Advertisement

Category: ಸರಣಿ

ಪಾತಕಿಯ ಆರ್ತ ಕರೆಯಲ್ಲಿ ಕರುಣೆಯೇ

ಅಪ್ಪನ ನಡವಳಿಕೆ ನಿಗೂಢವಾಗಿತ್ತು. ಎಲ್ಲೂ ಹೋಗ ಕೂಡದು ಎಂದು ಅವ ಕಟ್ಟಪ್ಪಣೆ ವಿಧಿಸಿದ್ದ. ದುಷ್ಟನ ಸಹವಾಸ ಬೇಡ ಎಂದು ಅಪ್ಪ ನಿರ್ಧರಿಸಿರಬಹುದೇ ಎಂದು ಯೋಚಿಸಿದೆ. ಅನುಮಾನವಾಯಿತು. ಅಪ್ಪ ನನ್ನನ್ನು ಕತ್ತಲೆ ಮನೆಯೊಳಗೆ ಕೂಡಿ ಹಾಕಿದ್ದ. ಪಾತಕಿಯ ಬಗ್ಗೆ ಹತ್ತಾರು ಪ್ರಶ್ನೆ ಕೇಳಿದ್ದ. ಅಪ್ಪ ಕೇಳುತ್ತಿದ್ದ ದಾಟಿಗೆ ಹೆದರಿ ಏನೇನೊ ಹೇಳಿದ್ದೆ. ತಾತನ ಹೋಟೆಲಲ್ಲಿ ಜನ ಗಿಜಿಗುಟ್ಟುತ್ತಿದ್ದ ಸದ್ದು ಕೇಳಿಸುತ್ತಿತ್ತು. ತಾತನಿಗೆ ಮೊದಲು ಈ ಸುದ್ದಿ ತಿಳಿಸಬೇಕಿತ್ತು ಎಂದುಕೊಂಡೆ. ಕೈ ಮೀರಿತ್ತು. ಕತೆಗಾರ ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಬರಹ

Read More

ಅರವಿಂದ ಕುಡ್ಲ ಬರೆಯುವ ಹೊಸ ಅಂಕಣದಲ್ಲಿ ಶಾಲೆಯ ಕಲರವ

ಶಾಲೆಯೆಂಬುದು ಕಲಿಕೆಯ ತಾಣ. ಆದರೆ ಅದು ಕೇವಲ ಮಕ್ಕಳಿಗಷ್ಟೇ ಕಲಿಕೆಯ ತಾಣವಲ್ಲ. ದೊಡ್ಡವರೂ ಕಲಿಯುವ  ಎಷ್ಟೊ ಪಾಠಗಳು ಅಲ್ಲಿವೆ. ಆ ಪಾಠಗಳೋ, ತರಗತಿಯೊಳಗೆ, ಕರಿ ಬೋರ್ಡುಗಳಲ್ಲಿ ಬರೆದ ಅಕ್ಷರಗಳಲ್ಲಷ್ಟೇ ಅಡಗಿಲ್ಲ.  ಕುತೂಹಲ ಮತ್ತು ನಿಷ್ಕಲ್ಮಶ ನೋಟದಲ್ಲಿ ಜಗತ್ತನ್ನು ನೋಡುವ ಮಕ್ಕಳ ಕಣ್ಣುಗಳಲ್ಲಿಯೂ ಅಡಗಿದೆ ಎಂದು ನಂಬಿದವರು ಗಣಿತ ಅಧ್ಯಾಪಕ ಅರವಿಂದ ಕುಡ್ಲ. ತಾನು ನಿಸ‍ರ್ಗದ ನಿರಂತರ ವಿದ್ಯಾರ್ಥಿ ಎಂದು ನಂಬಿದ ಅವರು,  ತಮ್ಮ ಅನುಭವಗಳ ಡೈರಿಯಿಂದ ಕೆಲವು ವಿಚಾರಗಳನ್ನು ಹೆಕ್ಕಿ ಕೆಂಡಸಂಪಿಗೆಯಲ್ಲಿ ಬರೆಯಲಿದ್ದಾರೆ.

Read More

ತುಡುಗುತನಕ್ಕಂಟಿದ ನಂಬಿಕೆಯ ಲೋಕ

ಈ ಕತೆ ಸಿಕ್ಕಿದ್ದು ಬಾಲೆಹೊಸೂರಿನಲ್ಲಿ. ಇದರ ವಿವರಗಳನ್ನು ನೋಡಲಾಗಿ ಈ ಊರಿನಲ್ಲಿಯೇ ‘ದ್ಯಾಮವ್ವ’ ಪೂಜೆಗೊಳ್ಳುತ್ತಾಳೆ. ಹೀಗಾಗಿ ಇಲ್ಲಿನ ತುಡುಗು ಮಂದಿಯೇ ಈ ಕಥೆಯ ನಾಯಕರಿರಬಹುದು. ಇದು ಸೃಷ್ಟಿ ಕತೆಯಲ್ಲ ಆದರೆ ಈಗಾಗಲೇ ಇರುವ ಸಮುದಾಯದ ಪ್ರವೃತ್ತಿಯನ್ನು ಬೆಂಬಲಿಸಿ ಪಾರುಮಾಡುವ ಕತೆಯಾಗಿದೆ. ಅಂತೆಯೇ ಸಮುದಾಯ ದೈವಗಳ ಜತೆ ಹೊಂದಿದ್ದ ಅವಿನಾಬಾವ ಸಂಬಂಧವನ್ನು ಕೂಡ ಸೂಚಿಸುತ್ತದೆ. ಅಂತೆಯೇ ದ್ಯಾಮವ್ವ ತಮ್ಮನ್ನು ಪೊರೆಯುತ್ತಾಳೆ…

Read More

ʻಲಿಟಲ್ ಮಿಸ್‌ ಸನ್‌ಶೈನ್‌ʼ: ಕನಸು ವಾಸ್ತವಗಳ ಜುಗಲ್ ಬಂದಿ

ಮನೆಯಲ್ಲಿ ಉಳಿದವರ ಆಲೋಚನೆ ಬೇರೆಯ ರೀತಿ. ಕನಸುಗಳನ್ನೇ ನೇಯುವ ಅವರಿಗೆ ಮನೆಯ ಪುಟಾಣಿಯೂ ಕನಸು ಕಾಣುತ್ತಿರುವುದು ವಿಶೇಷವೆನಿಸುತ್ತದೆ. ಜೊತೆಗೆ ತಮ್ಮ ಕನಸಿನ ಜಂಜಾಟದಿಂದ ಕೊಂಚ ತಪ್ಪಿಸಿಕೊಳ್ಳಲು ಹೊರದಾರಿಯೊಂದು ಸಿಕ್ಕಿತೇನೋ ಎನ್ನುವ ಕಾರಣದಿಂದ ಅವಳ ಕನಸನ್ನು ಬೆಂಬಲಿಸುತ್ತಾರೆ. ಮುಖ್ಯವಾಗಿ ಅವಳ ತಂದೆ ರಿಚರ್ಡ್‌. ಅಪ್ಪನಿಂದ ಮಿಸ್‌ ಲಿಟಲ್‌ ಸನ್‌ ಶೈನ್‌ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಒಪ್ಪಿಗೆ ಸಿಕ್ಕಿದ್ದರಿಂದಲೇ ನೆಲದಿಂದ ನೆಗೆದು ಹಾರಾಡುವಂತಾಗುತ್ತದೆ ಆಲಿವ್‌ಗೆ.

Read More

ಹಲವು ಮೇಳಗಳಲ್ಲಿ ಭಾಗವತರಾಗಿ ಬಲಿಪರು

ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳದಲ್ಲಿ ಬಲಿಪ ನಾರಾಯಣ ಭಾಗವತರು ನಾಲ್ಕು ವರುಷಗಳ ತಿರುಗಾಟವನ್ನು ಮಾಡಿದರು. ಮುಂದೆ ತಮ್ಮ ಮೇಳ ತಿರುಗಾಟದ ಕೊನೆಯವರೆಗೂ ಶ್ರೀ ಕಟೀಲು ಮೇಳದಲ್ಲೇ ಇದ್ದರು.  ಹಣಕಾಸಿನ ಮುಗ್ಗಟ್ಟು, ಮೇಳ ನಡೆಸಲು ಎದುರಾದ ಕಷ್ಟಗಳನ್ನು ದಾಟುತ್ತ ಬದುಕು ಸಾಗಿದರೂ, ಭಾಗವತಿಕೆಯೆಂಬ ಪ್ರೀತಿ ಅವರಿಂದ ದೂರಾಗಲಿಲ್ಲ. ಕೃಷ್ಣ ಪ್ರಕಾಶ ಉಳಿತ್ತಾಯ ಬರೆಯುವ ‘ಬಲಿಪ ಮಾರ್ಗ’ ಸರಣಿಯಲ್ಲಿ ಹೊಸ ಬರಹ. 

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ