Advertisement
ವಸಂತಕುಮಾರ್‌ ಕಲ್ಯಾಣಿ ಬರೆದ ಈ ದಿನದ ಕವಿತೆ

ವಸಂತಕುಮಾರ್‌ ಕಲ್ಯಾಣಿ ಬರೆದ ಈ ದಿನದ ಕವಿತೆ

ಭಾವಚಿತ್ರ

ಅವನೊಬ್ಬನಿದ್ದ ‘ಲೋಗನ್’ ಅಂತ
ಚೆನ್ನಾಗಿಯೇ ತೆಗೆಯುತ್ತಿದ್ದ
ಫೋಟೋ! ನೋಡಿದ ತಕ್ಷಣ
ವಾರೆವ್ಹಾ ಎನ್ನುತ್ತಿದ್ದ ಅಸೂಯೆಯ
ಗೆಳೆಯನೂ ಕೂಡ ‘ಸಖತ್ತಾಗಿದೆ’ ಎಂದು
ಷರಾ ಬರೆಯುತ್ತಿದ್ದ!

ಒಮ್ಮೊಮ್ಮೆ ಪರೀಕ್ಷಿಸುತ್ತಿದ್ದ ತಾಳ್ಮೆ!
‘ಎರಡೂ ಮೊಣಕಾಲುಗಳ
ಮೇಲೆ ಹಸ್ತವಿಟ್ಟು, ತಲೆ
ತುಸು ಎಡಕ್ಕೆ ತಿರುಗಿಸಿ,
ಕೊಂಚ ಕೆಳಕ್ಕೆ ಬಗ್ಗಿಸಿ ಎಂದು.

ನಿಜ ಲೋಗನ್ ತೆಗೆದ ಫೋಟೋ
ಗಳು ಅಗಣಿತ. ಅರ್ಜಿಯ ಜೊತೆ
ಬಸ್ ಪಾಸ್‌ಗೆ, ಐಡಿ ಕಾರ್ಡ್‌ಗೆ
ಸುಮ್ಮನೇ ಖುಷಿಗೆ ಜೊತೆಗೆ
ಮೆಚ್ಚಿದ್ದ ಹುಡುಗಿಗೆ ಕಳಿಸಲು
ಗುಪ್ತ ವಿಳಾಸಕ್ಕೆ

ಈಗೇನು ಬಿಡಿ, ತರಹೇವಾರಿ
ಕ್ಯಾಮರಾಗಳು, ಅದೆಷ್ಟೋ ಪಿಕ್ಸೆಲ್‌ನ
ಮೊಬೈಲ್ ಫೋನ್‌ಗಳು, ಬುಲೆಟ್ ಏರಿ
ಹೆಗಲೇರಿಸಿ ಕೊಂಡೊಯ್ಯುವ AK 47
ನಂತಹುಗಳು

ಆದರೂ ಲೋಗನ್ ನೆನಪಾಗುತ್ತಾನೆ
ಮೊನ್ನೆ ಅಕಸ್ಮಾತ್ ನನ್ನ ಹಳೆಯ
ಊರಿಗೆ ಹೋಗಿದ್ದೆ – ಲೋಗನ್
ನಗುತ್ತಾ, ಗಡ್ಡ ಬಿಟ್ಟುಕೊಂಡಿದ್ದ
ಫ್ಲೆಕ್ಸ್ ಒಂದು ಮರದಲ್ಲಿ
ತೂಗಾಡುತ್ತಿತ್ತು
ನನ್ನ ನೋಡಿ ಕಣ್ಮಿಟುಕಿಸಿ
‘ಹೆಂಗೆ ನಾವು’ ಎಂದ ಹಾಗಾಯಿತು.

About The Author

ವಸಂತಕುಮಾರ್‌ ಕಲ್ಯಾಣಿ

ವಸಂತಕುಮಾರ್‌ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ'  (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.

2 Comments

  1. Thalagunda Anantharamu

    “ಫ್ಲೆಕ್ಸ್ ಒಂದು ಮರದಲ್ಲಿ ತೂಗಾಡುತ್ತಿತ್ತು “–ಇಷ್ಟು ಸಾಕು ಎಲ್ಲವನ್ನೂ ಸಾರಲು 👍

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ