Advertisement
ವಾಣಿ ಭಂಡಾರಿ ಬರೆದ ಗಜಲ್

ವಾಣಿ ಭಂಡಾರಿ ಬರೆದ ಗಜಲ್

ಆ ಸುರಿವ ಮಳೆಗೇನು ಗೊತ್ತು ಹರಿವ ಕಣ್ಣೀರು ನೆಲ ಸೇರದೆ ನದಿಯಾಯಿತೆಂದು
ಈ ಸುಡುವ ಬೆಂಕಿಗೇನು ಗೊತ್ತು ಸುಟ್ಟ ಒಡಲು ಭಸ್ಮವಾಗದೆ ಬೇಗುದಿಯಾಯಿತೆಂದು.

ಎಲ್ಲರೂ ಚಂದ್ರನಂಗಳದಲ್ಲೆ ನಲಿವಾಗ ಅಮಾವಾಸ್ಯೆಯ ಕತ್ತಲೇಕೆ ದಿಟ್ಟಿಸುವರು
ಆ ಬೀಸುವ ಗಾಳಿಗೇನು ಗೊತ್ತು
ತಂಪ ತಾರದೆ ಬಾಳು ಬಿರುಗಾಳಿಯಾಯಿತೆಂದು

ಏನೆಂದು ಹಾಡುವುದು ಕಹಿಯ ಗೂಡು ಕಟ್ಟೆ ಒಡೆದಿರುವಾಗ ಯಾರು ಕೇಳರು ಅಪಸ್ವರವನ್ನು
ಈ ನೆನಪುಗಳಿಗೇನು ಗೊತ್ತು ಮನ ಮಧುರವಾಗದೆ ಸಮಾಧಿಯಾಯಿತೆಂದು.

ಹಂಗು ತೊರೆದ ಮೇಲೆ ಬಂಧಗಳು ಬಳುವಳಿ ನೀಡಲಾರವು ಸಾಕಿ
ಆ ಭಾವನೆಗಳಿಗೇನು ಗೊತ್ತು
ಬಂಧುತ್ವ ಬರಡಾಗಿ ಜ್ವಾಲೆಯಾಯಿತೆಂದು

ಇಲ್ಲಿ ಯಾರಿಗೇ ಯಾರು ಇಲ್ಲ ವಾಣಿ ನಿನ್ನ ನಸೀಬು ಕೆಟ್ಟಿರುವಾಗ ಖುದನು ಕೈ ಹಿಡಿಯಲಾರ
ಈ ಶಬ್ದಗಳಿಗೇನು ಗೊತ್ತು ಮಾತು ಮರೆತು ಮೌನ ಎದೆಯೊಡೆದು ಗೋರಿಯಾಯಿತೆಂದು.

Oplus_35

ವಾಣಿ ಭಂಡಾರಿ ಮೂಲತಃ ಶಿವಮೊಗ್ಗ ಜಿಲ್ಲೆಯವರು.
ವೃತ್ತಿಯಲ್ಲಿ ಕನ್ನಡ ಉಪನ್ಯಾಸಕಿಯಾಗಿ, ಸಂಶೋಧನಾರ್ಥಿಯಾಗಿ, ಪ್ರವೃತ್ತಿಯಿಂದ ಲೇಖಕಿ, ಕವಯಿತ್ರಿ, ವಿಮರ್ಶಕಿಯಾಗಿದ್ದಾರೆ.
ಸಂತನೊಳಗಿನ ಧ್ಯಾನ (ಗಜಲ್ ಕೃತಿ) ಹಾಗೂ ಖಾಲಿ ಜೋಳಿಗೆಯ ಕನವರಿಕೆಗಳು, ಸಂತ ಮತ್ತು ಸಮೀಕ್ಷೆ ಹಾಗೂ ಹನಿ ಹನಿ ಮುತ್ತುಗಳು(ಸಂಪಾದಿತ) ಎಂಬ ಕೃತಿಗಳು ಪ್ರಕಟಗೊಂಡಿವೆ.
“ಮಲ್ನಾಡು ಕವಳ” ಲಲಿತ ಪ್ರಬಂಧ ಹಾಗೂ ಇನ್ನೂ ಕೆಲವು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ