Advertisement

ಡಾ. ವಿನತೆ ಶರ್ಮ

ಅಣಬೆ ಬೆಳೆಗೆ ಕೈ ಹಾಕಿದ ನಮ್ಮೂರ ಹುಡುಗರ ಕಥೆ

ಆತ್ಮಾರಾಮನ ಸಹಾಯದಿಂದ ರಾಮಣ್ಣನ ಮನೆಯ ಹಿಂಭಾಗದ ಕೋಣೆಯನ್ನು ಬಾಡಿಗೆ ಹಿಡಿದು ಅಲ್ಲಿ ಅಣಬೆ ಕೃಷಿಗೆ ಓನಾಮ ಹಾಡಲಾಯಿತು. ಅದು ಬಿಟ್ಟರೆ ಅನ್ಯಮಾರ್ಗವಿಲ್ಲದೆ ಪಕ್ಕದ ಬೀದಿಯ ಆಫೀಸರನ ಮನೆಗೆ ಹೋಗಬೇಕಾಗಿತ್ತು. ಆದರೆ ಅಲ್ಲಿ ಅವನ ಹೆಂಡತಿಯ ಕಾಟ ಎಂಬುದು ಇವರ ದರ್ದು! ಅಂತೂ ಒಂದು ಶುಭದಿನ ಒಣಹುಲ್ಲಿನ ರಾಶಿ ಬಂದು ಬಿದ್ದು ಅಣಬೆ ಬೆಳೆಗೆ ನಾಂದಿಯಾಯಿತು. ಕೋಣೆಯ ಒಳಗೆ ಒಂದಷ್ಟು ಕಬ್ಬಿಣದ ರ‌್ಯಾಕ್‌ಗಳು ಬಂದವು.
ಮಧುರಾಣಿ ಬರೆಯುವ “ಮಠದ ಕೇರಿ” ಕಥಾನಕ

Read More

ಭಜನೆಯ ಮಂಗಗಳು ಹಾಗೂ ಸಂಗೀತದ ಮಾಮಿಯ ಮಕ್ಕಳು

“ಶನಿವಾರಗಳಲ್ಲಿ ಶ್ರದ್ಧೆಯಿಂದ ಭಜನೆ ಮಾಡುತ್ತಿದ್ದ ಯಾವ ಗಂಡುಮಗನೂ ಶ್ರೀಮಾತಾ ಭಜನಾ ಮಂಡಳಿಯ ಹೆಣ್ಣುಮಕ್ಕಳಿಗೆ ಎಂದೂ ಅವರ ಭಜನೆಯಲ್ಲಿ ಸಹಾಯ ಮಾಡಿದ್ದಿಲ್ಲ. ಹೆಂಗಳೆಯರೆಲ್ಲಾ ಭಜನೆಗೆ ಸೇರಿದರೆ ಗಂಡಸರು ಮನೆಯಲ್ಲಿ ಬೇಕಾದ ಚಾನೆಲ್ ತಿರುಗಿಸುತ್ತಾ ಟಿವಿ ನೋಡುವುದು ಮಠದ ಪ್ರಾಂಗಣದಲ್ಲಿ ಹರಟೆ ಕೊಚ್ಚುವುದೂ, ಸಾಬರ ಬೀದಿಯಲ್ಲಿ ಕೂತು ಸ್ನೇಹಿತರೊಟ್ಟಿಗೆ ಬೀಡಿ ಸೇದುವುದು ಮಾಡುತ್ತಿದ್ದರು.”
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಮರಾಠಿ ಚೆಲುವೆಯ ಮೆಕ್ಯಾನಿಕ್ ಪ್ರೇಮಾಯಣ ಹಾಗೂ ಕನ್ನಡ ಸಾಹಿತ್ಯ

“ಹೀಗೆ ಏನಾಯಿತು ಯಾಕಾಯಿತು ಎಂದೇನೂ ತಿಳಿಯದ ಆ ಹುಡುಗಿ ಮೊದಮೊದಲು ಇದನ್ನೆಲ್ಲಾ ಅಲಕ್ಷ್ಯ ಮಾಡಿದರೂ ನಂತರದಲ್ಲಿ ಇವರ ಕಾಟ ಹೆಚ್ಚಾಗಿ ಹೋಯಿತು. ಬೈಗುಳಕ್ಕೂ ಬಗ್ಗದ ನೀಚ ಗುಂಪೊಂದು ಸದಾ ಆಕೆಯನ್ನು ಗೋಳಾಡಿಸತೊಡಗಿತು. ಮೊದಮೊದಲು ತಲೆ ಮೇಲಿದ್ದ ಸೆರಗನ್ನು ಮುಖವೆಲ್ಲಾ ಹೊದ್ದು ಓಡಾಡುತ್ತಿದ್ದ ಈ ಚೆಲುವೆ, ಆಮೇಲಾಮೇಲೆ ಅಲ್ತಾಫನ ಅಂಗಡಿಯ ಕಡೆ ಬರುವುದನ್ನೇ ಕಡಿಮೆ ಮಾಡಿದಳು.”

Read More

ಶ್ರೀಧರನ ಮದುವೆ ಸುಸಂಪನ್ನವಾದ ಪರಿ

“ಇಂತಿಪ್ಪ ಸಜ್ಜನ ಕುಟುಂಬವನ್ನು ಹೀಗೆ ಪರಿಪರಿಯಾಗಿ ಗೋಳಾಡಿಸಿದ ಈ ಶ್ರೀಧರನು ಇನ್ನೇನು ಅನಾಹುತ ಮಾಡಿದನೋ ಎಂದು ಎದೆಬಡಿತ ಸಹಿಸುತ್ತಾ ಕೇಳುತ್ತಿದ್ದವರಿಗೆ ಕಡೇ ಪಾಯಿಂಟನ್ನು ಕಿರಿಸೊಸೆಯಾದ ರುಕ್ಮಿಣಿಯವರೇ ವಿವರಿಸಿದರು. “ನೋಡಿ, ಒಂದೇ ಒಂದು ದಿನಕ್ಕೂ ಇವರು ಕೈಕಾಲು ತೊಳೆದು ತಟ್ಟೆಯ ಮುಂದೆ ಕೂತದ್ದು ನಾನು ನೋಡ್ಲಿಲ್ಲ‌. ದರಿದ್ರವಾಗಿ ಎಲ್ಲಿದ್ದರೆ ಅಲ್ಲಿಂದಲೇಎದ್ದು ತಟ್ಟೆಗೆ ಕೈಯಿಡೋದು.
ಮಧುರಾಣಿ ಎಚ್. ಎಸ್. ಬರೆಯುವ ಮಠದ ಕೇರಿ..”

Read More

ಜನಾರ್ಧನನ ತಲೆಗೆ ಮೆಟ್ಟು ಕಟ್ಟಿದ ಹುಲುಮಾನವ

“ಜನಾರ್ಧನ ರಾಯರ ಮೇಲಿನ ಈ ಹಳೆ ದ್ವೇಷವು ನನ್ನನ್ನು ಶ್ರೀಧರ ಮಾವನ ಜೊತೆ ನಿಲ್ಲುವಂತೆ ಮಾಡಿತ್ತು. ಯಾವಾಗ ಶ್ರೀಧರ ಮಾವನು ಕ್ಲಿನಿಕ್ಕಿಗೆ ಹೋಗುವನೋ ಡಾಕ್ಟರನ್ನು ಹಿಡಿದು ಹೊಡೆಯುವನೋ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದೆ. ಇಂಜೆಕ್ಷನ್ನಿನ ವೈಷಮ್ಯ ಒಂದನ್ನು ಬಿಟ್ಟರೆ ನಮಗೆ ಜನಾರ್ಧನ ರಾಯರ ಮೇಲೆ ಮತ್ತಿನ್ಯಾವ ಕೋಪವೂ ಇರಲಿಲ್ಲ. ಬಾಕಿಯಂತೆ ಅವರನ್ನು ಜನಾರ್ಧನ ಮಾವನೆಂದು ಪ್ರೀತಿಯಿಂದಲೇ ಮಾತನಾಡಿಸುತ್ತಿದ್ದೆವು.”

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ