Advertisement
ಕತೆಗಾರ ಡಾ. ರಾಜಶೇಖರ ನೀರಮಾನ್ವಿ ನಿಧನ…

ಕತೆಗಾರ ಡಾ. ರಾಜಶೇಖರ ನೀರಮಾನ್ವಿ ನಿಧನ…

ನಿಸ್ಸಂಶಯವಾಗಿ ಕನ್ನಡದ ಕೆಲವೇ ಕೆಲವು ಮೇರು ಕಥನ ಪತಿಭೆಗಳಲ್ಲಿ ಡಾ. ರಾಜಶೇಖರ್ ನೀರಮಾನ್ವಿ ಒಬ್ಬರು. ಒಂದರ್ಥದಲ್ಲಿ ಅತ್ಯಂತ ಕಡಿಮೆ ಬರೆದ ನಮ್ಮ ಕಾಲದ ಬಹಳ ದೊಡ್ಡ ಲೇಖಕ. ಇನ್ನೊಂದರ್ಥದಲ್ಲಿ ಜೀನಿಯಸ್. ಸದಾ ಕಾಡುವ ಆ ನಿಗೂಢ ಗುಣ ಅವರ ಬರಹ ಮತ್ತು ಬದುಕಿಗಿರುವುದರಿಂದಲೇ, ಅವರನ್ನು ಮರೆಯುವುದು ಯಾರಿಗೂ ಅಷ್ಟು ಸುಲಭವಲ್ಲ!

ಇವರ ಒಂದು ಕಥೆಯನ್ನು ಆಧರಿಸಿ ಖ್ಯಾತ ನಿರ್ದೇಶಕ ಬಸು ಚಾಟರ್ಜಿ ಹಿಂದಿ ಸಿನಿಮಾ ಮಾಡಿದ್ದಾರೆ.

ಒಂದು ಅನಿರೀಕ್ಷಿತ ಅಪಘಾತದ ನಂತರ ನೀರ ಮಾನ್ವಿಯವರು ೫೦ ವರ್ಷ ಏನೂ ಬರೆಯದೆ ಮೌನವಾಗುಳಿದರು. ಅಪಾರ ಕ್ರಿಯಾಶೀಲ ಒತ್ತಡವಿದ್ದೂ, ಏನೂ ಮಾಡದೇ ಸುಮ್ಮನಿರುವುದು, ನಿಜಕ್ಕೂ ಆಘಾತಕಾರಿ ಅನುಭವ ಹಾಗೂ ಕನ್ನಡ ವಾಚಕ ಪ್ರಪಂಚದ ದುರಾದೃಷ್ಟವೇ ಸೈ.

ಕನ್ನಡದ ದೊಡ್ಡ ವಿಮರ್ಶಕರಂತೆ ಇವರನ್ನು ‘ನವ್ಯ ಕತೆಗಾರ’ ಎಂದು ಕರೆಯಲು ನನ್ನ ಮನಸ್ಸು ಯಾಕೊ ಒಪ್ಪುತ್ತಿಲ್ಲ… ಸಾರಿ..

ಈ ಅಪರೂಪದ ಹಿರಿಯ ಸಾಹಿತ್ಯ ಸಂಗಾತಿಗೆ ಅಂತಿಮ‌ ನಮನಗಳು.

-ಆರಿಫ್‌ ರಾಜಾ, ಕವಿ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ