Advertisement

ವ್ಯಕ್ತಿ ವಿಶೇಷ

ಶ್ರುತಿ ಬಿ.ಆರ್. ಗೆ ಲಭಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ‘ಯುವ ಪುರಸ್ಕಾರ’

ಶ್ರುತಿ ಬಿ.ಆರ್. ಗೆ ಲಭಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ‘ಯುವ ಪುರಸ್ಕಾರ’

ಚಿಕ್ಕಂದಿನಿಂದ ಅಮ್ಮ ತರೀಕೆರೆಯ ಸಾರ್ವಜನಿಕ ಗ್ರಂಥಾಲಯದಿಂದ ತಂದು ಕೊಡುತ್ತಿದ್ದ ಮಕ್ಕಳ ಪುಸ್ತಕಗಳನ್ನು, ಮನೆಗೆ ತರಿಸುತ್ತಿದ್ದ ಚಂಪಕ, ಬಾಲಮಂಗಳ ಮಾಸಿಕಗಳು, ಪ್ರಜಾವಾಣಿ ಮತ್ತು ಮಯೂರದಲ್ಲಿ ಬರುತ್ತಿದ್ದ ಮಕ್ಕಳ ಕತೆಗಳು, ಪುಟ್ಟಿ ರಾಮನ್ ಮುಂತಾದ ಕಾರ್ಟೂನ್‌ಗಳನ್ನು ನಾನು ನನ್ನ ಅಕ್ಕ ಪೈಪೋಟಿಯಲ್ಲಿ ಓದುತ್ತಿದ್ದೆವು, ಅದೇ ಪೈಪೋಟಿ ಮುಂದುವರೆದು ಸುಧಾದಲ್ಲಿ ಬರುತ್ತಿದ್ದ ಧಾರಾವಾಹಿಗಳು ಮತ್ತು ಹೊಸ ಪುಸ್ತಕಗಳನ್ನು ಮೊದಲು ಓದಲು ಜಗಳವಾಡುತ್ತಿದ್ದೆವು.

read more
ಪಂ. ರಾಜೀವ ತಾರಾನಾಥರ ಬದುಕಿನ ಕೆಲವು ಪುಟಗಳು…

ಪಂ. ರಾಜೀವ ತಾರಾನಾಥರ ಬದುಕಿನ ಕೆಲವು ಪುಟಗಳು…

ಇನ್ನೊಮ್ಮೆ ಗುರುಗಳನ್ನು ಗರುಡನಿಗೆ ಹೋಲಿಸಿದ್ದರು. “ಆಕಾಶದಲ್ಲಿ ಗರುಡ ಒಂದೇ ಮೇಲೆ ಹಾರ್ತಾ ಇರುತ್ತದೆ. ಅದಕ್ಕೆ ತಾನು ಎಲ್ಲರಿಗಿಂತ ಮೇಲೆ ಹಾರ‍್ತೀನಿ ಅಂತಿಲ್ಲ ಅಥವಾ ಹಾಗೆ ಹಾರಬೇಕೆಂಬ ಸ್ಪರ್ಧೆಯೂ ಇಲ್ಲ. ಎಲ್ಲ ಹಕ್ಕಿಗಳಿಗಿಂತ ಮೇಲೆ ಹಾರೋದು ಅದರ ಸಹಜ ಗುಣ…
ಪಂಡಿತ್‌ ರಾಜೀವ ತಾರಾನಾಥರ ಸಂಗೀತ-ಜೀವನದ ಕುರಿತು ಕತೆಗಾರ್ತಿ ಸುಮಂಗಲಾ ಬರಹ

read more
ಅಪ್ಪಯ್ಯ ಎಂದರೆ….:  ಇಂದಿರಾ ಜಾನಕಿ ಎಸ್. ಶರ್ಮ ಬರಹ

ಅಪ್ಪಯ್ಯ ಎಂದರೆ….: ಇಂದಿರಾ ಜಾನಕಿ ಎಸ್. ಶರ್ಮ ಬರಹ

ಒಂದುದಿನ ಅಪ್ಪಯ್ಯ ‘ಚಂದಮಾಮ’ ಪುಸ್ತಕ ಓದುತ್ತಿದ್ದಾಗ ಬಂದ ಪರಿಚಿತರೊಬ್ಬರು …… ನೀವೂ ಚಂದಮಾಮ ಓದ್ತೀರಾ…?” ಎಂದು ಆಶ್ಚರ್ಯದಿಂದ ಕೇಳಿದ್ದರು. ಆಗ ಅಪ್ಪಯ್ಯ …. ಯಾರ ಮನೆ ಹಾಳುಮಾಡುವುದು… ಎಂದು ಯೋಚಿಸುವುದಕ್ಕಿಂತ ಚಂದಮಾಮ ಓದುವುದೇ ಒಳ್ಳೆದಲ್ವೋ…..!” ಅಂತ ಹೇಳಿದ್ದರು.
ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದರೂ ಆಗಿದ್ದ ದೇರಾಜೆ ಸೀತಾರಾಮಯ್ಯನವರ ಮಗಳು ಇಂದಿರಾ ಜಾನಕಿ ಎಸ್. ಶರ್ಮ ತಮ್ಮ ತಂದೆಯ ಕುರಿತು ಹಂಚಿಕೊಂಡ ಕೆಲವು ನೆನಪುಗಳು…

read more
ನರ್ಗೆಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪುರಸ್ಕಾರ: ಸುಧಾ ಆಡುಕಳ ಬರಹ

ನರ್ಗೆಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪುರಸ್ಕಾರ: ಸುಧಾ ಆಡುಕಳ ಬರಹ

ಹಿಜಾಬ್ ಧಾರಣೆಯ ವಿರುದ್ಧ ಇರಾನಿ ಮಹಿಳೆಯರೆಲ್ಲರೂ ಬಂಡೆದ್ದಿರುವ ವಿಷಯ ಇಡಿಯ ಜಗತ್ತಿಗೆ ತಿಳಿದಿದೆ. ಮೊಹಮ್ಮದಿ ಈ ಹೋರಾಟದ ಮುಂಚೂಣಿಯಲ್ಲಿರುವವರು. ‘ಮಹಿಳೆ – ಜೀವನ – ಸ್ವಾತಂತ್ರ್ಯ’ ಎಂಬ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ತಮ್ಮ ಹೋರಾಟವನ್ನು ಸಂಘಟಿಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳು ನಿಲ್ಲಬೇಕು.
ಈ ಸಲದ ನೊಬೆಲ್‌ ಶಾಂತಿ ಪುರಸ್ಕೃತ ನರ್ಗೆಸ್‌ ಮೊಹಮ್ಮದಿ ಅವರ ಕುರಿತು ಸುಧಾ ಆಡುಕಳ ಬರಹ

read more
ಅರ್ಥಗಾರಿಕೆಯ ಭೇಷಜ, ಡಾ. ಹೈಗುಂದ ಪದ್ಮನಾಭಯ್ಯ: ನಾರಾಯಣ ಯಾಜಿ ಬರಹ

ಅರ್ಥಗಾರಿಕೆಯ ಭೇಷಜ, ಡಾ. ಹೈಗುಂದ ಪದ್ಮನಾಭಯ್ಯ: ನಾರಾಯಣ ಯಾಜಿ ಬರಹ

ಹೈಗುಂದ ಡಾಕ್ಟರರು ಕಾವ್ಯವನ್ನು ಅರ್ಥಗಾರಿಕೆಗೆ ಆಧಾರವನ್ನಾಗಿ ಬಳಸುತ್ತಿದ್ದರೂ ಅವರ ಆದ್ಯತೆ ಪ್ರಸಂಗಗಳ ಪದ್ಯಗಳಾಗಿತ್ತು. ಇಲ್ಲಿನ ಕಥಾನಕಕ್ಕೆ ನಿಷ್ಠರಾಗಿಯೇ ಅವರು ಕುಮಾರವ್ಯಾಸನನ್ನೊ ಜೈಮಿನಿಯನ್ನೋ ಬಳಸುತ್ತಿದ್ದರು. ಹಾಗಂತ ಅಲ್ಲಿನ ಪದ್ಯಗಳನ್ನು ಯಥಾವತ್ತಾಗಿ ತರುವದಕ್ಕೆ ಇವರ ವಿರೋಧವಿರುತ್ತಿತ್ತು. ಪ್ರಸಂಗಗಳಲ್ಲಿ ಕನ್ನಡವಲ್ಲದೇ ಅನ್ಯ ಭಾಷೆ ಅದು ಸಂಸ್ಕೃತವೇ ಆಗಿರಲಿ ಅದನ್ನು ಬಳಸುವದನ್ನು ಅಷ್ಟೇ ಉಗ್ರವಾಗಿ ವಿರೋಧಿಸುತ್ತಿದ್ದರು.
ಪ್ರಸಿದ್ಧ ಅರ್ಥಧಾರಿಗಳಾಗಿದ್ದ ಡಾ. ಹೈಗುಂದ ಪದ್ಮನಾಭಯ್ಯನವರ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ ನಿಮ್ಮ ಓದಿಗೆ

read more
ಜಿ. ಎಚ್. ನಾಯಕರ ನೆನಪು: ಡಾ. ಎಲ್.ಸಿ. ಸುಮಿತ್ರಾ ಬರಹ

ಜಿ. ಎಚ್. ನಾಯಕರ ನೆನಪು: ಡಾ. ಎಲ್.ಸಿ. ಸುಮಿತ್ರಾ ಬರಹ

ಮೀರಕ್ಕ ಕೂಡ ಯಾವಾಗಲೂ ನೂಲಿನ ಸೀರೆ ಧರಿಸುವವರು. ನಾವು ಎಂಎ ಓದುತ್ತಿದ್ದಾಗ ಮಾನಸಗಂಗೋತ್ರಿಯ ಬಯಲು ರಂಗಮಂದಿರದ ಆವರಣದಲ್ಲಿ ನಡೆದ ಯಾವುದೋ ಕಾರ್ಯಕ್ರಮ ನೋಡಲು ಮೀರಕ್ಕ, ಮಗಳು ಕೀರ್ತಿಯೊಡನೆ ಬಂದಿದ್ದರು. ಅವರುಟ್ಟ ರೇಷ್ಮೆ ಸೀರೆಯನ್ನು ಚೆನ್ನಾಗಿದೆಯೆಂದು ನಮ್ಮ ಗುಂಪಿನಲ್ಲಿದ್ದವರು ಯಾರೋ ಹೇಳಿದಾಗ ಕೀರ್ತಿ ತಕ್ಷಣ ಇದು ಅಮ್ಮನಿಗೆ ಯಾರೋ ಪ್ರಸೆಂಟ್ ಮಾಡಿದ್ದು ಅಪ್ಪ ಬರೀ ಕಾಟನ್ ಸೀರೆ ಕೊಡಿಸ್ತಾರೆ ಅಂತ ತಮಾಷೆಗೆಂಬಂತೆ ಹೇಳಿದಳು.
ನೆನ್ನೆಯಷ್ಟೇ ಅಗಲಿದ ಹಿರಿಯ ವಿಮರ್ಶಕ ಜಿ. ಎಚ್. ನಾಯಕರ ಕುರಿತು ಡಾ. ಎಲ್.ಸಿ. ಸುಮಿತ್ರಾ ಹಂಚಿಕೊಂಡಿದ್ದ ನೆನಪುಗಳು ನಿಮ್ಮ ಓದಿಗೆ

read more
ಅಕ್ಷರದ ಮೂಲಕ ಚಿರಂಜೀವಿಯಾಗಿರುವ ಶ್ರೀನಿವಾಸ ವೈದ್ಯ

ಅಕ್ಷರದ ಮೂಲಕ ಚಿರಂಜೀವಿಯಾಗಿರುವ ಶ್ರೀನಿವಾಸ ವೈದ್ಯ

ನವೋದಯಕಾಲದ ಲೇಖಕರು ಎದುರಿಸುವ ಎಲ್ಲಬಗೆಯ ವಿಪ್ಲವ ಮತ್ತು ಆತಂಕಗಳನ್ನು ಒಂದು ಕುಟುಂಬದ ಕಥೆಯಮೂಲಕ ಹೇಳುವ ಶ್ರೀನಿವಾಸ ವೈದ್ಯರ ಕ್ರಿಯಾಶೀಲತೆಯನ್ನು ಇಲ್ಲಿ ಕಾಣಬಹುದಾಗಿದೆ. ಅನೇಕ ಸಲ ಅನಂತಮೂರ್ತಿಯವರ ಮೌನಿಯಲ್ಲಿ ಈ ಕಾದಂಬರಿಯ ನೆರಳು ಬಿದ್ದಿರಬಹುದೇ ಅನಿವುವಷ್ಟು ಪ್ರಭಾವಶಾಲಿಯಾಗಿದೆ. ಬೇರು ಕಳೆದುಕೊಂಡ ವ್ಯಕ್ತಿ ಹೊಸ ಬೇರಿನೊಂದಿಗೆ ಕಂಡುಕೊಳ್ಳುವ ಆರ್ಥಿಕ ಭದ್ರತೆ ಮತು ಸಾಮಾಜಿಕ ಸ್ಥಾನಮಾನವನ್ನೂ ಪಡೆದುಕೊಳ್ಳುವ ಕ್ರಿಯೆ ಬ್ರಿಟಿಷರಿಂದ ಭಾರತಕ್ಕೆ ಸಿಗುವ ಸ್ವಾಂತಂತ್ರ್ಯದ ಜೊತೆಗೆ ಹಾಸುಹೊಕ್ಕಾಗಿದೆ.
ಇಂದು ತೀರಿಹೋದ ಶ್ರೀನಿವಾಸ ವೈದ್ಯರ ಕೃತಿಗಳ ಕುರಿತು ನಾರಾಯಣ ಯಾಜಿ ಬರಹ

read more
ಶ್ರೀನಿವಾಸ ವೈದ್ಯರೆಂದರೆ….

ಶ್ರೀನಿವಾಸ ವೈದ್ಯರೆಂದರೆ….

ಅವರು ಈಸಿದಷ್ಟೂ, ಓದುಗರಾದ ನಾವು ಇದ್ದು ಜಯಿಸುತ್ತೇವೆ. ಅಂತರಂಗ-ಬಹಿರಂಗ, ವ್ಯಕ್ತಿ-ಸಮಾಜ ಎಂದೆಲ್ಲ ಕಾಲ್ಪನಿಕ ಗಡಿರೇಖೆ ಹಾಕಿಕೊಳ್ಳದೇ ಒಟ್ಟಂದದಲ್ಲಿ ಸಮಾಜವನ್ನು ತುಂಬಾ ಅಚ್ಛೆಯಿಂದ, ಅಷ್ಟೇ ಅಚ್ಚರಿಯಿಂದ ಅನುಭವಿಸಿದ ಈ ಜೀವಿಯ ಬರವಣಿಗೆಯಲ್ಲಿ ಬದುಕು ತನ್ನೆಲ್ಲ ನೆಳಲು ಬೆಳಕುಗಳೊಂದಿಗೆ ಬಸಿಯುತ್ತದೆ. ಇದು ಹೀಗೇಕೆ ಎಂದೆಲ್ಲ ಕೇಳದೇ, ಅರೆ ಇದು ಹೀಗಿದೆಯಲ್ಲ ಎಂದು ಸೋಜಿಗದಿಂದ ಇರವನ್ನು ಅನುಭವಿಸುವ ಅರಿವಿನ ದಾರಿ ಇದು. `ಅರಿವೇ ಗುರು’ ಎಂದರೆ, `ಹೌದ್ರೀ, ಆದರೆ ಅದೂ ಅಲ್ಲಲ್ಲಿ ಸ್ವಲ್ಪ ಹರಿದಿರ್ತದೆ’ ಎಂದು ಗಹಗಹಿಸಿ ನಗುವ ವೈದ್ಯರ ವಿನೋದ ಅಪ್ಪಟ.

read more
ಉಳಿದದ್ದೀಗ ನೆನಪುಗಳಷ್ಟೇ….

ಉಳಿದದ್ದೀಗ ನೆನಪುಗಳಷ್ಟೇ….

ಅಡಿಗರ ರಾಮನವಮಿಯ ದಿವಸ ಪದ್ಯದ ಬಗ್ಗೆ ಅವರೊಡನೆ ಚರ್ಚಿಸುತ್ತಿದ್ದ ದಿನಗಳು ನನ್ನ ಬದುಕಿನ ಸುವರ್ಣ ಯುಗ. ಅವ್ರಿಗೆ ತಂತ್ರದ ಬಗ್ಗೆ ವಿಶೇಷ ಆಸಕ್ತಿ ಎಂದಾಗ ಒಪ್ಪಿಕೊಂಡಿದ್ದರು. ಅಡಿಗರ ಕುರಿತ ದೂರುಗಳನ್ನೂ, ಮೆಚ್ಚುಗೆಯನ್ನೂ ಮುಕ್ತವಾಗಿ ಹೇಳುತ್ತಿದ್ದರು. ನೀವೇಕೆ ನಿಮ್ಮ ಬರೆಯುವ ರೀತಿಯನ್ನು ಪದೇ ಪದೇ ಬದಲಾಯಿಸಿದಿರಿ.
ತಮ್ಮ ಗ್ರಹಿಕೆಗೆ ಸಿಕ್ಕ ಕೆ.ವಿ. ತಿರುಮಲೇಶರ ಕುರಿತು ಬರೆದಿದ್ದಾರೆ ಮಾಲಿನಿ ಗುರುಪ್ರಸನ್ನ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ