Advertisement
ಮಂಡಲಗಿರಿ ಪ್ರಸನ್ನ ಬರೆದ ಐದು ದ್ವಿಪದಿಗಳು

ಮಂಡಲಗಿರಿ ಪ್ರಸನ್ನ ಬರೆದ ಐದು ದ್ವಿಪದಿಗಳು


ತಿಳಿದಿತ್ತು, ನಕ್ಷತ್ರಗಳು ಕೈಗೆಟುಕದ ಕನಸುಗಳೆಂದು
ಆದರೂ, ಹಿಡಿಯಲು ಹೋಗಿ ವಿವಶನಾಗಿ ಕುಳಿತೆ


ಒಮ್ಮೆ ಅನಿಸಿದ್ದು, ಪಾರಿಜಾತವಾಗಿದ್ದರೆ ಸಾಕಿತ್ತು
ಹೀಗೆ ನಿತ್ಯ ನೊಂದು ಸಾಯದೆ ಸಂಜೆ ಘಮಿಸಿಲು


ನೀನು ಭುವಿಯಾದೆ, ನಾನು ಬಾನಾದೆನು
ಕೊನೆಗೂ, ನಾವು ಸಂಧಿಸದೆ ಕ್ಷಿತಿಜವಾದೆವು


ಕನಸುಗಳು ಕಾಣದಂತೆ ಕಣ್ಣೊಳಗೆ ಕಾಡಿದವು
ಬೆಳಗಲಿ ಅರಿವಿಲ್ಲದೆಯೇ ಬಾನಿಗೆ ಜಿಗಿದವು


ಮಳೆ ಸುರಿದು ನೆಲ ಹದವಾಯಿತು ಖುಷಿಯಲಿ
ನೀನಿಲ್ಲದೆ ಬರಡಾಯಿತು ಈ ಎದೆ ಇರುಳಲಿ‌

(ಕಲೆ: ರೂಪಶ್ರೀ ವಿಪಿನ್)

About The Author

ಮಂಡಲಗಿರಿ ಪ್ರಸನ್ನ

ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ