Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ಒಂಟಿಯಾದಾಗ ಕೈಹಿಡಿಯುವ ಗುಲ್ಜಾರರು: ಗೊರೂರು ಶಿವೇಶ್‌ ಬರಹ

ಗುಲ್ಜಾರ್ ನಿರ್ಜೀವ ವಸ್ತುಗಳನ್ನು ಹೇಗೆ ರೂಪಕಗಳಿಂದ ನಿರೂಪಿಸುತ್ತಾರೆ ಎಂಬುದನ್ನು ಇಲ್ಲಿ ಕಾಣಬಹುದು. ರಸ್ತೆಗಳು ನಡೆಯುತ್ತಲೇ ಇರುತ್ತವೆ… ಆದರೆ ವಾಸ್ತವವಾಗಿ ಎಲ್ಲಿಯೂ ಹೋಗುವುದಿಲ್ಲ… “ಖಾಲಿ ಪಾತ್ರೆಗಳಂತೆ ದಿನಗಳು ಉರುಳುತ್ತವೆ, ರಾತ್ರಿಗಳು ತಳವಿಲ್ಲದ ಬಾವಿಗಳು. ಕಣ್ಣುಗಳು ಕಣ್ಣೀರಿನ ಬದಲು ಹೊಗೆಯನ್ನು ಸೂಸುತಿವೆ. ಜೀವಿಸಲು ಕಾರಣಗಳಿಲ್ಲ, ಹೀಗಾಗಿ ಸಾಯಲು ಕಾರಣಗಳನ್ನು ಹುಡುಕುತ್ತಿರುವೆ. ಜೀವನಕ್ಕಿಂತ ಉದ್ದವಿರುವ ಈ ರಸ್ತೆಗಳು ಗುರಿ ಇಲ್ಲದೆ ಗುರಿಯನ್ನು ತಲುಪದೇ ಚಲಿಸುತ್ತಿವೆ..
ಗುಲ್ಜಾರ್‌ ಅವರ ಬರಹಗಳ ಕುರಿತು ಗೊರೂರು ಶಿವೇಶ್‌ ಬರಹ

Read More

ಎಂದೊ ಯಾರಿಗೊ ತೋರಿದ ಮಮತೆ..ವಾತ್ಸಲ್ಯ..: ಗೊರೂರು ಶಿವೇಶ್‌ ಬರಹ

ಎಲ್ಲವನ್ನು ತೊರೆದು ಬಂದ ವ್ಯಕ್ತಿಗೆ ಹುಟ್ಟಿದ ಊರನ್ನು, ಶಿಕ್ಷಕನೊಬ್ಬನಿಗೆ ಬಿಟ್ಟು ಬಂದ ಶಾಲೆಯನ್ನು ಮರು ಭೇಟಿಯಾಗುವ ಕ್ಷಣಗಳು ಬಹಳಷ್ಟು ಸಂದರ್ಭದಲ್ಲಿ ಖುಷಿ ನೀಡುವ ಸಂಗತಿಯಾಗಿರುವುದಿಲ್ಲ. ಮೇಯಳಗನ್ ಚಿತ್ರದ ನಾಯಕನಿಗೂ ಅದೇ ಹೆದರಿಕೆ. ಬದಲಾದ ಸಂದರ್ಭ ಬದಲಾದ ಪರಿಸ್ಥಿತಿ ಅಲ್ಲಿನ ಜನ ಗುರುತಿಸುತ್ತಾರೋ ಇಲ್ಲವೋ? ಎಂಬುದು ನನ್ನನ್ನು ಕಾಡಿದ್ದಿದೆ. ಅಲ್ಲಿನ ಘಟನೆಗಳು, ಊರಿನ, ಗೆಳೆಯರ ಸ್ಥಿತಿ ಮನಸ್ಸಿಗೆ ಅಹಿತವನ್ನು ಇಲ್ಲವೇ ವಿಷಾದದ ಪರಿಸ್ಥಿತಿಗೆ ದೂಡಿದರೆ ಹೀಗೆ ಏನೇನೋ ಯೋಚನೆ ಬರುವುದುಂಟು.
‌ತಮಿಳಿನ “ಮೇಯಳಗನ್” ಚಲನಚಿತ್ರದ ಕುರಿತು ಗೊರೂರು ಶಿವೇಶ್‌ ಬರಹ

Read More

‘ನಾವು ಪಟಾಕಿ ಅಂಗಡಿ ಇಟ್ಟಿದ್ದು’: ಗೊರೂರು ಶಿವೇಶ್‌ ಬರಹ

ಸಂಜೆಯಾಗುವಷ್ಟರಲ್ಲಿ ಆಟಂಬಾಂಬ್, ಆನೆ ಪಟಾಕಿ, ಲಕ್ಷ್ಮಿಪಟಾಕಿಯಂಥ ಭಯಂಕರ ಸದ್ದುಮಾಡುವ ಪಟಾಕಿಗಳನ್ನುಳಿದು ಉಳಿದ ಪಟಾಕಿಗಳೆಲ್ಲವೂ ಖಾಲಿಯಾಗಿದ್ದವು. ಸಂಜೆ, ರಾತ್ರಿಗೆ ತಿರುಗುತ್ತಿದ್ದಂತೆ ತಮ್ಮಲ್ಲಿದ್ದ ಪಟಾಕಿ ಹೊಡೆದು ತೃಪ್ತರಾಗದ ಜನ ಹೆಚ್ಚಿನ ಪಟಾಕಿಕೊಳ್ಳಲು ಬಂದು ಇಲ್ಲದೆ ನಿರಾಶರಾಗಿ ಮರಳಿದರು. ಬೆಳಿಗ್ಗೆ ತಾನೇ ‘ಲಾಸಾದ್ರೆ ಏನು ಗತಿ?’ ಎಂದು ಚಿಂತಿರಾಗಿದ್ದ ಅಣ್ಣ ಈಗ ‘ಇನ್ನಷ್ಟು ಪಟಾಕಿ ಇದ್ದಿದ್ರೆ ಒಳ್ಳೆ ವ್ಯಾಪಾರ ಆಗ್ತಿತ್ತು’ ಅನ್ನತೊಡಗಿದರು. ಆಶ್ಚರ್ಯಚಕಿತರಾಗಿ ಅವರ ಮುಖ ನೋಡುತ್ತಿದ್ದಂತೆ ‘ವ್ಯಾಪಾರ ಅಂದ್ರೆ ಹೀಗೆ, ಪ್ರತಿ ದಿನ ಲಾಭ ಸಿಗೋಲ್ಲ, ಯಾವೊತ್ತೊ ಒಂದು ದಿನ ಹೀಗೆ ಕಚ್ಗೊಳ್ಳುತ್ತೆ’ ಎಂದು ವ್ಯಾಪಾರದ ಮರ್ಮ ತೆರೆದಿಟ್ಟರು.
ಗೊರೂರು ಶಿವೇಶ್‌ ಬರಹ ನಿಮ್ಮ ಓದಿಗೆ

Read More

ಎದೆ ನಡುಗಿಸಿ ಮೈ ನವಿರೇಳಿಸುವ ಆ ಚಿತ್ರ….: ಗೊರೂರು ಶಿವೇಶ್‌ ಬರಹ

ಮಾರ್ಕ್ವೆಜ್‌ನ ಅದ್ಭುತರಮ್ಯ ಕಾದಂಬರಿ ಒಂದು ನೂರು ವರ್ಷಗಳ ಏಕಾಂತ ಕೃತಿಯನ್ನು ಓದಿದವರಿಗೆ ಆ ರೀತಿಯ ಅದ್ಭುತರಮ್ಯ ಪರಿಚಯವನ್ನು ಈ ಸಿನಿಮಾ ಮೂಡಿಸುತ್ತದೆ. ಸದಾ ಮಳೆ ಹಿಡಿದ ಊರು, ಪಾತಾಳಲೋಕದ ಅನುಭವ ನೀಡುವ ಬಾವಿಯಲ್ಲಿನ ಚಿತ್ರಣ ಚಿತ್ರಕ್ಕೆ ಒಂದು ನಿಗೂಢತೆಯನ್ನು ಒದಗಿಸಿ ಭಯ ಮತ್ತು ಕುತೂಹಲದಿಂದ ನಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ.
ಹಿಂದಿಯ “ತುಂಬಾಡ್”‌ ಸಿನಿಮಾದ ಕುರಿತು ಗೊರೂರು ಶಿವೇಶ್‌ ಬರಹ ನಿಮ್ಮ ಓದಿಗೆ

Read More

ಚಕ್ರವ್ಯೂಹದೊಳಗಿನ ಮಾಯಾಲೋಕ…: ಗೊರೂರು ಶಿವೇಶ್‌ ಬರಹ

ಕಾದಂಬರಿಯ ಕೊನೆಯಲ್ಲಿ ಆ ಕಡತ ಮುಸುಕುಧಾರಿಗಳ ಕೈಗೆಸಿಕ್ಕು ಅದರ ಮಹತ್ವ ತಿಳಿಯದ ಅವರು ನದಿನೀರಿಗೆ ಎಸೆದು ಅದು ಬಿಡಿಬಿಡಿಯಾಗಿ ಬಿದ್ದು ನೀರುಪಾಲಾಗುತ್ತದೆ. ಇದ್ದ ಒಂದು ಪ್ರತಿಯೂ ಮಾಯವಾದರೂ ಎಲ್ಲಿಯಾದರೂ ಮತ್ತೊಂದು ಪ್ರತಿಯನ್ನು ಹುಡುಕಿಯೆ ತೀರುತ್ತೇನೆ ಮತ್ತು ಅದರ ಸಹಾಯದಿಂದ ರತ್ನಮಾಲಾ ವಜ್ರವನ್ನು ಪಡೆದೆ ತೀರಬೇಕೆಂದು, ಮುಂದೆ ಅದನ್ನು ಹಂಚಿಕೊಳ್ಳಬಹುದೆಂದು ರಾಜಪ್ಪ ತಿಳಿಸಿ, ಅದಕ್ಕೆ ಮೂವರು ಒಪ್ಪಿ ಜುಗಾರಿಕ್ರಾಸ್‍ನ ಬಸ್ ಹತ್ತುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.
ನೆನ್ನೆ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನ, ಅದರ ನಿಮಿತ್ತ ತೇಜಸ್ವಿಯವರ “ಜುಗಾರಿ ಕ್ರಾಸ್” ಕೃತಿಯ ಕುರಿತು ಗೊರೂರು ಶಿವೇಶ್‌ ಬರಹ

Read More
  • 1
  • 2

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ