ಲ್ಯಾಪ್ಲ್ಯಾಂಡ್ ಕನಸು ನನಸಾದ ಕ್ಷಣಗಳ ಸುತ್ತ
ಇಷ್ಟೆಲ್ಲಾ ಬಟ್ಟೆ ಧರಿಸಿಕೊಂಡು ತಯಾರಾಗುವುದೇ ದೊಡ್ಡ ಸಾಹಸ. ಕೈ ಕಾಲುಗಳ ಸಲೀಸಾದ ಚಲನೆ ಇಲ್ಲದಂತಾಗಿ, ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವ ಭಾವನೆ. ತಯಾರಾಗಲು ಒಂದರ್ಧ ಘಂಟೆ ಹಿಡಿಯುತ್ತಿತ್ತು. ಮನೆಯ ಒಳಗೆ ಹೀಟರ್ ವ್ಯವಸ್ಥೆ ಇರುವುದರಿಂದ ಇಷ್ಟೆಲ್ಲಾ ತಯಾರಾಗುವ ಒಳಗೆ ಮೈ ಎಲ್ಲಾ ಬೆವರಲು ಶುರು. ಹೊರಗೆ ಕೊರೆಯುವ ಚಳಿ. ನನ್ನಷ್ಟೇ ಭಾರದ ಉಡುಗೆ ತೊಡುಗೆ ತೊಟ್ಟು ಹೊರ ನಡೆದರೆ ಎಲ್ಲೆಲ್ಲೂ ಹಿಮ. ಈ ರೀತಿ ತಯಾರಾಗಿದ್ದರೂ, ಆ ದಿನದ ಸುತ್ತಾಟ ಮುಗಿಯುವ ಹೊತ್ತಿಗೆ ಕಾಲು ಬೆರಳುಗಳು ಮರಗಟ್ಟಿ ಹೋಗಿರುತ್ತಿದ್ದವು.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್ ಪ್ರವಾಸದ ಮತ್ತಷ್ಟು ಅನುಭವಗಳನ್ನು…
ಒಬರಮೆರ್ಗಾವ್ ನಗರದಲ್ಲಿ ‘ಸಾತ್ವಿಕತೆ’ಯ ವ್ಯಾಖ್ಯಾನ
ಮೇರಿ ಮಾತೆಯ ಪಾತ್ರದಲ್ಲಿ ನಟಿಸಲು ಆಯ್ಕೆಯಾಗ ಬೇಕಾದರೆ ಆಕೆ ಕನ್ಯೆಯಾಗಿರಬೇಕು. ಗಂಡುಗಳ ಸ್ನೇಹ ಬೆಳೆಸದೆ, ಹೆಚ್ಚಿನ ಗೆಳತಿಯರೊಡನೆ ಸೇರದೆ, ನಾಟಕ ಸಿನೆಮಾಗಳನ್ನು ನೋಡದೆ, ಉಪ್ಪು ರಹಿತ ಊಟ ಮಾಡುತ್ತಾ, ಸದಾ ಕಾಲವೂ ಆಧ್ಯಾತ್ಮಿಕವಾಗಿ ಜೀವನ ನಡೆಸುತ್ತಾ, ಬೈಬಲ್ ಓದುತ್ತಾ, ರಸ್ತೆಗಳಲ್ಲಿ ನಡೆಯುವಾಗ ತಲೆಯೆತ್ತದೆ ಸಾತ್ವಿಕವಾಗಿ 10 ವರ್ಷಗಳನ್ನು ಕಳೆದರೆ ಆಕೆ ಆಯ್ಕೆ ಪ್ರಕ್ರಿಯೆಯ ಸರದಿಗೆ ಬರಲು ಅರ್ಹಳಾಗುತ್ತಾಳೆ.
ಶ್ರೀಕೃಷ್ಣ ದೇವರು ತಂದ ಪಾರಿಜಾತದ ಗಿಡವಿದು
ಲಕ್ನೋಗೆ ಹೊರಟು ನಿಂತಾಗ ಒಂದು ವಿಷಯವನ್ನು ಗೂಗಲ್ ಹೇಳಿತು: ಕೃಷ್ಣ ಸ್ವರ್ಗದಿಂದ ಸತ್ಯಭಾಮೆಗೆಂದೇ ಭೂಮಿಗೆ ತಂದ ಪಾರಿಜಾತದ ಗಿಡ ಈಗಲೂ ಇದೆ ಎಂದು ಸೂಚಿಸಿತು. ಲಕ್ನೋದಿಂದ ಕೇವಲ 40 ಕಿಲೋಮೀಟರ್ಗಳ ದೂರದಲ್ಲಿ ದೊಡ್ಡ ಬಲುದೊಡ್ಡ ಮರವಾಗಿ ಎಂದು ಗೊತ್ತಾಯಿತು. ಸರಿ ಮತ್ತೆ, ಇಬ್ಬರು ಹೆಂಡಿರ ಜಗಳದಲ್ಲಿ ಭೂಲೋಕಕ್ಕೆ ಇಳಿದು ಬಂದ ವಿಷಯ ಎಂದರೆ ಕುತುಹಲ ಇರದಿರಲು ಸಾಧ್ಯವೇ ? ಆ ಪುರಾತನ ಮರವನ್ನು ನೋಡಿದರೆ ಅದರ ಪಕ್ಕ ಸತ್ಯಭಾಮೆಯ ಮಂದಿರಕ್ಕೆ ಬದಲಾಗಿ ರುಕ್ಮಿಣಿದೇವಿ ಮಂದಿರವಿದೆ.
ಲ್ಯಾಪ್ಲ್ಯಾಂಡ್: ಒಂದು ಕನಸಿನ ಪಯಣ
ನೋಡನೋಡುತ್ತಿದ್ದಂತೆ ಲ್ಯಾಪ್ಲಾಂಡ್ ಪ್ರವಾಸದ ದಿನ ಬಂದೆ ಬಿಟ್ಟಿತು. ಮ್ಯುನಿಕ್ನಿಂದ ಹೆಲ್ಸಿಂಕಿಗೆ ವಿಮಾನ. ಫಿನ್ಲ್ಯಾಂಡ್ ರಾಜಧಾನಿಯಾದ ಹೆಲ್ಸಿಂಕಿ ಬಾಲ್ಟಿಕ್ ಸಮುದ್ರ ತೀರದ ಒಂದು ನಗರ. ಹೆಲ್ಸಿಂಕಿ ಹತ್ತಿರ ಹತ್ತಿರ ಬರುತ್ತಿದ್ದಂತೆ ಬಾಲ್ಟಿಕ್ ಸಮುದ್ರವೂ ಹೆಪ್ಪುಗಟ್ಟಿದ ದೃಶ್ಯಗಳು ವಿಮಾನದೊಳಗೆ ಕೂತಿದ್ದ ನನ್ನ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿತು! ದೊಡ್ಡ ಹಡಗೊಂದು ಹೆಪ್ಪುಗಟ್ಟಿರುವ ಹಿಮವನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುದತ್ ಅಮೃತಾಪುರ
ಬಾಬ್ಬಿ ಎಂಬ ಪ್ರೇಮದ ಕುರುಹನ್ನು ಹುಡುಕಿಕೊಂಡು…
ತಲೆಯೊಳಗೆ ಬಲ್ಬಿನ ಥಕಪಕ ಕುಣಿತ. ‘ಅರೆ, ಇವನು ಅವನೇ ಅಲ್ವಾ? ಎಲ್ಲಿದ್ದಾನೆ? ನಾನು ಯಾಕೆ ಅವನನ್ನು ನೋಡದೆಯೇ, ಭೇಟಿ ಮಾಡದೆ ವಾಪಸ್ಸು ಬಂದುಬಿಟ್ಟೆ? ಛೆ ಛೆ, ಅವನೂರಿಗೆ ಬಂದು ಅವನನ್ನು ಮುದ್ದು ಮಾಡದೆ, ಅಪ್ಪಿಕೊಳ್ಳದೆ… ಓಹ್…’ ಸ್ವಾಗತ ಕೊಠಡಿಗೆ ಕರೆ ಮಾಡಿದೆ. ಅವನ ವಿಳಾಸ ಸಿಕ್ಕಿತು. ಅಯ್ಯೋ, ಅವನನ್ನು ನೋಡದೆಯೇ ಆ ರಾತ್ರಿ ಕಳೆಯಬೇಕಿತ್ತು. ಸೂರ್ಯ ಕರೆಗಂಟೆ ಒತ್ತಿದ್ದೆ ತಡ, ಗಡಿಬಿಡಿಸಿಕೊಂಡು ಬೆಚ್ಚನೆಯ ಬಟ್ಟೆ ತೊಟ್ಟು ಅವನಲ್ಲಿಗೆ ಓಡತೊಡಗಿದೆ.
‘ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಬಾಬ್ಬಿ…
ಜೀವಂತ ಬೇರುಗಳ ಸೇತುವೆಯ ಮೇಲೆ ನಡೆಯುತ್ತಾ…
ಸದಾ ಮೇಲೆ ಅಲೆಯುತ್ತಿರುವ ಮೋಡ, ಕೆಳಗೆ ನೀರು ತುಂಬಿದ ಭೂಮಿ, ಬೀಳುವ ಸಮೃದ್ಧ ಮಳೆಯಿಂದಾಗಿ ದಟ್ಟವಾಗಿ ಬೆಳೆಯುವ ಕಾಡು ದೂರದಿಂದ ನೋಡಲು ರಮಣೀಯವೆನಿಸಿದರೂ ಅದರ ಸುತ್ತಲೂ ಜೀವನ ಕಟ್ಟಿಕೊಳ್ಳಲು ಕಠಿಣ ಸವಾಲೊಡ್ಡುತ್ತದೆ. ಆದರೆ ಮಾನವನ ಜೀವನ ಮಾಡುವ ತುಡಿತ ಎಂತಹ ಪ್ರಕೃತಿ ಸವಾಲುಗಳನ್ನೂ ಮೀರುತ್ತದೆ ಎನ್ನುವುದಕ್ಕೆ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಖಾಸಿ ಜನಾಂಗವೇ ಸಾಕ್ಷಿ. ಖಾಸಿಗಳ ಭಾಷೆ ಖಾಸಿ, ವಾಸಿಸುವ ಬೆಟ್ಟ ಖಾಸಿ.
ಗುರುದತ್ ಅಮೃತಾಪುರ ಬರೆವ ಹೊಸ ಸರಣಿ ಇಂದು ಆರಂಭ
ಹೊಸ ಊರಿಗೆ ಪ್ರವಾಸ ಹೋಗುವ ಖುಷಿ ಇಮ್ಮಡಿಯಾಗುವುದು ಆ ಸ್ಥಳದ ಪೂರ್ವಾಪರವನ್ನು ತಿಳಿದಾಗ. ಗುರುದತ್ ಅಮೃತಾಪುರ ಅವರು ಪ್ರವಾಸವನ್ನು ಇಷ್ಟಪಡುವವರು. ಜೊತೆಗೆ ಆ ಜಾಗಗಳ ಇತಿಹಾಸವನ್ನೂ ಅರಿಯುವ ಕುತೂಹಲ ಹೊಂದಿದವರು. ಯುರೋಪ್ ಖಂಡದ ಈಶಾನ್ಯ ಭಾಗದಲ್ಲಿರುವ ಒಂದು ಪುಟ್ಟ ರಾಷ್ಟ್ರ. ಭಾರತದಂತೆಯೇ ಅಹಿಂಸಾತ್ಮಕ ಹೋರಾಟದ ಹಾದಿಯನ್ನು ಹಿಡಿದ ದೇಶವದು. ಎಲೆಮರೆಯ ಕಾಯಿ ಎಸ್ಟೋನಿಯಾದ ರಾಜಧಾನಿ ತಾಲಿನ್ ಕುರಿತ ಬರಹದೊಂದಿಗೆ ತಮ್ಮ ಸರಣಿಯನ್ನು ಅವರು ಆರಂಭಿಸಿದ್ದಾರೆ.
ನೂರು ಕಲ್ಲುಗಳಲ್ಲಿ ಒಂದು ಮುತ್ತು ಹುಡುಕುವ ಬಿರ್ಜು ಮಹಾರಾಜ್
ಸಿನೆಮಾ ರಂಗಕ್ಕೆ ಹೋಗಬೇಡ ಎಂದ ತಾಯಿಯ ಮಾತನ್ನು ಪಕ್ಕಕ್ಕಿಟ್ಟು ಮುಂಬೈಗೆ ಬಂದಾಗ ಜೇಬಿನಲ್ಲಿ ಕಿರುಗಾಸು ಇಲ್ಲದ ಬಿರ್ಜು ಮಹಾರಾಜ್ ಮಾಧುರಿ ದೀಕ್ಷಿತ್ ರಿಂದ ಹಿಡಿದು ದೀಪಿಕಾಳವರೆಗೂ ನೂರಕ್ಕೂ ಹೆಚ್ಚು ಸಿನೆಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಆದರೂ ಪ್ರೀತಿ ಮಾಡುವುದು ಮಾತ್ರ ಕಮಲಹಾಸನ್ನನ್ನು. ವಿಶ್ವರೂಪಂ ಸಿನೆಮಾ ಸಮಯದಲ್ಲಿ ‘ಆತ ತರಬೇತಿ ಸಮಯದಲ್ಲಿ ನೃತ್ಯ ಮಾಡುತ್ತಿದ್ದನ್ನು ನೋಡಿ ಎಷ್ಟೋ ಬಾರಿ ನಾನೇ ನರ್ತಿಸುತ್ತಿದ್ದೇನೆ ಎನ್ನಿಸಿಬಿಡುತ್ತಿತ್ತು’ ಎನ್ನುವಾಗ ಬಿರ್ಜು ಅವರ ಉಸಿರಿನಲ್ಲಿ ಜೀವ ಆಡಿದಂತೆನಿಸಿತು.
ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ ಇಂದು ಆರಂಭ
ಸದಾ ಹೊಸ ನೋಟವನ್ನು ಕೊಡುವ ಪ್ರವಾಸವೆಂದರೆ ಎಲ್ಲರಿಗೂ ಇಷ್ಟ. ಬೆಟ್ಟಗಳನ್ನು ಏರುವುದು, ಹೊಸ ಜನರ ಭೇಟಿ ಮಾಡುವುದು, ವಿವಿಧ ಪ್ರದೇಶಗಳ ಹಿನ್ನೆಲೆ ಅರಿಯುವುದೆಂದರೆ ಅಂಜಲಿ ರಾಮಣ್ಣ ಅವರಿಗಿಷ್ಟ. ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ, ಮಹಿಳಾ ಹಕ್ಕುಗಳ ಬಗ್ಗೆ ನಿಖರವಾದ ನಿಲುವುಗಳನ್ನು ಹೇಳಬಲ್ಲ ಅವರು, ತಮ್ಮ ಸೂಕ್ಷ್ಮ ಒಳನೋಟಗಳನ್ನು ‘ಫ್ಯಾಮಿಲಿ ಕೋರ್ಟ್ ಕಲಿಕೆ’ ಎಂಬ ಶೀರ್ಷಿಕೆಯಡಿ ಮಂಡಿಸುವುದುಂಟು.









