Advertisement

Category: ಅಂಕಣ

ಸುಂದರಿಗೇನು ಕಷ್ಟ-ಸುಖಗಳಿರುವುದಿಲ್ಲವೇ?

ಇರುವ ಚೆಂದವನ್ನು ಕಾಪಾಡಿಕೊಳ್ಳಬೇಕೆಂಬ ಒತ್ತಡ ಸೃಷ್ಟಿಸುವ ತಾಕಲಾಟ ಬಲ್ಲೆ. ಒಂದೇ ಘಟ್ಟದಲ್ಲಿ ಹೆಚ್ಚು ಕಾಲ ಇರಲಾಗದು. ನಿಧಾನಕ್ಕೆ ಈ ಜತನ ಮಾಡುವ ಉಸಾಬರಿ ಸಾಕೆನ್ನಿಸಿತು. ಹೊರಗೆ ‘ಕಾಣುವ’ ಚೆಂದಕ್ಕಿಂತ ನಾನು ಬೇರೆ ಅನ್ನಿಸಿತು. ಎಷ್ಟೇ ಕಷ್ಟಪಟ್ಟರೂ ಕಾಲನ ಹೊಡೆತ ತನ್ನ ಕೆಲಸ ಮಾಡಿಯೇ ತೀರುತ್ತದೆ. ಕಾಲದೊಂದಿಗೆ ಹೋರಾಡುವುದಕ್ಕಿಂತ ನನ್ನ ವ್ಯಕ್ತಿತ್ವ, ಪ್ರತಿಭೆ, ಬುದ್ಧಿ, ಮನಸ್ಸಿನ ಜೊತೆ ಗುದ್ದಾಡುತ್ತಾ ಬೆಳೆಯುವುದರಲ್ಲಿ ಬದುಕಿನ ಸೌಂದರ್ಯವಿದೆ. ಈ ಸಮಯ ಮತ್ತೆ ಬರಲಾರದು. ಈ ಅವಕಾಶ ಮತ್ತೆ ಸಿಗಲಾರದು. ಹಠಕ್ಕೆ ಬಿದ್ದಂತೆ ಸಂಗೀತ ಮುಂದುವರೆಸಿದೆ.
ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣ

Read More

ಅವಳನ್ನು ಅನ್ಯಗ್ರದ ಏಲಿಯನ್‌ಳಂತೆ ನೋಡತೊಡಗಿದ್ದರು

ಆಧುನಿಕತೆಯ ಬಣ್ಣ ಅಷ್ಟೊಂದು ಮೆತ್ತಿಕೊಂಡಿರದಿದ್ದ ನಮ್ಮ ಕಾಲೇಜಿಗೆ ಆಗ ಒಂದು ಹುಡುಗಿ ಜೀನ್ಸ್ ತೊಟ್ಟು ಬಂದಿರುವುದೇ ದೊಡ್ಡ ವಿಷಯ ಆಗಿಹೋಯಿತು. ಅಂದು ಅವಳನ್ನು ಯಾವುದೋ ಅನ್ಯಗ್ರಹವೊಂದರಿಂದ ಬಂದಿಳಿದ ಏಲಿಯನ್‌ಳಂತೆ ಎಲ್ಲಾ ಹುಡುಗರು ಅವಳನ್ನೆ ದಿಟ್ಟಿಸತೊಡಗಿದ್ದರು. ಅವಳ ಆ ಬಟ್ಟೆ ಕಂಡು ಆಡಿಕೊಂಡು ನಗುವುದು ಕೊಂಕು ಮಾತನಾಡುವುದು ಶುರು ಮಾಡಿದ್ದರು. ಹುಡುಗರ ವರ್ತನೆ ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಆ ಹುಡುಗಿ ತಾನೇನೋ ಮಹಾಪರಾಧ ಮಾಡಿ ಸಿಕ್ಕಿಬಿದ್ದಳೇನೋ ಎನ್ನುವ ಮನೋಭಾವನೆಯಲ್ಲಿ ಕಾಲೇಜು ಮುಗಿಯುವವರೆಗೂ ತಲೆ ತಗ್ಗಿಸಿಕೊಂಡೆ ಕೂಡಬೇಕಾಯಿತು.
ಇಸ್ಮಾಯಿಲ್‌ ತಳಕಲ್‌ ಅಂಕಣ

Read More

ಆಳದ ದನಿ ತುಂಬಾ ಕ್ಷೀಣವಾಗಿರುತ್ತೆ..

ಪುಣ್ಯ ಕೊನೆಯ ಬಾರಿ ಮಾತನಾಡಿದ್ದು ಇದೆ ಒಂದು ವಾರದ ಕೆಳಗೆ. ಅವನ ಶಾಲಾ ವಾರ್ಷಿಕೋತ್ಸವದಲ್ಲಿ… ಈ ರಗಳೆಗಳೆಲ್ಲ ಶುರುವಾದದ್ದು ಸುರಭಿಯಿಂದಲೇ ಎನ್ನಬೇಕು. ಆರನೇ ತರಗತಿ ಓದುತ್ತಿದ್ದ ಸುರಭಿ, ಒಂದು ದಿನ ಶಾಲೆಯಿಂದ ಬಂದದ್ದೆ ಜೋರಾಗಿ ಅಳತೊಡಗಿದಳು. ‘ಅಣ್ಣ ಹುಡುಗಿ ತರ ಆಡ್ತಾನೆ ಅಂತ ಎಲ್ಲರು ನಂಗೆ ಹೆಣ್ಣಿಗನ ತಂಗಿ ಅಂತ ಆಡ್ಕತಾರೆ…ಕಾಡಿಸ್ತಾರೆ. ನಾಳೆಯಿಂದ ಶಾಲೆಗೇ ಹೋಗಲ್ಲ!’ ಎಂದು ರಂಪ ಮಾಡತೊಡಗಿದ್ದಳು. ಅಂದಿನಿಂದಲೇ ಪ್ರತಾಪ್ ಇವನನ್ನ ಸರಿ ಮಾಡಲು ಶುರುಮಾಡಿದ್ದು… ಪುಣ್ಯನ ದನಿ ಹುಡುಗಿಯ ದನಿಯನ್ನು ಹೋಲುತ್ತಿತ್ತು. ದಾದಾಪೀರ್‌ ಜೈಮನ್‌ ಬರೆಯುವ ʻಜಂಕ್ಷನ್‌ ಪಾಯಿಂಟ್‌ʼ ಅಂಕಣದ ಹೊಸ ಬರಹ

Read More

ʻನಿಧಾನವೇ ಪ್ರಧಾನವೆಂಬುದು ನನ್ನ ವಿಧಾನʼ

ಕ್ರಮೇಣ ನಮಗೆ ಊರು ಪರಿಚಯವಾಗತೊಡಗಿತ್ತು. ಅದು ತುಂಬಾ ಮುಖ್ಯ. ಯಾವ ಊರಿನಲ್ಲಿ ನಾವು ಬೆಳೆಯಲು ಬಯಸುತ್ತೇವೋ ಅಲ್ಲಿನ ಜನರ ಜೊತೆಗೆ ಬೆಳೆಯಬೇಕೆ ವಿನಹ ನಮ್ಮಷ್ಟಕ್ಕೆ ನಾವು ಇರಲು ಸಾಧ್ಯವಿಲ್ಲ. ಇದೆ ರೀತಿ ನಾವು ನಮ್ಮ ಹೊಲದ ಬಳಿಯ ಜನರಿಗೂ ಹತ್ತಿರವಾಗಬೇಕಿತ್ತು. ಅದು ಇನ್ನೂ ಸಾಧ್ಯವಾಗಿರಲಿಲ್ಲ. ನಮಗಿನ್ನೂ ಅಲ್ಲೊಂದು ಮನೆ ಸಿಕ್ಕಿರಲಿಲ್ಲ. ಆದರೆ ಅದಕ್ಕಿಂತ ಮೊದಲು ಶಂಭುಲಿಂಗ ಹೆಗಡೆ ಅವರು ನಮಗೆ ಸಿಕ್ಕಿದ್ದು ತುಂಬಾ ಅನುಕೂಲ ಆಗಿತ್ತು. ಅವರು ನಮಗೆ ಬೇಕಾದ ಮೂಲಭೂತ ಸೌಕರ್ಯಗಳನ್ನೆಲ್ಲ ಚಿಟಿಕೆ ಹೊಡೆದಂತೆ ಕೊಡಿಸಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣದಲ್ಲಿ ಹೊಸ ಬರಹ

Read More

ಒಣಎಲೆ ಗೊಬ್ಬರದ ಕಿರು ಕಥೆಗಳು

ಸುಮಾರು ಹತ್ತು ಎಕರೆ ಪ್ರದೇಶದಲ್ಲಿರುವ ನಗರಪಾಲಿಕೆ ಮರುಬಳಕೆ ಘಟಕದ ಒಂದು ಭಾಗದಲ್ಲಿ ಒಣ ಎಲೆಗೊಬ್ಬರ ವಿತರಣೆ ವ್ಯವಸ್ಥೆಯಿದೆ. ವಾರಾಂತ್ಯದಲ್ಲಿ ಮಧ್ಯಾಹ್ನ ಹನ್ನೆರಡರ ನಂತರ ಹೋದಾಗ ಕಂಡಿದ್ದು ಒಂದೆಡೆ ಒಂದಷ್ಟು ಜನರು ತಾವು ತಂದ ತ್ಯಾಜ್ಯ ಮತ್ತು ಹಸಿರು ಗಿಡಮರಗಳ ಭಾಗಗಳನ್ನು ಸುರಿಯುತ್ತಿದ್ದರು. ಬೆಳಗಿನ ಸಮಯದಲ್ಲಿ ಅಲ್ಲಿ ಹೋಗಲು ಸಾರ್ವಜನಿಕರಿಗೆ ಅನುಮತಿಯಿಲ್ಲ. ಆಗ ನಗರಪಾಲಿಕೆಯ ಯಂತ್ರಗಳು ಈ ಗಿಡಮರ ಭಾಗಗಳನ್ನು ಕತ್ತರಿಸಿ, ಅರೆದು ಅವನ್ನು ಒಯ್ದು ಒಂದು ಮೂಲೆಯಲ್ಲಿ ರಾಶಿ ಮಾಡುತ್ತಿರುತ್ತವೆ. ಡಾ. ವಿನತೆ ಶರ್ಮ  ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ