಮೇಲೆ ಸಾವಿರಾರು ಹೂಗಳು ಬೆತ್ತಲೆ ಮಲಗಿವೆ
ಮೈಮನಸ್ಸು ಮರೆಸುವಷ್ಟು ಸುಗಂಧವನ್ನು ಒರೆಸಿಬಿಡು

ಮಾದಕದ ಗಾಳಿ ನಮ್ಮನ್ನು ಹಿತವಾಗಿ ತಬ್ಬುತ್ತಲಿದೆ
ಮೈಗೆ ಮೈಸೋಕಿಸಿ ಬೆಚ್ಚನೆಯ ಸ್ಪರ್ಶವನ್ನು ತಾಕಿಸಿಬಿಡು

 

ನಾಗರಾಜ ಕಾಂಬಳೆ ಬೆಳಗಾವಿ ಜಿಲ್ಲೆಯವರು
ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹಶಿಕ್ಷಕರು
ಓದುವುದು, ಕತೆ0ಕವಿತೆ ಬರೆಯುವುದು ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ