Advertisement
ಎಸ್. ಸಿರಾಜ್ ಅಹಮದ್

ಕನ್ನಡ ವಿಮರ್ಶಕ, ಲೇಖಕ, ಅನುವಾದಕ. ಮೂಲತಃ ಚಿತ್ರದುರ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು

ಪ್ರತಿಭಟನೆಯ ದೃಷ್ಟಿಕೋನ ಮೀರಿ ಯೋಚಿಸುವ ಕೊಡಗಿನ ಗೌರಮ್ಮ

ಮೊದಲ ತಲೆಮಾರಿನ ಲೇಖಕಿಯರು ವಿಧವಾವಿವಾಹ, ಶೋಷಣೆ, ಸ್ತ್ರೀ ಸ್ವಾತಂತ್ರ್ಯ ಮೊದಲಾದ ವಿಷಯಗಳನ್ನು ಕುರಿತು ಬಹಳ ದಿಟ್ಟವಾಗಿ ಬರೆದಿದ್ದರೂ ಸ್ತ್ರೀ ವ್ಯಕ್ತಿತ್ವವನ್ನು ಕೇವಲ ಶೋಷಣೆ ಹಾಗೂ ಅದರ ವಿರುದ್ಧ ಪ್ರತಿಭಟಿಸುವ ಹೆಣ್ಣಿನ ಮಾದರಿಯನ್ನು ಹೊರತುಪಡಿಸಿ ನೋಡಲು ಸಾಧ್ಯವಾದರೆ ಅವಳನ್ನು ಹೊಸದಾದ ದೃಷ್ಟಿಕೋನದಲ್ಲಿ ಅರಿಯಲು ಸಾಧ್ಯವಾಗುತ್ತದೆ ಎಂಬುದು  ಕೊಡಗಿನ ಗೌರಮ್ಮ ಅವರ ನಿಲುವಾಗಿತ್ತು. ಈ ಕಾರಣಕ್ಕಾಗಿ ಹೆಣ್ಣೊಬ್ಬಳು ಬದುಕಿದ, ಭಾವಿಸಿದ ಅನುಭವಗಳನ್ನು ಕುರಿತು ಬರೆದು…

Read More

ಮಾಸ್ತಿಯವರ ಐತಿಹಾಸಿಕ ಕಾದಂಬರಿಗಳ ಕಥಾವಿಸ್ತಾರ

ಮಾಸ್ತಿಯವರು ಐತಿಹಾಸಿಕ ಕಾದಂಬರಿಗಳನ್ನು ಬರೆಯುವ ಕಾಲಕ್ಕೆ ಆದರ್ಶಪ್ರಾಯ ಚಾರಿತ್ರಿಕ ಕಥಾನಾಯಕರನ್ನು ಚಿತ್ರಿಸುವ ಮಾದರಿ ಒಂದು ಕಡೆ ಇತ್ತು. ಇನ್ನೊಂದು ಕಡೆ ಬಂಗಾಳದ ‘ಆನಂದಮಠ’ದಂಥ ಕಾದಂಬರಿ, ಶಿವಾಜಿ, ರಾಜಸಿಂಹರಂಥ ದೇಶಭಕ್ತರ ಜೀವನವನ್ನು ವೈಭವೀಕರಿಸಿ ಬರೆಯುವ ಮಾದರಿ ಇತ್ತು. ಇವರಿಗೆ ಹೋಲಿಸಿದರೆ ಮಾಸ್ತಿಯವರ ಎರಡೂ ಕಾದಂಬರಿಗಳ ಕಥಾನಾಯಕರು ಇಂಥ ಅದರ್ಶಪೂರ್ಣ ಮಾದರಿಗಳಿಗೆ ಹೊರತಾಗಿದ್ದಾರೆ.

Read More

ಕನ್ನಡ ವಿಮರ್ಶೆಯ ವಿವೇಕ: ಕೆಲವು ಮಾತುಗಳು

ಕನ್ನಡದ ಈ ಕಾಲದ ವಿಮರ್ಶೆ ಮೇಲ್ನೋಟಕ್ಕೆ ತನ್ನನ್ನು ‘ನವ್ಯೋತ್ತರ’ವೆನ್ನಬೇಕೋ ‘ಆಧುನಿಕೋತ್ತರ’ವೆನ್ನಬೇಕೋ, ‘ದಲಿತ ಬಂಡಾಯೋತ್ತರ’ ಎನ್ನಬೇಕೋ ಎಂಬ ಸ್ವನಿರೂಪಣೆಯ ಗೊಂದಲದಲ್ಲಿಯೇ ಸಿಲುಕಿದಂತೆ ಕಂಡರೂ, ಅದು ಕನ್ನಡ ವಿಮರ್ಶೆಯ ಕಾರ್ಯಸೂಚಿ ಎಷ್ಟು ಅನಿರ್ದಿಷ್ಟವಾಗಿದೆ ಎಂಬುದರ ಸೂಚಕವೂ ಆಗಿ ಕಾಣಿಸುತ್ತದೆ. ಈಚಿನ ದಶಕಗಳಲ್ಲಿ ಸಂಸ್ಕೃತಿ ಅಧ್ಯಯನ ಹಾಗೂ ಸ್ತ್ರೀವಾದಿ ವಿಮರ್ಶೆಯ ಮಾದರಿಗಳು ಪ್ರಭಾವಶಾಲಿಯಾಗಿ ಬೆಳೆದಿರುವುದು ನಿಜವಾಗಿದೆ. ಡಾ. ಎಸ್. ಸಿರಾಜ್ ಅಹ್ಮದ್  ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿದ್ದಾರೆ. 

Read More

ಕಂಬಾರರ ಕಾವ್ಯ: ಪರಂಪರೆಯ ಸಮೃದ್ಧಿ ಮತ್ತು ಆಧುನಿಕತೆಯ ಬರಡುತನ

ಕಾಲದೇಶಗಳನ್ನು ಅಖಂಡವಾಗಿ ಗ್ರಹಿಸುವ ಮನೋಧರ್ಮದಿಂದಲೇ ಕಂಬಾರರ ಬರಹದಲ್ಲಿ ಸಾಮುದಾಯಿಕ ಅನುಭವಗಳು ಸಮೃದ್ಧವಾಗಿವೆ ಮೇಲ್ನೋಟಕ್ಕೆ ನವ್ಯ ಕಾವ್ಯದಿಂದ ಬಹಳ ಭಿನ್ನವಾಗಿ ಕಾಣುವ ಕಂಬಾರರ ಕಾವ್ಯ ಆಳದಲ್ಲಿ ನವ್ಯಕಾವ್ಯದ ಪ್ರಮುಖ ಕಾಳಜಿಗಳನ್ನು ಇತ್ತೀಚಿನವರೆಗೆಯೂ ಪೂರ್ಣವಾಗಿ ಬಿಟ್ಟುಕೊಟ್ಟಂತೆ ಕಾಣುವುದಿಲ್ಲ. ಆದರೆ ನವ್ಯಕಾವ್ಯವು ಹುಡುಕಾಟದಲ್ಲಿದ್ದ ಅಸ್ತಿತ್ವದ ಪ್ರಶ್ನೆಗಳು, ವ್ಯಕ್ತಿತ್ವದ ಒಳಗಿನ ಬಿರುಕುಗಳನ್ನು ಸಮುದಾಯಗಳ, ಜನಪದ ನಂಬಿಕೆಗಳ ವಿಶಾಲಭಿತ್ತಿಯಲ್ಲಿ ಪರೀಕ್ಷಿಸಲು ತೊಡಗಿದ್ದರಿಂದ ಕಂಬಾರರ ಕಾವ್ಯಕ್ಕೆ ದೊಡ್ಡ ಹರಹು ಒದಗಿಬಂದಿದೆ. ಎಸ್. ಸಿರಾಜ್ ಅಹಮದ್ ಅಂಕಣ..

Read More

ಸಂಸ್ಕೃತಿಗಳ ಮರುಜೇವಣಿಯಲ್ಲಿ ತೊಡಗಿರುವ ಶಿವಪ್ರಕಾಶರ ಕಾವ್ಯ

ಈ ಬಹುಮುಖಿ ಸಂವಾದದ ಮೂಲಕ ಶಿವಪ್ರಕಾಶರ ಕಾವ್ಯ ಕನ್ನಡ ಸಂಸ್ಕೃತಿಯ ಅಷ್ಟೇ ಏಕೆ ಭಾರತೀಯ ಸಂಸ್ಕೃತಿಯ ಮುಖ್ಯಗುಣವಾದ ಬಹುರೂಪಿತನವನ್ನು ಆವಾಹಿಸಿಕೊಂಡಿದೆ. ಕನ್ನಡ ಸಂವೇದನೆಯ ಅಸಲೀ ಗುಣವೆಂದರೆ ಅದು ಆದಿಮ ಕಾಲದಿಂದಲೂ ಅಂದರೆ ಶಂಗಂ ಸಾಹಿತ್ಯ, ಕವಿರಾಜ ಮಾರ್ಗದ ಕಾಲದಿಂದಲೂ ಹಲವು ಭಾಷೆ-ಸಂಸ್ಕೃತಿ-ಮೌಲ್ಯಗಳನ್ನು ಪ್ರತಿನಿಧಿಸುವ ಮಾರ್ಗ. ದೇಸಿ ಲೌಕಿಕ ಸಾಮಾಜಿಕ ಅನುಭಾವಿಕ ಧಾರ್ಮಿಕ ತತ್ವಶಾಸ್ತ್ರೀಯ ಅನುಭವಗಳೆಲ್ಲವನ್ನೂ ಏಕೀಭವಿಸಿಕೊಳ್ಳುವ ಗುಣವನ್ನು ಹೊಂದಿದೆ.
ಎಚ್‌.ಎಸ್. ಶಿವಪ್ರಕಾಶ್‌ ಅವರ ಕಾವ್ಯದ ಕುರಿತು ಎಸ್‌. ಸಿರಾಜ್‌ ಅಹಮದ್‌ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ