Advertisement

Category: ಸರಣಿ

ಗೋಳಗುಮ್ಮಟದ ಸುತ್ತಮುತ್ತ

ಸೇಂಗಾ, ಹುರಿಗಡಲೆ, ಮಸಾಲೆವಠಾಣಿ, ಪೆಪ್ಪರಮೆಂಟ್ ಮುಂತಾದವುಗಳನ್ನು ಮಾರುವ ಮಧ್ಯ ವಯಸ್ಕನೊಬ್ಬ ಆ ಚಿಕ್ಕ ಕಟ್ಟಡದಲ್ಲಿ ಆರಂಭದಲ್ಲೇ, ನೆಲದ ಮೇಲೆ ಹಾಸಿಕೊಂಡು ಕುಳಿತಿರುತ್ತಿದ್ದ. ಆ ಬಡ ವ್ಯಕ್ತಿಯ ಬದುಕು ಆನಂದಮಯವಾಗಿತ್ತು. ಸದಾ ಹಸನ್ಮುಖಿಯಾಗಿ ಇರುತ್ತಿದ್ದ. ಖಾಕಿ ಹಾಫ್ ಪ್ಯಾಂಟ್ ಮತ್ತು ಹಾಪ್ ಷರ್ಟ್ ಆತನ ‘ಯೂನಿಫಾರ್ಮ್’ ಆಗಿತ್ತು. ಆ ಪುಟ್ಟ ವ್ಯಾಪಾರದಲ್ಲಿ ಎಷ್ಟು ಗಳಿಸುತ್ತಿದ್ದನೋ ದೇವರೇ ಬಲ್ಲ. ಆದರೆ ಆತನ ಜೀವನ್ಮುಖಿ ಬದುಕು ಆದರ್ಶಪ್ರಾಯವಾಗಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿ

Read More

ಈ ಗದ್ದುಗೆ ಈ ಹಿಂಸೆ ಈ ಅನಾಥ ಸಂಬಂಧಗಳು

ಅವನು ಒಬ್ಬ ಅಪರಾಧಿ ಎಂಬಂತೆ ನನ್ನೆದ್ರು ಕೂತು ಒಪ್ಪಿಸುತ್ತಿದ್ದ. ವಿಚಾರಣಾಧಿಕಾರಿಯಂತೆ ನನ್ನ ಪ್ರಶ್ನೆಗಳಿದ್ದವು. ಒಂದೇ ತಾಯ ಬಳ್ಳಿಯವರು. ಅವನೇ ಬೇರೆ ನಾನೇ ಬೇರೆ ಎಂಬಂತಿತ್ತು. ಅಂದು ಅವನು ದೊಡ್ಡ ಸಾಹೇಬನಾಗಿ ಬರುತ್ತಾನೆ ಎಂದು ಅವನು ಅತಾರಿ ಇರಬೇಕೂ; ಇದೇ ನನ್ನ ತಮ್ಮನ ಬಗ್ಗೆ ತಾನೆ ಅಪ್ಪನ ಮುಂದೆ ರೀಲು ಬಿಡುತ್ತಿದ್ದುದು. ಒಂದು ಕನಸಿನ ಲೋಕವನ್ನೇ ಹೆಣೆದಿದ್ದರಲ್ಲ ಆ ರಾತ್ರಿ ಅಮಲಾಗಿ. ಈಗ ಈ ತಮ್ಮನ ಬಗ್ಗೆ ಯಾರೂ ಕನಸು ಕಟ್ಟುವುದಿಲ್ಲ. ಯಾರಿಗೂ ಬೇಡವಾದವನು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 26ನೇ ಕಂತು

Read More

ಬ್ರೋಕನ್ ವಿಂಗ್ಸ್: ಮಧ್ಯಮ ವರ್ಗದ ಪಡಿಪಾಟಲು

ವ್ಯಕ್ತಿಯೊಬ್ಬನಲ್ಲಿ ಒಡಮೂಡುವ ಭಾವನೆಗಳನ್ನು ಇನ್ನೊಂದು ಜೀವಿಗೆ ಸಂವಹಿಸುವ ಬಗೆಯಲ್ಲಿ ಆಯಾ ಪ್ರದೇಶದ ಸಾಂಸ್ಕೃತಿಕ ಅಂಶಗಳು ಪ್ರಧಾನ ಭೂಮಿಕೆಯಲ್ಲಿರುತ್ತವೆ ಎನ್ನುವುದೂ ಅಷ್ಟೇ ನಿಜವಾದ ಸಂಗತಿ. ವಿಸ್ತಾರವಾದ ಈ ಪ್ರಪಂಚದಲ್ಲಿ ಸಾಸ್ಕೃತಿಕ ಅಂಶಗಳು ಅನೇಕ ರೂಪಗಳಲ್ಲಿರುವುದು ಸಾಧ್ಯವಿದೆ. ಹೀಗಿರುವಾಗ ಹತ್ತಾರು ಸಾವಿರ ಮೈಲಿ ದೂರವಿರುವ ಪುಟ್ಟ ದೇಶದ ಚಲನಚಿತ್ರವೊಂದನ್ನು ನೋಡಿದಾಗ, ಇಗೋ ಇಲ್ಲೇ ನಮ್ಮ ಅಕ್ಕಪಕ್ಕದಲ್ಲಿರುವ ಮಧ್ಯಮ ವರ್ಗದ ಸಂಸಾರದಲ್ಲಿ ಹೀಗೆ ನಡೆಯಬಹುದು ಎನ್ನಿಸುವ ಹಾಗಿದ್ದರೆ ನಿಜಕ್ಕೂ ಸೋಜಿಗವಲ್ಲದೆ ಮತ್ತೇನು?
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ ಸರಣಿ

Read More

ಟ್ಯಾಕ್ಸಿಡರ್ಮಿ ಎಂಬ ಚರ್ಮ ಪ್ರಸಾಧನ ಕಲೆ

ಬಹುಪಾಲು ಬಡ ತಾಯಂದಿರು ತಮ್ಮ ಮಕ್ಕಳಿಗಾಗಿ ಪಡುತ್ತಿದ್ದ ಕಷ್ಟ ಹೇಳಲಸಾಧ್ಯವಾದುದು. ತಮ್ಮ ಮಗ ಬಹಳಷ್ಟು ಓದಿ ದೊಡ್ಡ ಹುದ್ದೆ ಪಡೆಯಬೇಕು ಎಂಬ ಕನಸನ್ನು ಕೂಡ ಕಾಣಲು ಸಾಧ್ಯವಾಗದಂಥ ದುಃಸ್ಥಿತಿಯಲ್ಲಿ ಅವರಿದ್ದರು. ಮಗ ಬೀಡಿ, ಸಿಗರೇಟ್, ಇಸ್ಪೆಟ್, ಕುಡಿತ ಮುಂತಾದ ದುಶ್ಚಟಗಳಿಗೆ ಬಲಿಯಾಗಬಾರದು ಎಂಬ ಚಿಂತೆ ಅವರನ್ನು ಸದಾ ಕಾಡುತ್ತಿತ್ತು. ಮಗ ಆರೋಗ್ಯ ಕಾಪಾಡಿಕೊಂಡಿರಬೇಕು, ಯಾವುದೋ ಕೂಲಿನಾಲಿ ಮಾಡಿಕೊಂಡು ಮರ್ಯಾದೆವಂತನಾಗಿ ಬದುಕಬೇಕು ಎಂಬುದು ಅವರ ಆಸೆಯಾಗಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ

Read More

`ಕ್ರಾಂತಿ ಕನ್ನೆಯ ಮೋಹದ ಮಳೆಯಲ್ಲಿ’

ರೂಮಿನ ವರಾಂಡದಲ್ಲಿ ಕೆಲವು ವಿದ್ಯಾರ್ಥಿ ಮಿತ್ರರು ನನ್ನ ಪರವಾಗಿ ಬಂದು ಬಾಗಿಲು ಬಡಿದು ಕೂಗಿದ್ದರು. ಒಳಗಿದ್ದವರು ಹೆದರಿದ್ದರು. ಗುಂಡ್ಲುಪೇಟೆಯ ಶಿವಬುದ್ಧಿ ಎಂಬ ಮಿತ್ರ ಇದ್ದ. ದ.ಸಂ.ಸದ ಅರೆಕಾಲಿಕ ಕಾರ್ಯಕರ್ತನಾಗಿ ರಾಜ್ಯಶಾಸ್ತ್ರದಲ್ಲಿ ಎಂ.ಎ.ಮುಗಿಸುತ್ತಿದ್ದ. ಅವಾಜ್ ಹಾಕಿದ್ದ. ‘ಬಾಗ್ಲು ತಗೀಲಿಲ್ಲಾ ಅಂದ್ರೆ ಯೀಚ್ವಾರಿಂದ ಬೀಗಾ ಹಾಕಂದು ಪೋಲಿಸ್ಗೆ ಕಂಪ್ಲೇಂಟ್ ಕೊಡ್ತೀನಿ’ ಎಂದು ಅಬ್ಬರಿಸಿದ್ದ. ಅವರು ನನ್ನನ್ನು ಹೊರಗೆ ಬಿಡಲೇ ಬೇಕಿತ್ತು. ಅವನೊಮ್ಮೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಕಾರಿಗೆ ಅಡ್ಡ ನಿಂತು ಧಮಕಿ ಹಾಕಿ ನಮ್ಮ ಹಳ್ಳಿಗೆ ಇಂತಿಂತಹ ಕೆಲಸಗಳನ್ನು ಮಾಡಿಕೊಡಬೇಕೆಂದು ಆಗ್ರಹಿಸಿ ಯಶಸ್ವಿ ಆಗಿದ್ದ.
ಮೊಗಳ್ಳಿ ಗಣೇಶ್ ಬರೆಯುವ ಸರಣಿ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ