Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಓದೆಂಬ ಹುಚ್ಚುಹೊಳೆಯ ಸುಖ: ಲಕ್ಷ್ಮಣ ವಿ.ಎ. ಅಂಕಣ

“ದಿನವಿಡೀ ದುಡಿದರೂ ಅವನಿಗೆ ಸಿಗುವುದು ಎರಡು ಪಾವು ಅಕ್ಕಿ ಮಾತ್ರ. ಇದರಲ್ಲಿ ಅವನ ಕರುಳುಬಳ್ಳಿಗಳಾದ ಚನಿಯ, ಗುರುವ, ಬೆಳ್ಳಿ, ಕಾಳ, ನೀಲ ಇವರಿಗೆ ಗಂಜಿಯಾಗಬೇಕು. ಉಳಿದರೆ ಬಾಡು ಎಂಬ ನಾಯಿಗೆ ಆಹಾರ. ಇಲ್ಲದಿದ್ದರೆ ಉಪವಾಸ. ಎರಡು ಎತ್ತುಗಳು ಇವನ ಕನಸನ್ನು ಪೋಷಿಸುತ್ತಿರುವ ಜೀವಗಳು.”

Read More

ಆತ್ಮಜ್ಞಾನದ ಪುಸ್ತಕವನ್ನು ಹುಡುಕುವುದೆಲ್ಲಿ?: ಲಕ್ಷ್ಮಣ ವಿ.ಎ. ಅಂಕಣ

“ಮನುಷ್ಯ ಬುದ್ದಿವಂತನಾದಂತೆಲ್ಲ ಅಪಾಯಕಾರಿ ಕೂಡ ಆಗುತ್ತಾನೆ. ಒಬ್ಬ ಅನಕ್ಷರಸ್ಥನ ಅಜ್ಞಾನಕ್ಕಿಂತ ಬುದ್ಧಿವಂತನ ಕುಟಿಲತೆ ಹೆಚ್ಚು ಅಪಾಯಕಾರಿ. ನಾಗರೀಕತೆ ಬೆಳೆದಂತೆಲ್ಲ ಮನುಷ್ಯ ಇನ್ನಷ್ಟು ಕರುಣಾಳು ಆಗಬೇಕಿತ್ತು, ತನ್ನ ನಿಜ ಧರ್ಮದಾಚೆ ಮನುಷ್ಯತ್ವ ಇದೆ ಎಂಬ ಅರಿವು ಇರಬೇಕಾಗಿತ್ತು. ಸ್ವಾರ್ಥ ಲೋಭ ತುಂಬಿದ ಜಗತ್ತಿನಲ್ಲಿ ಓದಿದ ಮನುಷ್ಯ ಉದಾರಿಯಾಗಬೇಕಿತ್ತು. ಆದರೆ ಆದದ್ದೇ ಬೇರೆ….

Read More

ದುರಂತಗಳ ಸುಳಿಗಾಳಿಯಲ್ಲಿ….: ಲಕ್ಷ್ಮಣ ವಿ.ಎ. ಅಂಕಣ

“ಬೆಂಗಳೂರಿನಲ್ಲಿ ಬಿಲ್ಡರುಗಳ ಲಾಬಿಗೆ ಮಣಿದು ತವರಿಗೆ ಮರಳುವ ಆಸೆ ಹೊತ್ತುಬಂದ ವಲಸೆ ಕಾರ್ಮಿಕರ ಕಣ್ಣುಗಳಲ್ಲಿ ಅದೆಂತಹ ಆಸೆಗಳಿದ್ದವು? ತಮ್ಮವರನ್ನು ನೋಡುವ ಕಾತರ ಎಷ್ಟು ಇದ್ದಿರಬೇಕು. ರೈಲು ರದ್ದಾದ ಸುದ್ದಿಯ ಕೇಳಿ ಇವರೇನು ಬೆಚ್ಚಿ ಬಿದ್ದವರಲ್ಲ. ಇದ್ದ ಲಗ್ಗೇಜನ್ನೇ ತುಸು ಕಡಿಮೆಮಾಡಿ ಬಿಹಾರ ಜಾರ್ಖಂಡ ಮಧ್ಯಪ್ರದೇಶ ಓರಿಸ್ಸಾದಿಂದ ಬಂದ ಕೂಲಿಗಳು ಕೆಂಡದ ಟಾರು ರೋಡು ತುಳಿಯುತ್ತ ನಡೆದುಕೊಂಡೇ ಹೋಗುತ್ತಾರೆಂದರೆ..”

Read More

ಮುಳ್ಳಯ್ಯನ ಗಿರಿ ಎಂಬ ಆತ್ಮಪ್ರತ್ಯಯ ಕಳಚುವ ದಾರಿ: ಲಕ್ಷ್ಮಣ ವಿ.ಎ. ಅಂಕಣ

“ಇದರ ಹಿಂದಿನ ರಾತ್ರಿ ಕೆಮ್ಮಣಗುಂಡಿಯ ಐ ಬಿ ತಲುಪಿದಾಗ ರಾತ್ರಿ ಹನ್ನೊಂದು ಗಂಟೆ. ರಾತ್ರಿ ಎಂಟುಗಂಟೆಯ ನಂತರ ಇಲ್ಲಿ ಊಟ ಸಿಗುವುದಿಲ್ಲವೆಂದು ಖಾತ್ರಿಯಾದ ಮೇಲೆ ಬೀರೂರಿಲ್ಲೇ ಊಟ ಮಾಡಿದೆವು. ಅದೂ ನಾವು ರಾತ್ರಿಯ ಕೊನೆಯ ಗಿರಾಕಿಗಳಾಗಿದ್ದರಿಂದ ಅಲ್ಲಿಯ ಮೆನು ನೋಡುವ ಗೋಜಿಗೆ ಹೋಗದೆ ಅಲ್ಲಿ ಉಳಿದಿದ್ದ ಅನ್ನ ರಸಂ ನಮ್ಮ ಪಾಲಿನ…”

Read More

ಕೊರೋನಾದ ಬಾಹುಬಂಧದಲಿ ಸಿಲುಕಿ..: ಲಕ್ಷ್ಮಣ ವಿ.ಎ. ಅಂಕಣ

“ನಾಳೆಯಿಂದ ಕೆಲಸ ಇಲ್ಲ ಕೂಲಿಯೂ ಇಲ್ಲ. ಹಾಗಿದ್ದರೆ ಊಟಕ್ಕೇನು? ಇವರನ್ನು ಕರೆ ತಂದ ಠೇಕೆದಾರನ ಫೋನ್ ನಂಬರು ಬಿಜಿ ಬರ್ತಿದೆ. ಅಳಿದುಳಿದ ಗಂಟು ಮೂಟೆ ಕಟ್ಟಿ ಇವಳೂ ದಕ್ಷಿಣ ದೆಹಲಿಯಿಂದ ಕಾನ್ಪುರಕ್ಕೆ ನಡೆದೇ ಬಿಟ್ಟಳು, ಕುಂಟುವ ಒಂದು ಮಗು ತೆವಳುವ ಇನ್ನೊಂದು ಮಗು ಕಂಕುಳಲ್ಲಿ ಒಂದು ಮಗು. ಗಂಡನಿಗೆ ಬೀಡಿ ಅಂಟಿಸುವ ಚಟ, ಆದರೆ ಬೀದಿ ಅಂಗಡಿಗಳೂ ಬಂದ್ ಆಗಿವೆ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ