Advertisement

Category: ಸರಣಿ

ದಂಡ ಮೊಂಡರಿಂದ ದೇವರಿಗೆ ದಂಡವೆ

ತಾತ ಎಂದೆ, ಭಂಗವಾದಂತೆ ಎದ್ದುನಿಂತ. ಅವನ ಪರಮಾಪ್ತ ಪ್ರಿಯ ತಿನಿಸು ಎಂದರೆ ಎಲೆ ಅಡಿಕೆ ಹೊಗೆಸೊಪ್ಪು. ಊರವರು ತಾವಾಗಿಯೆ ಅವನಿಗೆ ನೀಡುತ್ತಿದ್ದರು. ಯಾರನ್ನೂ ಕೇಳುತ್ತಿರಲಿಲ್ಲ. ಹಾಗೆ ಕೊಡುವುದು ಗೌರವ ಸೂಚಕವಾಗಿತ್ತು. ಅವನ ಬಳಿ ಬಿಡಿಗಾಸು ಕೂಡ ಇರಲಿಲ್ಲ. ಬರಿಗಾಲ ನಡಿಗೆಯವನು ಅವನು. ಒಮ್ಮೆಯೂ ವಾಹನ ಏರಿ ಕೂತಿದ್ದವನಲ್ಲ. ಹಣದ ಬಗ್ಗೆ ಅಸಹ್ಯ. ಅದನ್ನು ಮುಟ್ಟುತ್ತಿರಲಿಲ್ಲ. ದೊಡ್ಡ ತಾತ ದುಡ್ಡು ಕೊಡಲು ಮುಂದಾದಾಗಲೆಲ್ಲ ವಿಷಾದ ಪಡುತ್ತಿದ್ದ. ನಿರಾಕರಿಸಿದ್ದ.
‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಮೊಗಳ್ಳಿ ಗಣೇಶ್‍ ಬರಹ.

Read More

ಅಗರಿ ಶೈಲಿ, ಬಲಿಪ ಶೈಲಿಗಳ ಕುರಿತು..

ಅಗರಿ ಮತ್ತು ಬಲಿಪ ಶೈಲಿಗಳು ಯಕ್ಷಗಾನದ ಅತ್ಯಂತ ಪ್ರಮುಖ ಹಾಡಿಕೆಯ ಘರಾನಾ ಎಂದು ಹೇಳಬಹುದು. ಈಗಲೂ ಇದು ಪ್ರಸ್ತುತದಲ್ಲಿದ್ದು ಯಕ್ಷಗಾನದ ಸಾಂಪ್ರದಾಯಿಕ ಹಾಡಿಕೆಗೆ ಕಲಾವಿದರು ಕೊಡುತ್ತಿರುವ ಗೌರವದ ಪ್ರತೀಕ ಎಂದೇ ಹೇಳಬಹುದು. ಈ ಎರಡು ಶೈಲಿಯ ಹಾಡಿಕೆಯಲ್ಲಿ ಹೊರನೋಟಕ್ಕೆ ಭೇದ ಇದ್ದರೂ ಅದರ ಅಂತರ್ಯದಲ್ಲಿ ಮೂಲಭೂತ ಅಂಶಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಕೃಷ್ಣ ಪ್ರಕಾಶ್ ಉಳಿತ್ತಾಯ ಬರೆಯುವ ಬಲಿಪ ಮಾರ್ಗ ಸರಣಿಯಲ್ಲಿ ಹೊಸ ಬರಹ

Read More

ಸಂಸೆ ಗುಡ್ಡದ ಮೇಲೆ ಮಕ್ಕಳು ಹೇಳಿದ ಪಾಠ

ಪೈಪ್‌ ಹೊರಟ ದಾರಿಯಲ್ಲಿ ಪೈಪ್‌ ಎಲ್ಲಾದರೂ ಒಡೆದಿದೆಯೇ ಎಂದು ಪರೀಕ್ಷಿಸುತ್ತಾ ಬಂದೆವು. ಒಂದೆರಡು ಕಡೆ ಪೈಪ್‌ ಒಡೆದಿತ್ತು. ಇದು ಹೇಗಾಗಿರಬಹುದು ಎಂದು ಕೇಳಿದಾಗ ಮಕ್ಕಳೇ ಉತ್ತರ ಕೊಟ್ಟರು. ‘ಸಾರ್‌ ನೀರು ಪ್ರೆಷರ್‌ ನಲ್ಲಿ ಬಂದರೆ ಪೈಪ್‌ ಒಡೆಯುತ್ತದೆʼ ಎಂಬ ಸರಳವಾದ ಭೌತಶಾಸ್ತ್ರವನ್ನು ನನಗೆ ಕಲಿಸಿ ಕೊಟ್ಟಿದ್ದರು. ಅದೇ ವಿಷಯದ ಮೇಲೆ ಕೇಳಲಾದ ಪ್ರಶ್ನೆಗೆ ಉತ್ತರಿಸಲಾಗದ ಮಕ್ಕಳು ನಿಜ ಜೀವನದಲ್ಲಿ ಅದನ್ನು ಬಳಸಿದ್ದರು.
ಕೆಲವು ಕಡೆ ಪೈಪ್‌ ಲೈನ್‌ ಜಜ್ಜಿ ಹುಡಿಯಾದಂತಿತ್ತು.  ಎಲ್ಲೋ ದನಾನೋ ಕಾಟೀನೋ ಓಡಿಕೊಂಡು ಹೋಗುವಾಗ ಪುಡಿಯಾಗಿರಬೇಕು ಸಾರ್‌  ಎಂದು…

Read More

ಕಳ್ಳತನಕ್ಕೆ ಗುಡ್ ಬೈ ಹೇಳಿದ ಗಂಟಿಚೋರರು ಮಾಡಿದ್ದೇನು?

ಆಗ ತುಡುಗು ಮಾಡುವುದು ಅವರ ಆರ್ಥಿಕತೆಯ ಪ್ರಧಾನ ಮೂಲವಾಗಿತ್ತು. ಅಂತೆಯೇ ಹಣ ಬಂಗಾರ ಮಾತ್ರವಲ್ಲದೆ ದಿನಬಳಕೆಯ ವಸ್ತುಗಳನ್ನು ಹೆಚ್ಚು ತುಡುಗು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಈ ಸಮುದಾಯವು ಮುಖ್ಯವಾಗಿ ತುಡುಗು ಮಾಡುವ ಉದ್ದೇಶದಲ್ಲಿ ಹೊಟ್ಟೆಪಾಡಿನ ಅನಿವಾರ್ಯತೆ ಇತ್ತು. ಹಾಗಾಗಿ ಹಿಂದೆಯೂ ಕೂಡ ಈ ಸಮುದಾಯದಲ್ಲಿ ತುಡುಗುತನ ಇದ್ದದ್ದು ಹೆಚ್ಚಾಗಿ ಹಸಿವನ್ನು ನೀಗಿಸುವ ವಸ್ತುಸಂಗತಿಗಳಿಗೆ ಸಂಬಂಧಿಸಿದ್ದು ಎನ್ನುವುದನ್ನು ಗಮನಿಸಬೇಕು.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹತ್ತನೆಯ ಕಂತು.

Read More

ʻಕೀಸ್ ಟು ದ ಹೌಸ್‌ʼ: ವಿಷಾದದ ಸೋಂಕಿಲ್ಲದೆ ಸಾಗುವ ಭಾವಕಥನ

ತಂದೆಗೆ ಅಪರಾಧಿ ಪ್ರಜ್ಞೆ ಕಾಡುತ್ತಿರುತ್ತದೆ. ಹದಿನೈದು ವರ್ಷ ವಿಕಲಾಂಗನನ್ನು ಸಹಿಸಲಾರೆ ಎಂಬ ಕಾರಣದಿಂದ ದೂರ ಮಾಡಿ ನಿಶ್ಚಿಂತನಾಗಿ ಜೀವಿಸಿದ್ದ ಸಂಗತಿ ಅವನನ್ನು ಕಾಡುತ್ತದೆ. ತಂದೆಯ ಕರ್ತವ್ಯಗಳನ್ನು ನಿರ್ವಹಿಸುವುದಷ್ಟೇ ಅಲ್ಲ ಅದಕ್ಕಿಂತ ತಂದೆಯಾಗಿ ಪ್ರಾಮಾಣಿಕವಾಗಿ ಪರಿಭಾವಿಸುವುದು ಹೆಚ್ಚಾಗಿ ಸದ್ಯದ ಅಗತ್ಯ. ಇದರಿಂದಾಗಿಯೇ ವಿಕಲಾಂಗನ ಜೊತೆ ಆಡುವ ಮಾತುಗಳು ಕಡಿಮೆ ಇದ್ದರೂ ಅವುಗಳ ಭಾವಲಯದಲ್ಲಿ ವಿವರಣೆಗೆ ಮೀರಿದ ಅಂಶ ಇರಬೇಕಾಗುತ್ತದೆ. ಇದಕ್ಕೆ ಅತ್ಯಂತ ಸಹಜವಾಗಿ ಅಪಾರ್ಥಕ್ಕೆ ಅವಕಾಶವಿಲ್ಲದಂತೆ ಒಳಮಾಡಿಕೊಳ್ಳುವ ಮನಸ್ಥಿತಿ ವಿಕಲಾಂಗನಿಗೆ ಇರುವುದೂ ಅಷ್ಟೇ ಅವಶ್ಯ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ