Advertisement

ಸುವರ್ಣ ಚೆಳ್ಳೂರು

ಇಸ್ಕೂಲ್ ಅನ್ನೋ ವಿಸ್ಮಯಲೋಕ: ಸುಮಾ ಸತೀಶ್ ಸರಣಿ

ಶಾಲೆ ಹಿಂಭಾಗದಲ್ಲಿ ಆಟದ ಮೈದಾನವಿತ್ತು. ಸಂಜೆ ಶಾಲೆ ಬಿಟ್ಟ ಮೇಲೆ ಮನೇಲಿ ಚೀಲ ಇಟ್ಟು, ಒಂದಿಬ್ಬರು ಗೆಳತೀರ ಜೊತೆ ಮತ್ತೆ ಇಸ್ಕೂಲಿಗೆ ಬಂದು ಹಳದಿ ಪಟುಕದ ಮೊಗ್ಗು ಕೀಳೋದು. ನಮ್ ತೋಟ್ದಲ್ಲಿ ತರಹೇವಾರಿ ಹೂವಿನ ಗಿಡವಿದ್ರೂ ಇದ್ರ ಮೇಲೇ ಕಣ್ಣು. ಪೈಪೋಟಿ ಮೇಲೆ ಮೊಗ್ಗು ಕೊಯ್ಯೋದು. ಗಿಡದ ತುಂಬಾ ಮುಳ್ಳುಗಳು. ‌ಕೈ ಎಲ್ಲ ತರಚಿ ಹೋಗ್ತಿತ್ತು. ಅದರ ನೆದರೇ ಇರ್ತಿರಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಶಾಲಾದಿನಗಳ ಕುರಿತ ಬರಹ

Read More

ಕದಿರಪ್ಪನ ಪರಿಷೆ: ಸುಮಾ ಸತೀಶ್ ಸರಣಿ

ಸ್ಯಾನೆ ವಿಸೇಸವಾದ್ದು ಅಂದ್ರೆ ಆಟುದ್ ಸಾಮಾನಿನ ಬುಟ್ಟಿಗ್ಳು. ಕಾರು ಬೈಕು ಅಲ್ಲ ಬುಡಿ. ಆ ಬುಟ್ಟಿಗ್ಳಾಗೆ ಬುಡಿಗೆಗಳು ಇರ್ತಿದ್ವು. ಎಲ್ಡು-ಮೂರು ಬೆಟ್ಟಿನ ಗಾತ್ರದ ಮಣ್ಣಿನ‌‌ ಮಡಿಕೆ ಕುಡಿಕೆಗಳು, ಒಲೆ, ಬಟ್ಟಲು, ಮುಚ್ಚಳ, ಸೌಟು, ಹಂಚು ಇಂತಾ ಅಡ್ಗೆ ಮನೆ ಸಾಮಾನು. ಹುಡುಗೀರೆಲ್ಲಾ ಅಲ್ಲೇ ಸೇರ್ಕಂಡು ಒಬ್ಬಳು ಬಟ್ಟಲು ತಕಂಡ್ರೆ, ಇನ್ನೊಬ್ಬಳು ಒಲೆ ತಕಣಾದು. ಐದು ಪೈಸೆ, ಹತ್ತು ಪೈಸೆ, ಜಾಸ್ತಿ ಅಂದ್ರೆ ನಾಕಾಣೆ ಇರ್ತಿದ್ವು. ನಮ್ಗೋ ತಲಾಕೈವತ್ತು ಪೈಸೇ ಸಿಕ್ತಿದ್ರೆ ಹೆಚ್ಚು.‌
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಗಡಗಡ ನಡುಗಿಸಿದ ಪಾವಗಡದ ತೋಳ: ಸುಮಾ ಸತೀಶ್ ಸರಣಿ

ಒಂದೇ ಉಸಿರ್ನಾಗೆ ಅಂಗೇ ವಾಪಸ್ ತಿರುಗ್ದೆ. ಒಂದು ಕಿತ, ಅಲ್ಲಾ ಕಾಲು ನೋಡ್ಬೇಕಿತ್ತು.‌ ತಿರುಗ್ಸಿದ್ರೆ ಮಾತ್ರ ದೆವ್ವ ಅಲ್ವಾ ಅಂತ ಅನ್ನುಸ್ತು. ಇನ್ನೊಂದು ಕಿತ ಬ್ಯಾಡ್ವೇ ಬ್ಯಾಡ, ತೋಳ ‍ದೆವ್ವ ಅಲ್ಲ. ಒಂದ್ಕಿತ ಹಿಂದುಕ್ ತಿರ್ಗಿ ನೋಡ್ತಿವ್ನಿ, ಅನುಮಕ್ಕ ಕೈ ತೋರ್ಸಿ ನಿಲ್ಲು ಅಂತಾವ್ಳೆ. ಹಿಂದಿಂದೇನೆ ಬರ್ತಾವ್ಳೆ. ದ್ಯಾವ್ರೆ ಏನ್ ಮಾಡ್ಲಿ. ಈಗೇನಾರಾ ಈ ತೋಳುದ್ ಕೈಯಾಗೆ ಸಿಕ್ಕಿ ಸತ್ತು ನರಕುಕ್ಕೇನಾರೂ ಹೋದ್ರೆ, ದರದರನೆ ಎಳ್ಕೋ ಹೋಗಿ ಬಿಸಿ ಬಿಸಿ ಎಣ್ಣೆ‌ ಕುದಿಯೋ ಬಾಂಡ್ಲೀಗೆ ಹಾಕಿ ಬೋಂಡಾ ಬಜ್ಜಿ ತರ ತೇಲುಸ್ತಾರೆ ಅನ್ನೋದು ನೆಪ್ಪಾತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ

Read More

ಸುಮಾ ಸತೀಶ್‌ ಹೊಸ ಸರಣಿ “ರಂಗಿನ ರಾಟೆ” ಆರಂಭ…

ಹಳ್ಳಿಯೂರ ಬದುಕು ಹಗಲು-ರಾತ್ರಿಯ ಪರಿವಿಲ್ಲದೆ ಕತೆ ನೇಯುವ ಕಥಾಕಣಜ. ಸುಮಾ ಸತೀಶ್ ಇಂಥ ಕಣಜದ ಹತ್ತು ಹಲವು ಕತೆಗಳನ್ನು‌ “ರಂಗಿನ ರಾಟೆ” ಸರಣಿಯಲ್ಲಿ ಪ್ರತೀ ಬುಧವಾರ ಕೆಂಡಸಂಪಿಗೆಯ ಓದುಗರ ಮುಂದೆ ಇಡಲಿದ್ದಾರೆ. ಈ ಹೊಸ ಸರಣಿಯ ಮೊದಲ ಕಂತು ಇಲ್ಲಿದೆ

Read More

ಹುತ್ತಗಟ್ಟಿದ ನಾಗಪ್ಪನ ಕತೆ: ಸುಮಾ ಸತೀಶ್ ಬರಹ

ಮ್ಯಾಲೆ ಆಕಾಸ್ದಾಗೆ ಸಿವ ಪಾರೋತಿ ಸಂಚಾರ ಹೊಂಟಿದ್ರು. ಪಾರೋತಿಗೆ ಯಾರೋ ಅಳೋ ಸದ್ದು ಕೇಳ್ತೋ. ಗಂಡಂಗೆ ಯಾರೋ ಹೆಣ್ಣು ಮಗು ಅಳೋ ಸದ್ದು ಬರ್ತಾ ಐತೆ. ಹೋಗಿ ನೋಡೋಮಾಂತ ಬೋ ಹಠ ಮಾಡಿದ್ಲು. ಸಿವ ಇದ್ದೋನೇ, ಥೋ ಈ ಹೆಣ್ಣುಮಕ್ಕಳ ಕಾಟ ಇದ್ದಿದ್ದೇಯಾ, ನೆಮ್ದಿಯಾಗಿ ಸಂಚಾರ ಹೋಗೋಕೂ ಬಿಡಾಕಿಲ್ಲಾ ಅಂಬ್ತ ಯೋಳಿ, ಆ ತಂಗಿ ತಾವ್ಕೆ ಕರ್ಕೊಂಡು ಬಂದ.
ಸುಮಾ ಸತೀಶ್‌ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ