Advertisement

ಸರಣಿ

“ಮಿಡಲ್”‌ ನಾಮದವನಾದ ನಾನು…: ಎಚ್. ಗೋಪಾಲಕೃಷ್ಣ ಸರಣಿ

“ಮಿಡಲ್”‌ ನಾಮದವನಾದ ನಾನು…: ಎಚ್. ಗೋಪಾಲಕೃಷ್ಣ ಸರಣಿ

ಈ ಮಿಡಲ್ ಬಂದ ಒಂದು ತಿಂಗಳಲ್ಲಿ ಅಂತ ಕಾಣ್ಸುತ್ತೆ ಹೆಗಡೆ ಸಾಹೇಬರು ಎಲ್ಲೋ ಭಾಷಣ ಮಾಡುತ್ತಾ ಶೇಖಡಾ ಹತ್ತರಷ್ಟು ಉಳಿಸಿ ಸರ್ಕಾರದಲ್ಲಿ ಇಡಿ ಅಂತ ಹೇಳಿದರೆ ಜನ ತಮಾಷೆ ಮಾಡ್ತಾರೆ ಅಂತ ಹೇಳಿದ್ದರು. ಸರ್ಕಾರದ ವರಿಷ್ಠರು ಸಹಾ ಈ ಮಿಡಲ್‌ಗಳನ್ನೂ ಆಸಕ್ತಿಯಿಂದ ಓದುತ್ತಾರೆ ಅಂತ ಗೊತ್ತಾಗಿತ್ತು. ಮಿಡಲ್ ಮೋಡಿಯಲ್ಲಿ ಕತೆ ನಿಂತೆ ಬಿಡ್ತು ಅಂತ ಅನಿಸಲಿಲ್ಲ. ಕಾರಣ ಮನಸು ಪೂರ್ತಿ ಮಿಡಲ್ ಹಾಗೂ ಹಾಸ್ಯ ಲೇಖನಗಳತ್ತ ಪೂರ್ಣ ವಾಲಿಬಿಟ್ಟಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೪ನೇ ಬರಹ ನಿಮ್ಮ ಓದಿಗೆ

read more
ಜಗತ್ತಿನ ಅತ್ಯಂತ ಸುಂದರ ಫೋಟೋ(2):ಶೇಷಾದ್ರಿ ಗಂಜೂರು ಸರಣಿ

ಜಗತ್ತಿನ ಅತ್ಯಂತ ಸುಂದರ ಫೋಟೋ(2):ಶೇಷಾದ್ರಿ ಗಂಜೂರು ಸರಣಿ

ಈ ಆಲೋಚನೆ ಹೊಳೆದ ರಾತ್ರಿ ಅವನಿಗೆ ನಿದ್ದೆಯೇ ಬರಲಿಲ್ಲ. ಕಾಲೇಜಿನ ಇನ್ನೊಬ್ಬ ಪ್ರೊಫೆಸರ್ ಕೊಟ್ಟಿದ್ದ ಹೋಂ ವರ್ಕ್ ಮಾಡಲೂ ಸಹ ಮನಸು ಬರಲಿಲ್ಲ. ಬದಲಿಗೆ, ಹಾಸಿಗೆಯಿಂದೆದ್ದು, ಇಲ್ಲಿಯವರೆಗೆ ಕಲೆ ಹಾಕಿದ್ದ ಅಂಕಿ-ಸಂಖ್ಯೆಗಳು-ಮಾಹಿತಿಗಳನ್ನೆಲ್ಲಾ ಮತ್ತೆ-ಮತ್ತೆ ನೋಡಿ, ಸಣ್ಣ ಕಾಗದದ ಮೇಲೊಂದು ದಾರದಂತೆ ಗೆರೆಯೊಂದನ್ನು ಎಳೆದು ಅದರ ಮೇಲೆ, ತನ್ನ ಲೆಕ್ಕಾಚಾರ ಬಳಸಿ ಬಿಳಿಗಣ್ಣು, ಹಳದಿ ಬಣ್ಣ, ಕಿರು ರೆಕ್ಕೆ, ಹಾರೆಗಣ್ಣು ಇತ್ಯಾದಿ ಜೀನುಗಳನ್ನು ಮಾರ್ಕ್ ಮಾಡಿದ. ವಂಶವಾಹಿ ಗುಣಗಳು ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಹೇಗೆ ಸಂವಹಿಸುತ್ತದೆ ಎಂದು ತೋರುವ “ಜೀನ್ ಮ್ಯಾಪ್” ಒಂದು ಹೀಗೆ ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಸಿದ್ಧವಾಯಿತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”

read more
ರಂಗದ ಮೇಲಿನ  ದೃಶ್ಯಕಾವ್ಯ  ‘ಚಿತ್ರಾಂಗದಾ’: ಚಿತ್ರಾ ವೆಂಕಟರಾಜು ಸರಣಿ

ರಂಗದ ಮೇಲಿನ  ದೃಶ್ಯಕಾವ್ಯ  ‘ಚಿತ್ರಾಂಗದಾ’: ಚಿತ್ರಾ ವೆಂಕಟರಾಜು ಸರಣಿ

ಕೊನೆಗೂ ಯಾಕೆ ಈ ನಾಟಕವನ್ನು ಮಾಡಬೇಕು, ಯಾಕೆ ಈ ನಾಟಕವನ್ನು ನೋಡಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ, ಪ್ರೇಕ್ಷಕನ ಮೂಲಭೂತ ಪ್ರಶ್ನೆ. ಇಲ್ಲಿ ಇದು ಚಿತ್ರಾಂಗದಾ ಮತ್ತು ಅರ್ಜುನನ ಕತೆಯಾದರೂ ಅದರ ನೆಪದಲ್ಲಿ ನಡೆಯುವುದು ಗಂಡು ಹೆಣ್ಣು ಮತ್ತು ಅವರಿಬ್ಬರ ಸಂಬಂಧದ ಸಂಕೀರ್ಣತೆಯ ಬಗ್ಗೆ. ಹೆಣ್ಣಾದರೂ ಗಂಡಿನಂತೆ ವನದಲ್ಲಿರುವ ಚಿತ್ರಾಂಗದೆ ಅರ್ಜುನನನ್ನು ನೋಡಿದ್ದೆ ಮತ್ತೆ ‘ಹೆಣ್ತನ’ ಕ್ಕೆ ಹಾತೊರೆಯುತ್ತಾಳೆ. ಅವಳೊಳಗಿನ ಹೆಣ್ಣನ್ನು ನೋಡಿದ ಅರ್ಜುನ ತನ್ನ ಬ್ರಹ್ಮಚರ್ಯದ ನಿಯಮವನ್ನು ಮುರಿಯುತ್ತಾನೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿಯಲ್ಲಿ ‘ಚಿತ್ರಾಂಗದಾ’ ನಾಟಕದ ಕುರಿತ ಬರಹ

read more
ದೇವರನ್ನು‌ ಕುರಿತು ಒಂದಿಷ್ಟು….: ಬಸವನಗೌಡ ಹೆಬ್ಬಳಗೆರೆ ಸರಣಿ

ದೇವರನ್ನು‌ ಕುರಿತು ಒಂದಿಷ್ಟು….: ಬಸವನಗೌಡ ಹೆಬ್ಬಳಗೆರೆ ಸರಣಿ

ಇತ್ತೀಚೆಗಂತೂ ದೇವರ ಆರಾಧನೆಯ ಜೊತೆ ಜೊತೆಗೆ ಪುರುಷ ಪ್ರಯತ್ನಕ್ಕೂ ಹೆಚ್ಚು ಒತ್ತು ಕೊಡಬೇಕು ಎಂದು ಕಲಿತಿದ್ದೇನೆ. ದೇವರು ಒಂಥರಾ ರಾಸಾಯನಿಕ ಕ್ರಿಯೆಯ ‘ಕ್ರಿಯಾವರ್ಧಕ’ (ಕ್ಯಾಟಲಿಸ್ಟ್) ಇದ್ದ ಹಾಗೆ ಎಂದು ನಂಬಿದ್ದೇನೆ. ವ್ಯಕ್ತಿ ತಾನು ಮಾಡುವ ಕಾರ್ಯಗಳಿಂದ ದೇವರ ಸ್ಥಾನಕ್ಕೆ ಏರಬಹುದು ಎಂದು ಹಲವು ಮಹಾನುಭಾವರ ಜೀವನದಿಂದ ತಿಳಿದುಕೊಂಡಿದ್ದೇನೆ. ಆದರೂ ಹಲವರು ದೇವರ ಹೆಸರಲ್ಲಿ ಜಗಳವಾಡುವುದನ್ನು ನೋಡಿ ವಿಚಿತ್ರ ಎನಿಸುತ್ತದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತನೆಯ ಕಂತು ನಿಮ್ಮ ಓದಿಗೆ

read more
ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಕ್ರೂಗರ್ ಅವರು ಜೀವನಪ್ರೀತಿಯ ಖಾಸಗಿ ದುಃಖ ಮತ್ತು ಅಸಾಧ್ಯತೆಗಳ ಹಾಡುಗಳನ್ನು ರಚಿಸುವ ಕವಿ. ಈ ಕವಿಯು ವಿವಿಧ ಸಂಸ್ಕೃತಿಗಳ ಒಬ್ಬ ಸ್ವಯಂ ನಿರ್ಮಿತ ದೈವವಾಣಿಯಂತೆ. ಅವರ ಕಾವ್ಯ ಒಂದು ಗಂಭೀರ ಆಲೂಗಡ್ಡೆ ಕೃಷಿಯ ಹಾಗೆ. ರಾತ್ರಿಯಲ್ಲಿ ಹೇಗೆ ನಡೆಯಬೇಕು, ಕತ್ತಲೆಯಲ್ಲಿ ನಾವು ತಲುಪುವ ಯಾವುದೇ ಗಮ್ಯಸ್ಥಾನವನ್ನು ಹೇಗೆ ಹೊಂದಬೇಕು, ನಾವು ನಂಬಬಹುದಾದ ಅಥವಾ ನಂಬದಿರುವ ಬೆಳಕಿಗೆ ಅಂತಿಮವಾಗಿ ನಮ್ಮನ್ನು ಒಪ್ಪಿಸಿಕೊಳ್ಳುವುದು ಹೇಗೆ ಎಂದು ಕ್ರೂಗರ್ ನಮಗೆ ಕಲಿಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್-ರವರ (Michael Krüger) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

read more
ಹೊಸ ಹಾದಿ ಹಿಡಿದ ಬರವಣಿಗೆ…: ಎಚ್. ಗೋಪಾಲಕೃಷ್ಣ  ಸರಣಿ

ಹೊಸ ಹಾದಿ ಹಿಡಿದ ಬರವಣಿಗೆ…: ಎಚ್. ಗೋಪಾಲಕೃಷ್ಣ  ಸರಣಿ

ಗೆಳೆಯರ ಪರಿಚಯದ ಮೊದಲನೇ ಭೇಟಿಯಲ್ಲೇ ಅವರು ಒಬ್ಬ ಬರಹಗಾರರು ಎಂದು ತಿಳಿಯಿತು. ಆಗಲೇ ಸುಮಾರು ಕತೆಗಳು ಮತ್ತು ಹಾಸ್ಯ ಲೇಖನ ಬರೆದಿದ್ದರು. ಸುದ್ದಿ ಹಾಗೇ ನನ್ನ ಬರವಣಿಗೆಯತ್ತ ತಿರುಗಿತು. ಒಂದೋ ಎರಡೋ ಕತೆ ಬರೆದಿರುವ ಸಂಗತಿಯನ್ನು ಕೊಂಚ ನಾಚಿಕೆಯಿಂದ ಹೇಳಿಕೊಂಡೆ. ಬರಹಗಾರರಿಗೆ ಮುಖೇಡಿತನ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಅನುಭವವಾಗಿತ್ತು. ಮತ್ತು ನನಗಂತೂ ಈಗಲೂ ಅದು ಮೆದುಳಿನ ಮೇಲಿನ ಸ್ತರದಲ್ಲಿ ಅಂಟಿಕೊಂಡು ಬಿಟ್ಟಿದೆ! ಮಾತಿನ ಮಧ್ಯೆ ಅವರು ಮಿಡಲ್ ವಿಷಯ ತೆಗೆದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೩ನೇ ಬರಹ ನಿಮ್ಮ ಓದಿಗೆ

read more
ಸುಂದರ ಕಾಡಿನ ರೋ‌ಚಕ ಕಥೆಗಳು-೨: ರೂಪಾ ರವೀಂದ್ರ ಜೋಷಿ ಸರಣಿ

ಸುಂದರ ಕಾಡಿನ ರೋ‌ಚಕ ಕಥೆಗಳು-೨: ರೂಪಾ ರವೀಂದ್ರ ಜೋಷಿ ಸರಣಿ

ಶಾಲೆಗೆ ಹೋಗುವಾಗ, ಹಲವೆಡೆ ನಾವು ಇಂಥ ನಯನ ಮನೋಹರ “ಹೂ ರಥ” ನೋಡುತ್ತ ಹೋಗುತ್ತಿದ್ದೆವು. ಈಗಲೂ ಆ ಸುಂದರ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಹಾಗೇ ಇನ್ನೊಂದು ಚಂದದ ಹೂ ಅಂದರೆ, ಚದುರಂಗಿ. ಇದು ತೀರಾ ಪುಟಾಣಿ ಹೂಗಳ ಗೊಂಚಲು. ನಕ್ಷತ್ರದ ಆಕಾರದ ಗಾಢ ಕೇಸರಿ, ಕೆಂಪು ಹೂಗಳ ಚದುರಂಗಿ ಪೊದೆಯಾಗಿ ಬೆಳೆಯುವ ಸಸ್ಯ. ಇದರ ಸಪೂರ ಕಾಂಡಕ್ಕೆ ಸೂಕ್ಷ್ಮ ಮುಳ್ಳುಗಳಿರುತ್ತವೆ. ಇದರ ಹೂ ನೋಡಲು ಬಹಳ ಚಂದ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹನ್ನೊಂದನೆಯ ಕಂತು

read more
ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು” ಇಂದಿನಿಂದ

ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು” ಇಂದಿನಿಂದ

ಮನುಷ್ಯನಿಗೆ ಮನುಷ್ಯನೇ ಹುಟ್ಟುವ ತದ್ರೂಪಿತನ ಪುರಾತನ ಕಾಲದಿಂದಲೂ ಕುತೂಹಲ ಮೂಡಿಸಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಗ್ರೀಕ್ ಗಣಿತಜ್ಞ-ತತ್ವಶಾಸ್ತ್ರಿ ಪೈಥಾಗೊರಸ್ ಅನುವಂಶೀಯತೆಯ ಸೂತ್ರ ವೀರ್ಯದಲ್ಲಿದೆ ಎನ್ನುತ್ತಾನೆ. ಅವನ ಪ್ರಕಾರ, ವೀರ್ಯ ಪುರುಷನಿಂದ ಹೊರಬರುವ ಮುನ್ನ ದೇಹದ ಎಲ್ಲಾ ಭಾಗಗಳಲ್ಲಿ ಹರಿದು ಆ ಭಾಗಗಳೆಲ್ಲದುರ ಮಾಹಿತಿಯನ್ನೂ ಕಲೆಹಾಕಿ ತದ್ರೂಪಿ ಇರುವ ಬೀಜವಾಗುತ್ತದೆ. ಈ ಬೀಜ ಗರ್ಭವನ್ನು ಸೇರಿದಾಗ, ಆ ತದ್ರೂಪಿಗೆ ಬೇಕಿರುವ ಪೋಷಕಾಂಶ ನೀಡಿ ಅದನ್ನು ದೊಡ್ಡದು ಮಾಡುವುದಷ್ಟೇ ಹೆಣ್ಣಿನ ಕೆಲಸ.
ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”

read more
ಪುಸ್ತಕ ಹಾಗೂ ನೋಟ್ ಪುಸ್ತಕದ ಬಗ್ಗೆ ಒಂದಷ್ಟು ಮಾತು…: ಬಸವನಗೌಡ ಹೆಬ್ಬಳಗೆರೆ ಸರಣಿ

ಪುಸ್ತಕ ಹಾಗೂ ನೋಟ್ ಪುಸ್ತಕದ ಬಗ್ಗೆ ಒಂದಷ್ಟು ಮಾತು…: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ಟಿಸಿಹೆಚ್ ಓದುವಾಗ ನಮ್ಮೂರಲ್ಲಿದ್ದ ಒಬ್ಬರು ನನಗೆ ಅವರ ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿದ್ದರು. ಅಲ್ಲದೇ ನಮ್ಮೂರ ಗ್ರಂಥಪಾಲಕ ವಿಜಯಣ್ಣನೂ ಕೇಳಿದಾಗ ಪುಸ್ತಕಗಳನ್ನು ಕೊಡುತ್ತಿದ್ದರು. ನನ್ನ ಓದಿಗೆ ತುಂಬಾ ಸಹಕಾರ ಮಾಡಿದರು. ಪ್ರೌಢಶಾಲೆಯಲ್ಲಿದ್ದಾನ ನನಗೆ ನನ್ನ ಸೀನಿಯರ್ ಒಬ್ಬರು ಹಳೇ ಪುಸ್ತಕಗಳನ್ನು ಕೊಡುತ್ತೇನೆ ಎಂದು ಹೇಳಿ ಮೊದಲೇ ನನ್ನ ಬಳಿ ಅಡ್ವಾನ್ಸ್ ಆಗಿ ಹಣ ಪಡೆದು ಯಾಮಾರಿಸಿದ ಘಟನೆಯನ್ನು ನಾನು ಇನ್ನೂ ಮರೆತಿಲ್ಲ. ಅಲ್ಲದೇ ಪಿಯುಸಿಯನ್ನು ಬೆಂಗಳೂರಿನಲ್ಲಿ ಓದುವಾಗ ನಮ್ಮ ಹಾಸ್ಟೆಲ್ಲಿನ ಕೆಲ ಹುಡುಗರು ಪುಸ್ತಕಗಳನ್ನು ಕದ್ದು ಆಗ ಅವೆನ್ಯೂ ರಸ್ತೆಯಲ್ಲಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಿಗೆ ಮಾರುತ್ತಿದ್ದ ಘಟನೆಗಳೂ ಇವೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ