Advertisement
ಮಂಜುಳ ಸಿ.ಎಸ್. ಬರೆದ ಈ ದಿನದ ಕವಿತೆ

ಮಂಜುಳ ಸಿ.ಎಸ್. ಬರೆದ ಈ ದಿನದ ಕವಿತೆ

ಮಾತು-ಕವಿತೆ

ಕಿವಿಯಲಿ ಪಿಸುಗುಟ್ಟಿದ
ಎಲ್ಲ ಮಾತುಗಳು
ಅವನೆದೆಯ ಸೇರಿ
ಮುತ್ತಾಗಬಹುದಿತ್ತು
ಪರವಾಗಿಲ್ಲ ಈಗವು
ಎಲ್ಲರೂ ಕೇಳುವ
ಕವಿತೆಗಳಾಗಿ ಬಿಟ್ಟವು ॥

ಕತ್ತಲೆ ಮರೆಯ ಬಿಕ್ಕುಗಳು
ಸೀರೆ ತುದಿಯ ಅಶೃಬಿಂದುಗಳಿನ್ನು
ಜನ ಸಂತೆಯೆದುರು
ಬಿಕರಿಯಾಗುವ
ಪದಗಳಾಗಿ ಬಿಟ್ಟವು॥

ಎದೆಯಲುಕ್ಕುವ
ಲಾವಾರಸವು ನೋವಿನ
ದನಿಗಂಜಿ
ತಾಳಲಾರದೆ
ಬಜಾರಿನಲ್ಲಿ ಶೃತಿಹಿಡಿದು
ಮಿಡಿಯುವ ರಾಗಗಳಾಗಿಬಿಟ್ಟವು॥

ನವಿರು ನಾಚಿಕೆ
ಕನಸಲುಂಡ ಕನವರಿಕೆ
ನಿನಗೆಂದೇ ಮೀಸಲಾದ
ಒನಪು ವಯ್ಯಾರಗಳೂ
ಬಡವಿಯ ಬಹು ಬಯಕೆಯ
ಒಡವೆಗಳಾಗಿ ಬಿಟ್ಟವು॥

ಅತ್ತು ನಗಿಸಬೇಕಿದ್ದ
ಮಡಿಲ ಸೇರಬಹುದಾಗಿದ್ದ
ಹಸುಗೂಸೊಂದು
ಚೂರು ಚೂರು
ಮಾಂಸ ಮುದ್ದೆಯಂತೆ
ರಕ್ತಸ್ರಾವವಾಗಿ ಬಿಟ್ಟವು॥

ಮಂಜುಳ ಸಿ.ಎಸ್. ಹಾಸನದ ಮಹಿಳಾ ಸಕಾ೯ರಿ ಪ್ರಥಮ ದಜೆ೯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು 
ಹವ್ಯಾಸಿ ಪತ್ರಕರ್ತರೂ ಕೂಡ
ಕವಿತೆ, ಅಂಕಣ ಬರಹ, ಲಘು ಬರಹ, ಸಮಕಾಲೀನ ವಸ್ತು -ವಿಶ್ಲೇಷಣೆ, ಪುಸ್ತಕ ವಿಮರ್ಶೆ ಇವರ ಆಸಕ್ತಿಗಳು 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ