Advertisement

Category: ವಾರದ ಕಥೆ

ಹೊಸ ಜೀವಸೆಲೆ ಮತ್ತು ಹೊಸ ಹೊಳಹುಗಳು….

ರಾತ್ರಿ ನಿದ್ದೆಗೆಟ್ಟಿದ್ದಕ್ಕೆ ಬಂದಿದ್ದ ತಲೆಸುತ್ತೋ, ಹೊಟ್ಟೆಗಿಲ್ಲದೇ ಆದ ಆಯಾಸವೋ ಅಥವಾ ಹ್ಯಾಂಗೋವರೋ ಒಟ್ಟು ತಲೆ ಗಿಂ ಎಂದು ಬಹಳ ಜೋರಾಗಿ ಚಕ್ಕರ್ ಬಂದು ವಾಂತಿ ಬರುವ ಹಾಗಾಯಿತು. ಇನ್ನು ಒಂದೇ ಒಂದು ಕ್ಷಣ ನಿಂತಿದ್ದರೂ ಬಿದ್ದೇಬಿಡುತ್ತೇನೆ ಎಂದನಿಸಿತು. ಕೈಯಲ್ಲಿ ಹಸುಗೂಸಿದೆ ಎನ್ನುವುದನ್ನೂ ಮರೆತು ಮಗುವಿನ ತಲೆಯನ್ನು ಎದೆಗೆ ಅವುಚಿಸಿಕೊಂಡಿದ್ದ ಎಡಗೈಯಿಂದ ಅರವಿಂದನ ತೋಳನ್ನು ಹಿಡಿದುಕೊಳ್ಳಲು ಹೋದಳು. ಮಗುವಿನ ತಲೆಗೆ ಯಾವ ಆಧಾರವೂ ಇಲ್ಲದಂತಾಗಿ ಹಿಮ್ಮೀಟಿದಂತಾಗಿ ಜೋರಾಗಿ ಅಳತೊಡಗಿತು.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಕೊನೆಯ ಕಂತು ನಿಮ್ಮ ಓದಿಗಾಗಿ

Read More

ಮೊಗಳ್ಳಿ ಗಣೇಶ್ ಬರೆದ ಈ ಭಾನುವಾರದ ಕತೆ

ಏನೊ ಆತಂಕ. ಒಂಟಿತನ. ಈ ಓದು ಕೂಡ ಉಪಯೋಗ ಇಲ್ಲ. ಬುದ್ದಿಗೆ ಬೆಲೆ ಇಲ್ಲ. ದಡ್ಡರಿಗೇ ಎಲ್ಲೆಡೆ ದೊಡ್ಡ ದೊಡ್ಡ ಪದವಿ. ಮೂರ್ಖರು ಮೂರ್ಖರನ್ನೆ ಬೆಳೆಸುತ್ತಾರೆ. ಈ ಜಾತಿ ಕೂಪದಲ್ಲಿ ನಾನು ಏನೇ ಆಗಿದ್ದರೂ ಅದೇ ಆಗಿರುತ್ತೇನೆ. ಅದಕ್ಕಾಗಿ ಯಾಕೆ ಇಷ್ಟೆಲ್ಲ ಹೋರಾಟ? ವಿದ್ವತ್ತು? ಮನುಷ್ಯತ್ವ… ಕೊನೆಗೂ ನನಗೇನು ಉನ್ನತ ಕೆಲಸ ಸಿಗುವುದಿಲ್ಲವಲ್ಲಾ ಎಂದು ಮಂಕಾಗಿದ್ದೆ. ವಿಶ್ವಾಸ ಕುಗ್ಗುತ್ತಿತ್ತು. ಅವನು ನನ್ನ ಅಪ್ಪ ನಾಲ್ಕನೆ ಬಾರಿಗೆ ಯಾವುದೊ ಒಂದು ಹೆಂಗಸ ಒಪ್ಪಿಸಿ ಕರೆತಂದು ಮನೆಯಲ್ಲಿ ಇಟ್ಟುಕೊಂಡಿದ್ದನಂತೆ.
ಮೊಗಳ್ಳಿ ಗಣೇಶ್ ಬರೆದ ಕಥೆ “ಅವಳು ಚಿಲುಮೆ”

Read More

ಶ್ರೀ ಡಿ.ಎನ್. ಬರೆದ ಈ ಭಾನುವಾರದ ಕತೆ

ಹೋಗಿ ನೋಡಿ ಅಪ್ಪನೆಂದು ಗುರುತು ಹಿಡಿದ. ಆತನ ಮೇಲಿದ್ದ ಕೋಪ ಆರಿರಲಿಲ್ಲ. ಜೀವನವಿಡೀ ಬೇರೆಯವರ ಪಾಪ ಕಳೆಯಲು ದಾನಗಳು ತೆಗೆದುಕೊಂಡು ಜಪತಪಗಳಲ್ಲಿ ಕಾಲ ಕಳೆಯುತ್ತಿದ್ದ ಅಪ್ಪ, ತನ್ನ ಅಪರಕರ್ಮವೂ ಸರಿಯಾಗಿ ಆಗದೆ ಯಾವುದೋ ತಿಳಿಯದ ನಗರದಲ್ಲಿ ಅನಾಥ ಹೆಣದಂತೆ ಬೂದಿಯಾಗಿದ್ದ. ಯಾರದೋ ಸಾವಿಗೆ ಗರುಡ ಪುರಾಣ ಓದುತ್ತಿದ್ದ ಅಪ್ಪ ಸತ್ತಾಗ ಅವನಿಗಾಗಿ ಯಾರೂ ಅದನ್ನು ಓದದಂತೆ ರಮೇಶ ನೋಡಿಕೊಂಡ.
ಶ್ರೀ ಡಿ.ಎನ್. ಬರೆದ ಕತೆ “ಪಾಪ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ

ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ‘ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ..
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ “ಜೀ ಗಾಂಧಿ” ನಿಮ್ಮ ಓದಿಗೆ

Read More

‘ವಾಟ್ ದ ಹೆಕ್’ ಅಮ್ಮಾ…

‘ನೀವೇ ಸರಿ, ಅರವಿಂದರಾಯರೇ. ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಿದ್ದೀರಿ’ ಇನ್ನೂ ಅವರ ಮಾತು ಮುಗಿದಿಲ್ಲ. ಎಲ್ಲಿಂದ ಬಂತೋ ಒಂದು ದೊಡ್ಡ ಅಲೆ, ಅಲ್ಲಿ ಕೂತಿದ್ದವರನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಟ್ಟಿತು. ಕಣ್ಣು ಮುಚ್ಚಿ ಬಿಡುವುದರಲ್ಲಿ ಎಲ್ಲ ಮರಳು, ಎಲ್ಲೆಲ್ಲೂ ನೀರು. ಜನರ ಕೂಗು, ಹಾಹಾಕಾರ. ಸುಕನ್ಯ ಕಣ್ಣು ಬಿಟ್ಟಾಗ ಹತ್ತಿರ ಯಾರೂ ಕಾಣುತ್ತಿಲ್ಲ. ‘ವಿನೂ, ವಿಶೂ’ ಜೋರಾಗಿ ಕೂಗುತ್ತಾ ಇಡೀ ಸಮುದ್ರದ ದಡದಲ್ಲಿ ಹುಚ್ಚು ಹಿಡಿದಂತೆ ಓಡುತ್ತಿದ್ದಾಳೆ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ