Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಇರುವುದನ್ನು ಕೈ ಬಿಟ್ಟು….: ಮಾಲತಿ ಶಶಿಧರ್ ಅಂಕಣ

ಎರಡು ಧ್ರುವಗಳಂತಿದ್ದ ನಮ್ಮ ಮಧ್ಯೆ ಇದ್ದ ಅದೃಶ್ಯ ಸೆಳೆತವೆಂದರೆ ನಮ್ಮಿಬ್ಬರ ಆದರ್ಶಗಳು ಮತ್ತು ಜೀವನ ಬಗ್ಗೆ ಇದ್ದ ನಿಲುವು ಮತ್ತು ಅವನಲ್ಲಿರುವ ಹಾಗು ನನ್ನಲ್ಲಿಲ್ಲದ ಪ್ರಬುದ್ಧತೆ. ಅದಷ್ಟನ್ನೇ ಇಟ್ಟುಕೊಂಡು ಎಷ್ಟು ತಾನೇ ಸಹಿಸಿಕೊಂಡಾನು. ಒಂದು ದಿನ ಅನತಿ ದೂರದಲ್ಲಿ ನಮ್ಮಿಬ್ಬರ ನಡುವೆ ದೊಡ್ಡ ಗೋಡೆಯೊಂದ ಏಳಿಸಿಯೇ ಬಿಟ್ಟ. ಗೋಡೆಯಾಚೆಯಿಂದ ಅವನು ಈಚೆಯಿಂದ ನಾನು. ಬರೀ ಔಪಚಾರಿಕವಾಗಿ ಮಾತುಕತೆ ನಡೆಸುತ್ತಿದ್ದೆವೆ ಹೊರೆತು ಮನಸ್ಸಿನಾಳದಿಂದೇನಲ್ಲ. ಅದು ನನ್ನಿಂದ ಕೆಡವಲಾಗದಂತ ಗೋಡೆ ಏನಲ್ಲ…
ಮಾಲತಿ ಶಶಿಧರ್ ಬರೆಯುವ “ಹೊಳೆವ ನದಿ” ಅಂಕಣ

Read More

ನೆನಪಾಗಿ ಕಾಡುವ ಆ ಪಟಗಳು: ಮಾರುತಿ ಗೋಪಿಕುಂಟೆ ಸರಣಿ

ಇಷ್ಟಕ್ಕೆಲ್ಲ ಕಾರಣವಾದ ಕಪ್ಪು ಬಿಳುಪಿನ ಪಾಸ್ಪೋರ್ಟ್ ಸೈಜ್ ಫೋಟೊ ಸರ್ಕಾರವು ಉಚಿತವಾಗಿ ಕೊಟ್ಟ ಅಂಗಿಯಲ್ಲಿ ಕಪ್ಪು ಮಿಶ್ರಿತ ನೀಲಿಯ ನನ್ನ ಪಟ ಚಂದವಾಗಿ ಕಾಣುತ್ತಿತ್ತು. ಅದನ್ನೆ ನವೋದಯ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಅಂಟಿಸಲಾಯಿತು. ಸ್ವಲ್ಪ ತಯಾರಿಯೊಂದಿಗೆ ಪರೀಕ್ಷೆಯನ್ನು ಬರೆದರೂ ಮತ್ತೆ ಅದರ ಬಗ್ಗೆ ಯಾವ ವಿಚಾರವೂ ತಿಳಿಯಲಿಲ್ಲ. ನಂತರದ ವರ್ಷಗಳಲ್ಲಿ ಅನೇಕರು ಪರೀಕ್ಷೆ ಬರೆದರು. ಆದರೆ ಯಾರೂ ಆಯ್ಕೆಯಾಗಲಿಲ್ಲ. ಅದ್ಹೇಗೆ ಅಂತ ಇವತ್ತಿಗೂ ತಿಳಿದಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹತ್ತನೆಯ ಕಂತು ನಿಮ್ಮ ಓದಿಗೆ

Read More

ಜಾರುವ ಜಡೆಯ ಹುಡುಗಿಯ ಪಾತ್ರ!: ಮಾರುತಿ ಗೋಪಿಕುಂಟೆ ಸರಣಿ

ಈ ಸಲ ತಲೆಗೆ ಜೋಡಿಸಿಕಟ್ಟಿದ್ದ ಜಡೆಕುಚ್ಚು ಬಿಚ್ಚಿಕೊಳ್ಳುವ ಸಂಭವವೆ ಜಾಸ್ತಿ ಇತ್ತು. ಹೇಗೊ ನೃತ್ಯವಂತೂ ಮುಗಿದಿತ್ತು. ಆದರೆ ನಂತರದ್ದು ಇನ್ನೊಂದು ಸಂಕಟ ದೃಶ್ಯ ಮುಂದುವರಿದಿತ್ತು. ಜಡೆ ಬೀಳಬಾರದು ಬಿದ್ದರೆ ಅಸಹ್ಯವಾಗಿ ಕಾಣುತ್ತದೆ ಎಂಬ ಭಯದಿಂದಲೆ ನಿಂತ ಸ್ಥಳದಲ್ಲಿಯೇ ನಿಂತು ಸಂಭಾಷಣೆ ಹೇಳುವುದಕ್ಕೆ ಪ್ರಾರಂಭಿಸಿದೆ. ನನ್ನ ಎದುರಿನ ಪಾತ್ರಧಾರಿ ಈ ಕಡೆಯಿಂದ ಆ ಕಡೆಯಿಂದ ಓಡಾಡುತ್ತ ಸಂಭಾಷಿಸುತ್ತಿದ್ದಾನೆ. ಆತ ನೀನು ಓಡಾಡುತ್ತ ಸಂಭಾಷಿಸು ಎಂಬ ಕಣ್ಸನ್ನೆ ನೀಡುತ್ತಿದ್ದಾನೆ. ಆದರೆ ನನ್ನ ಕಷ್ಟ ಅವನಿಗೆ ಅರ್ಥವಾಗುತ್ತಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

“ಆ ಸಾವು ಮತ್ತು ಹಸಿವು”: ಮಾರುತಿ ಗೋಪಿಕುಂಟೆ ಸರಣಿ

ಅಂದು ಮಧ್ಯಾಹ್ನದ ಉಪ್ಪಿಟ್ಟು ತರುವವನು ಮಧ್ಯಾಹ್ನ ಒಂದುಗಂಟೆಯಾದರೂ ಬಂದಿರಲಿಲ್ಲ. ಈಗಿನಂತೆ ಅವಾಗ ಯಾವ ಫೋನು ಸಹ ಇರಲಿಲ್ಲ. ಹಾಗಾಗಿ ಅವನು ಯಾಕೆ ಬರಲಿಲ್ಲ ಎಂದು ತಿಳಿದುಕೊಳ್ಳುವುದು ಹೇಗೆ ಎಂದು, ಹಿರಿಯ ವಿದ್ಯಾರ್ಥಿಯೊಬ್ಬನನ್ನು ಸೈಕಲ್ಲಿನಲ್ಲಿ ಆತ ಬರುವ ಹಾದಿಗೆ ಹೋಗಿ ನೋಡಿಕೊಂಡು ಬರುವಂತೆ ಕಳುಹಿಸಲಾಯ್ತು. ಆದರೆ ರಸ್ತೆಯಲ್ಲಿ ಆತನ ಸುಳಿವಿರಲಿಲ್ಲ. ಆದರಲ್ಲಿ ಮಕ್ಕಳು ಮಧ್ಯಾಹ್ನದ ಫಲಹಾರಕ್ಕಾಗಿ ಕಾದಿದ್ದರು. ಕೆಲವರ ಮುಖಗಳು ಬಾಡಿಹೋಗಿದ್ದವು. ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ

Read More

ಮಾವಿನ ತೋಪಿನ ಎರಡು ಕತೆಗಳು: ಮಾರುತಿ ಗೋಪಿಕುಂಟೆ ಸರಣಿ

ಅವನು ಓಡುವುದರಲ್ಲಿ ಯಾವಾಗಲೂ ಪ್ರಥಮ.. ಹಾಗಾಗಿ ಅವನೇನೊ ತಪ್ಪಿಸಿಕೊಂಡ. ಮರವನ್ನು ಹತ್ತುವುದರಲ್ಲಿ ಅಂತಹ ಅನುಭವವೇನು ಇಲ್ಲದ ನಾನು ನಿಧಾನವಾಗಿ ಮರ ಇಳಿಯುವುದರಲ್ಲಿ ಸಿಕ್ತಿಮ್ಮಜ್ಜ ಹತ್ತಿರವಾಗಿದ್ದ. ಅವನು ಹತ್ತಿರ ಬರುವುದು ಕಂಡದ್ದೇ ಎದೆಬಡಿತ ಜೋರಾಗಿತ್ತು. ಕೈ ಕಾಲುಗಳು ನಡುಗಲು ಪ್ರಾರಂಭಿಸಿದ್ದವು. ನನಗೆ ಬೇರೆ ದಾರಿ ಇರಲಿಲ್ಲ. ನಾನು ಮರದಿಂದ ಇಳಿಯಲಿಲ್ಲ, ಬದಲು ಅದರ ಮಧ್ಯದಲ್ಲಿ ಅವಿತುಕೊಂಡೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ