Advertisement

Category: ಸಂಪಿಗೆ ಸ್ಪೆಷಲ್

ಸನಾದಲ್ಲಿ ಬರೆದ ಕೆಲವು ಅಪೂರ್ಣ ಟಿಪ್ಪಣಿಗಳು: ಕೆ. ವಿ. ತಿರುಮಲೇಶ್ ಬರಹ

“ಪ್ರಜಾಪ್ರಭುತ್ವವನ್ನು ಟೀಕಿಸುವವರಿಗೆ ಬೇರೆ ಯಾವ ಪದ್ಧತಿ ಯಾವ ಉತ್ತಮ ಕಾರಣಕ್ಕೆ ಬೇಕೋ ತಿಳಿಯುವುದಿಲ್ಲ. ಪ್ರಜಾಪ್ರಭುತ್ವವೊಂದನ್ನು ಬಿಟ್ಟು ಇನ್ನುಳಿದ ಯಾವುದೇ ರಾಜಕೀಯ ವ್ಯವಸ್ಥೆಯೂ ಇವರಿಗೆ ಒಪ್ಪಿಗೆಯೇ? ಪ್ರಜಾಪ್ರಭುತ್ವವೆಂದರೆ ಯಾಕೆ ಇವರಿಗೆ ಇಷ್ಟೊಂದು ಹೆದರಿಕೆ? ಹಾಂ! ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ, ವಿಮರ್ಶಿಸುವ ಸ್ವಾತಂತ್ರ್ಯವಿದೆ. ಇದು ಇವರಿಗೆ ಸಹ್ಯವಲ್ಲ”

Read More

ಚಿಕ್ಕಮನೆಯಲ್ಲಿ ಚಕ್ಕೆ ತುಂಬಿದೆ!: ಎಂ ಆರ್ ಕಮಲಾ ಬರೆದ ಪ್ರಬಂಧ

“ಬಾಗಿಲಿದ್ದರು ಚಿಲಕವಿಲ್ಲದ, ಹಾಕಿಕೊಂಡರೂ ಹಾಕಿದಂತೆ ಕಾಣದ ವಿಚಿತ್ರ ಮನಸ್ಸಿನ ಕೋಣೆ. ಹೊರಳಿದರೆ ಬಿದ್ದೇ ಹೋಗುತ್ತೇವೆ ಎನ್ನುವಂಥ ಒಂದು ಕರಿಮರದ ಮಂಚ! ಪಕ್ಕದಲ್ಲಿದ್ದ ಪುಟ್ಟ ಸ್ಟೂಲ್ ಮೇಲೆ ಮನೆಯಲ್ಲಿದ್ದವರ ಹಾಸಿಗೆಗಳನ್ನು ಮಡಚಿ ಒಂದರ ಮೇಲೊಂದು ಪೇರಿಸಿಡಲಾಗಿರುತ್ತಿತ್ತು. ಕೋಣೆಯಂತೆ ಹಾಸಿಗೆ ಕೂಡ ಯಾರೊಬ್ಬರಿಗೂ ಸೇರಿರಲಿಲ್ಲ. ಆರು ಹಾಸಿಗೆಯನ್ನು ನಡುಮನೆಯಲ್ಲಿ ಹಾಸಿದರೆ ಹತ್ತು ಜನ ಮಲಗುತ್ತಿದ್ದೆವು.”

Read More

ನಿಮ್ಮೂರ ದಾರಿಯಲಿ.. ನಮ್ಮನ್ನೇ ಹುಡುಕುತ್ತಾ..: ಬಿ.ಕೆ. ಸುಮತಿ ಲೇಖನ

“ಕೆಲವು ಮತ್ತೆ ಮತ್ತೆ ಕಾಡುವ ಊರುಗಳು. ನಾವು ನೋಡದಿದ್ದರೂ ನಮ್ಮೊಳಗೆ ಬೆಳೆದಿರುವಂಥದ್ದು. ಮತ್ತೆ ಕೆಲವು ಕಲ್ಪನೆಗಳು. ಈ ಕಲ್ಪನೆಗಳು ನಮ್ಮನ್ನು ಒಂದು ವಿಚಿತ್ರ ಭಾವದಲ್ಲಿ ಸಿಲುಕಿಸುತ್ತವೆ. ರಾಮಾಚಾರಿ ಮತ್ತು ಚಿತ್ರದುರ್ಗ…. ನೋಡಿ… ಅವಿನಾಭಾವ ಸಂಬಂಧ… ಚಿತ್ರದುರ್ಗ ನೋಡದೆ ಇದ್ದರೂ.. ನಾಗರಹಾವು ಮೂಲಕ ನಾವು ಬಂಡೆ, ಬಿಸಿಲು, ನೆರಳಿನ ತಪ್ಪಲನ್ನು ತಪಿಸಿ ಅನುಭವಿಸುತ್ತೇವೆ.”

Read More

ಮಳೆಯೊಂದು ಮಧುರ ಕಾವ್ಯ : ಮುರ್ತುಜಾಬೇಗಂ ಬರಹ

“ಒಮ್ಮೆ ಚಿಂತೆಗಳ ಕಂತೆ ಗಂಟುಕಟ್ಟಿ ಕಿತ್ತೆಸೆದು ಬಿಸಾಕಿ ಬನ್ನಿ. ಒಂದ್ಸಲ, ಒಂದೇ ಒಂದ್ಸಲ ಅಂಗಳಕ್ಕೋ ಟೆರೆಸಿಗೋ ಹೋಗಿ ಸುರಿವ ಮಳೆಯಲ್ಲಿ ನಿಂತು ನೋಡಿ. ಅದೊಂದು ತಪನೆಯಂತಹ ಅನುಭಾವ. ಒಮ್ಮೊಮ್ಮೆ ಜೀವನದ ಕರಕಷ್ಟ ಕಾಲದಲ್ಲಿ ಸಮಸ್ಯೆಗಳ ಸಂತೆಯಲ್ಲಿ ದಿಕ್ಕು ತಪ್ಪಿ ನಿಂತಿರುವವನ ಹೆಗಲ ಮೇಲೆ ಬಹುಕಾಲದ ಹಳೆಯ ಗೆಳೆಯನೊಬ್ಬ ಕೈ ಇಟ್ಟಂತೆ.”

Read More

ಕವಿ ತಿರುಮಲೇಶ್ ಅನುವಾದಿಸಿದ ಅಮೇರಿಕಾದ ರಾಷ್ಟ್ರಕವಿ ಮರ್ವಿನ್ ಸಂದರ್ಶನ

“ಈ ಅನುವಾದ ಮಾಡುತ್ತ ಇರುವಾಗ, ಇದುವರೆಗೆ ಅನುವಾದದ ಕುರಿತು ನಾನು ಅರಿತುಕೊಂಡಿದ್ದೇನೆ ಎನ್ನುವುದೆಲ್ಲವೂ ಅಮಾನತಿನಲ್ಲಿರುತ್ತದೆ. ಇಂಗ್ಲಿಷ್ ನಲ್ಲಿ ಮಂತ್ರಗಳಿಲ್ಲ. ಇಂಗ್ಲಿಷ್ ಯಾವತ್ತೂ ಮಂತ್ರಿಸುವ ಭಾಷೆಯಾಗಿರಲಿಲ್ಲ, ಆದ್ದರಿಂದ ಬಳಸಬಹುದಾದ ಅಥವಾ ವಿಸ್ತರಿಸಬಹುದಾದ ಪರಂಪರೆಯಿಲ್ಲ. ನಾವು ಹಿಂದೆ ಮಾತಾಡಿದ ಮೌಖಿಕ ಪರಂಪರೆಯ ಮೇಲೆ ಕೆಲಸ ಮಾಡಬೇಕೆಂಬ ನನ್ನ ದೀರ್ಘಕಾಲಿಕ ಬಯಕೆಯಿದೆ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ