Advertisement
ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

ಸ್ರೀರಾಮ್ನೋಮಿ: ಸುಮಾ ಸತೀಶ್ ಸರಣಿ

ರಾಮುನ್ನ ಒಲಿಸ್ಕಣಾದು ಕಷ್ಟ. ಹನುಮಂತನ್ನ ಒಲಿಸ್ಕಣಾದು ಸುಲ್ಬ. ರಾಮಾ ಅಂದ್ರೆ ಸಾಕು ಹನುಮ ಓಡೋಡ್ಕಂಡು ಬರ್ತಾನೆ. ಆಗ ಬ್ಯಾರೆ ಆಟ ಕಟ್ದೆ ರಾಮ್ನೂ ಹಿಂದಿಂದ್ಲೇ ಬತ್ತಾನೆ‌ ಅಂಬೋದು ಅಜ್ಜಿ ಯೋಳ್ತಿದ್ದ ಇಚಾರ. ಅಂಗಾಗಿ ರಾಮನ ಹತ್ರುಕ್ಕೆ ಹೋಗಾಕೆ ಸಲೀಸು ಹನುಮಂತನ ಭಜನೆ ಮಾಡೋದು. ಹನುಮ ಕಪಿ ಅಲ್ವೇ. ಕಿಚಪಿಚಾಂತ ನಾವೂ ಕಪಿಗಳಂಗೇ ಭಜನೆ ಹಾಡ್ತಿದ್ವಿ. ಮರದಾಗಿರೋವೂ ಜಾತಿಪ್ರೀತಿಗೆ ಓಡಿಬರೋ ಅಂಗೆ ಇರ್ತಿತ್ತು ನಮ್ಮ ಆಲಾಪ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಯುಗ ಯುಗಾದಿ ಕಳೆದರೂ ಮರೆಯಲಾಗದ ಸಂಭ್ರಮ: ಸುಮಾ ಸತೀಶ್ ಸರಣಿ

ಮನೆ ಹೆಂಗಸರಿಗೆ ಮಧ್ಯರಾತ್ರಿಯಿಂದಲೇ ಸುರುವಾಗ್ತಿತ್ತು. ಬೆಳಗಿನ ಜಾವ ಎರಡು ಗಂಟೆಯಿಂದಲೇ ಹೂರಣ ರುಬ್ಬುವ, ಒಬ್ಬಟ್ಟು ತಟ್ಟುವ, ಬೇಯಿಸುವ ಸದ್ದು. ಹೋಳಿಗೆ ವಾಸನೆಗೆ ಊರೆಲ್ಲಾ ಘಮಗುಡುತ್ತಿತ್ತು. ಒಬ್ಬಟ್ಟು ಸಾರು ಮರಳಿಸುತ್ತಿದ್ದರೆ ಮೂಗಿನ ಹೊಳ್ಳೆಗಳು ಅರಳಿ, ನಿಮಿರುತ್ತಿದ್ದವು. ದೊಡ್ಡ ದೊಡ್ಡ ಬೇಸನ್ನುಗಳಲ್ಲಿ ಒಬ್ಬಟ್ಟಿನ ರಾಶಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಯುಗಾದಿಯ ಸಂಭ್ರಮಗಳ ಕುರಿತ ಬರಹ ನಿಮ್ಮ ಓದಿಗೆ

Read More

ಮದುವೆಮನೇನೋ ಸಂತೆಕಟ್ಟೇನೋ: ಸುಮಾ ಸತೀಶ್ ಸರಣಿ

ಇಂತಾ ಜೋರಿನ ಅತ್ತೇ ಒಂದು ಪುಂಡ ಹಸಾನ ಪಳಗಿಸಿದ್ಲು. ಆ ಹಸು ಎಷ್ಟು ಜೋರು ಅಂದ್ರೇ ಯಾರಿಗೂ ಹಾಲು ಕರೆಯೋಕೇ ಬಿಡ್ತಿರಲಿಲ್ಲ. ನಮ್ಮತ್ತೇನೂ ಜೋರಲ್ವಾ. ಅದೂ ಜೋರು. ಇಬ್ರಲ್ಲೂ ಬಲು ಸ್ನೇಹ. ನಮ್ಮತ್ತೆ ಹಾಲು ಕರೆದರೆ ಕಮಕ್‌ ಕಿಮಕ್ ಅಂತಿರಲಿಲ್ಲ ತುಡುಗು ಮುಂಡೇದು. ಕೊನೇಗೆ ಮದುವೇ ದಿನ ಹಸೆಮಣೇ ಮೇಲಿದ್ದಾರೆ. ಈ ಹಸಾ ಹಾಲು ಕೊಡಲಿಲ್ಲ ಅಂತಾ ಹೇಳಿದ್ದಾರೆ. ನಮ್ಮತ್ತೆ ಹಸೇಮಣೇ ಮೇಲಿಂದ ಎದ್ದು ಹೋಗಿ ಹಾಲು ಕರೆದುಕೊಟ್ಟು ಬಂದಿದ್ದಾರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮದುವೆ ಮನೆಯ ಮತ್ತಷ್ಟು ವಿಷಯಗಳ ಕುರಿತ ಬರಹ ನಿಮ್ಮ ಓದಿಗೆ

Read More

ಮದುವೆ ಮನೆ: ಸುಮಾ ಸತೀಶ್ ಸರಣಿ

ನಮ್ಮ‌ ಮನೆಗ್ಳಲ್ಲಿ ಮದ್ವೇ ಗೊತ್ತಾಗಿದ್ ತಕ್ಷಣ ಮಾಡ್ತಿದ್ದ ಏರ್ಪಾಟು ಅಂದ್ರೆ ಹಂಚು ಇಟ್ಟುಕೊಳ್ಳುವುದು. ಒಂದು ತಿಂಗಳ ಮುಂಚೇನೆ ತಯ್ಯಾರಿ ಇರ್ತಿತ್ತು. ದೊಡ್ಡತ್ತೆ, ಸಾವಿತ್ರಮ್ಮತ್ತೆ ಬಂದು ಸೇರುತ್ತಿದ್ದರು. ಅಕ್ಕ ತಂಗೀರ ಮಕ್ಳು ಸಹಾಯುಕ್ಕೆ ಬರ್ತಿದ್ರು. ಸೇರುಗಟ್ಟಲೆ ಅಕ್ಕಿ‌ ತೊಳೆದು ಹಾಕಿ, ರಾಶಿ ರಾಶಿ ಚಕ್ಲಿ ಮಾಡುತ್ತಿದ್ದರು. ಅಕ್ಕಪಕ್ಕದ ‌ಮನೆ‌ ಹೆಣ್ಣುಮಕ್ಕಳೂ ಬಂದು ಸಹಾಯ ಮಾಡುತ್ತಿದ್ದರು. ನಿಪ್ಪಟ್ಟು, ಕೋಡುಬಳೆ, ಗುಂಡು ಅದೂ ಇದೂ ಮಾಡಿಡುತ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಮದುವೆ ಮನೆಯ ಸಡಗರಗಳ ಕುರಿತ ಬರಹ ನಿಮ್ಮ ಓದಿಗೆ

Read More

ಕತೆ ಕಟ್ಟುವ ಕಲೆಗಾರರು: ಸುಮಾ ಸತೀಶ್ ಸರಣಿ

ಆಗೆಲ್ಲಾ ಯರಗುಂಟೇಗೆ ಊರಿನ ತಂಕ ಬಸ್ಸಿರಲಿಲ್ಲ. ಒಂದೋ ಎರಡೊ ಕಿಲೋಮೀಟರ್ ನಡೆದು ಹೋಗಬೇಕಿತ್ತು. ಇನ್ನೂ ಕತೆ‌ ಮುಗಿದಿಲ್ಲ, ಯಾಸೆಟ್ಗೆ ಅತ್ಲಾಗೆ ನಡಿಯಮ್ಮಿ, ಮನೆತಂಕ ಬರ್ತೀನಿ ಅಂತ ಅದೇ ಅವತಾರದಲ್ಲಿ ಮಗಳ‌ಮನೆ ತಂಕಾನೂ ಹೋಗಿದೆ. ಬೀಗರು ಇವ್ರ ಅವತಾರ ನೋಡಿ, ನಕ್ಕಂಡು ಇವತ್ತಿದ್ದು ನಾಳೆ ಹೋಗಿ ಅಂದ್ರಂತೆ. ಈ ಅಜ್ಜಿ, ಹೂ ನನ್ ಕತೆ ಇನ್ನೂ ಮುಗಿದಿಲ್ಲ ಅಂತ ಕತೆ ಪೂರ್ತಿ ಹೇಳಿದ್ದಾದ ಮೇಲೆ ಬೇರೆ ಸೀರೆ ಉಟ್ಕಂಡು ವಾಪಸ್ ಬಂತಂತೆ. ಇದ್ನ ಹೇಳ್ಕಂಡು‌ ನಮ್ಮತ್ತೆದೀರೆಲ್ಲಾ ನಗಾಡ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ