Advertisement

Category: ಸರಣಿ

ಆನೆಗಳ ಭಾವ ಪ್ರಪಂಚದ ಚಿತ್ರಗಳು

ಆನೆಗಳಿಗೆ ಕೈಗಳಿಲ್ಲದಿರಬಹುದು. ಆದರೆ, ಸೊಂಡಿಲು ಇದೆ. ನಾವು ಕೈಗಳಿಂದ ಮಾಡುವ ಎಷ್ಟೋ ಕಾರ್ಯಗಳನ್ನು ಆನೆಗಳು ತಮ್ಮ ಸೊಂಡಿಲ ಮೂಲಕ ಮಾಡುತ್ತವೆ. ಅವುಗಳಲ್ಲಿ ಚಿತ್ರರಚನೆಯೂ ಒಂದು. ಸರ್ಕಸ್‌ಗಳಲ್ಲಿ, ಯೂಟ್ಯೂಬ್ ವಿಡಿಯೋಗಳಲ್ಲಿ ಆನೆಗಳು ಪೇಂಟ್ ಬ್ರಶ್ ಹಿಡಿದು ಚಿತ್ರ ಬರೆಯುವುದನ್ನು ನಾವು ನೋಡಬಹುದು. ಆದರೆ, ಇದನ್ನು, ಬಹು ಮಟ್ಟಿಗೆ ಕಲಾ ಸೃಷ್ಟಿ ಎನ್ನಲಾಗದು. ಅದರಲ್ಲಿರುವುದು, ನಿರಂತರ ತರಬೇತಿನಿಂದ ನಿರ್ಮಿತವಾಗಿರುವ ಯಾಂತ್ರೀಕತೆ ಮಾತ್ರ. ‘ಇಂತಹ ಗೆರೆಗಳನ್ನೆಳೆದರೆ ಬಾಳೆಯ ಗೊನೆ ಸಿಗುತ್ತದೆ; ಇಲ್ಲದಿದ್ದರೆ, ಅಂಕುಶದಿಂದ ತಿವಿತ ಸಿಗುತ್ತದೆ’ ಎಂಬ ಪ್ರೋತ್ಸಾಹ-ಶಿಕ್ಷೆಗಳ ಪರಿಣಾಮವಷ್ಟೇ ಅದು.

Read More

ಪ್ರೇಮ ಮತ್ತು ವೇದನೆಯ ಸುತ್ತ ಸಾಗುವ ಆಸ್ಟ್ರಿಯಾದ ʻಅಮೋರ್ʼ ಚಿತ್ರ

ಆನ್‌ಳ ಆರೋಗ್ಯ ಹೆಚ್ಚು ಸೂಕ್ಷ್ಮವಾಗುವ ಹಂತ ಬೇಗನೇ ತಲುಪಿಬಿಡುತ್ತದೆ. ಚಿತ್ರದ ಬಹುಪಾಲು ಜಾರ್ಜ್‌ ಆನ್‌ಗೆ ಮಾಡುವ ಸೇವಾಕ್ರಿಯೆಗಳನ್ನು ವಿಸ್ತಾರವಾಗಿ ದಾಖಲಿಸುವುದನ್ನು ಮಾತ್ರ ಕಾಣುತ್ತೇವೆ. ತಿನಿಸುವುದು, ಕುಡಿಸುವುದು, ಹಾಸಿಗೆ, ಹೊದಿಕೆ ಸರಿಪಡಿಸುವುದು, ಡೈಪರ್‌ಗಳನ್ನು ಬದಲು ಮಾಡುವುದು, ಕಮೋಡ್‌ ಬಳಿಗೆ ಕರೆದೊಯ್ಯುವುದು ಮುಂತಾದವು. ಜಾರ್ಜ್ ಅವಳಿಗೆ ಆಹಾರ ತಿನ್ನಿಸುವ ಅಥವಾ ಕಮೋಡ್ ನಲ್ಲಿ ಕುಳಿತವಳನ್ನು ಎಬ್ಬಿಸಿ ತರುವುದೂ ಸೇರುತ್ತದೆ.

Read More

ಮರುಚಿಂತನೆಯ ಹೊರಪದರವೇ ಬದಲಾವಣೆ

ರಂಗಭೂಮಿಯಲ್ಲಿ ಪ್ರತಿಯೊಂದು ಅಂಗಗಳು ಒಂದೊಂದು ಮಜಲುಗಳಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಈ ಕ್ಷೇತ್ರದಲ್ಲಿ ಮರುಚಿಂತನೆಯ ಅಗತ್ಯವಿದೆ ಎನ್ನುವುದು ಒಪ್ಪತಕ್ಕ ಮಾತು. ಆದರೆ ಮರುಚಿಂತನೆಯ ಹೊಣೆಗಾರಿಕೆಯನ್ನು ಒಬ್ಬರು ಮತ್ತೊಬ್ಬರ ಹೆಗಲಿಗೆ ವರ್ಗಾಯಿಸುತ್ತ ಕೂರುವುದರಿಂದ ಪ್ರಯೋಜನವಿಲ್ಲ.  ಮೂರು ದೃಷ್ಟಿಕೋನಗಳ ನಿಟ್ಟಿನಲ್ಲಿ ಮರುಚಿಂತನೆಯ ಅಗತ್ಯವಿದೆ. ರಂಗನಟ, ರಂಗತಂಡ ಮತ್ತು ರಂಗಕರ್ಮಿಗಳ ದೃಷ್ಟಿಕೋನಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ. -ಪ್ರಭಾಕರ ರಾವ್ ಬರಹ ಇಲ್ಲಿದೆ.

Read More

ಪ್ರಾಣಿಲೋಕದ ಪ್ರೀತಿಸುಧೆಯ ನೆನಪುಗಳು

ನನ್ನ ತಂದೆ ಹಾವು ಹೊಡೆಯುವುದನ್ನು ಕೂಡ ಸಹಿಸಿಕೊಳ್ಳುತ್ತಿರಲಿಲ್ಲ. ಆದರೆ ಕಂದೂರಿ ಒಂದು ಶ್ರದ್ಧೆಯಾಗಿದ್ದರಿಂದ ಮನೆತನದಲ್ಲಿ ತಲೆತಲಾಂತರದಿಂದ ಬಂದ, ಅವರದೇ ನಂಬಿಕೆಯಿಂದ ಕೂಡಿದ ಧಾರ್ಮಿಕ ಕರ್ತವ್ಯ ನಿರ್ವಹಣೆಯನ್ನು ನಿಷ್ಠೆಯಿಂದ ಮಾಡುತ್ತಿದ್ದರು. ನನ್ನ ದಲಿತ ಮಿತ್ರ ತುಕಾರಾಮ ನನಗಿಂತ ಆರುವರ್ಷ ದೊಡ್ಡವರಿದ್ದರು. ನಾನು ನಾಲ್ಕನೆಯ ಇಯತ್ತೆ ಓದುವಾಗ ಅವರು ಮ್ಯಾಟ್ರಿಕ್ ಇದ್ದರು. ನಮ್ಮ ಮನೆಯ ಹತ್ತಿರದ ಹರಿಜನ ಬೋರ್ಡಿಂಗ್‌ನಲ್ಲಿ ಇದ್ದು ಓದುತ್ತಿದ್ದರು.

Read More

ನವೋದಯ ದೀಪಕ್ಕೆ ಎಣ್ಣೆ ಹೊಯ್ದ ಕವಿ

ಸೇಡಿಯಾಪು ಕೃಷ್ಣಭಟ್ಟರಿಗೆ ಮಂಗಳೂರಿನಲ್ಲಿ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಮಾರ್ಗದರ್ಶನ ಮತ್ತು ತರುಣ ಕವಿ ಕಡೆಂಗೊಂಡ್ಲು ಶಂಕರಭಟ್ಟರ ಗೆಳೆತನದ ಲಾಭವಾಯಿತು. ಅವರಿಬ್ಬರಿಂದ ಪ್ರೇರಣೆ ಪಡೆದು, ಮದ್ದಿನಂಗಡಿಯಲ್ಲಿ ಕುಳಿತೇ ಕನ್ನಡ – ಸಂಸ್ಕೃತ ಭಾಷೆಗಳನ್ನು ಖಾಸಗಿಯಾಗಿ ಅಧ್ಯಯನ ನಡೆಸಿ, ಮದರಾಸು ಸರ್ಕಾರ ನಡೆಸುತ್ತಿದ್ದ ‘ವಿದ್ವಾನ್’ ಪರೀಕ್ಷೆಯಲ್ಲಿ ಪಾಸಾದರು. ಆ ಪದವಿಯ ಬಲದಿಂದ 1929 ರಲ್ಲಿ ಸೈಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಸೇರಿಕೊಂಡು ಸುಮಾರು ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದರು.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ